21.1 C
Sidlaghatta
Thursday, July 31, 2025

ಸ್ವಯಂಸೇವಕರ ತರಬೇತಿ ಕಾರ್ಯಾಗಾರ

- Advertisement -
- Advertisement -

ಬಹುಸಂಖ್ಯಾತ ಅನಕ್ಷರಸ್ಥರಿಂದಾಗಿ ಗ್ರಾಮಗಳು ಹಿಂದುಳಿದಿವೆ. ದೇಶದ ಅಭಿವೃದ್ಧಿಯಲ್ಲಿ ಸಾಕ್ಷರತೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಂಭಿಗಾನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬಾಬು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಾರಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಲೋಕಶಿಕ್ಷಣ ನಿರ್ದೇಶನಾಲಯ, ಕುಂಭಿಗಾನಹಳ್ಳಿ ಗ್ರಾಮಪಂಚಾಯತಿಗಳ ಆಶ್ರಯದಲ್ಲಿ ಸಾಕ್ಷರಭಾರತ್ ಯೋಜನೆಯಡಿ ಹಮ್ಮಿಕೊಂಡಿದ್ದ ಸ್ವಯಂಸೇವಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಾಜರಿದ್ದ ಸ್ವಯಂಸೇವಕರು.
ಹಾಜರಿದ್ದ ಸ್ವಯಂಸೇವಕರು.
aಸಾಕ್ಷರಭಾರತ್ ತಾಲ್ಲೂಕು ಸಂಯೋಜಕ ಟಿ.ವಿ.ಶ್ರೀನಿವಾಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಲಿಕಾರ್ಥಿಗಳಿಗೆ ನೀಡಲಾಗುವ ಬಾಳಿಗೆ ಬೆಳಕು ಪ್ರಾಥಮಿಕೆಯನ್ನು ಬೋಧಿಸುವ ಸರಳವಿಧಾನಗಳನ್ನು ಈ ತರಬೇತಿ ವೇಳೆ ತಿಳಿಸಿಕೊಡಲಾಗುವುದು. ಕಲಿಕಾರ್ಥಿಗಳನ್ನು ಸಾಕ್ಷರರನ್ನಾಗಿಸುವಲ್ಲಿ ಸ್ವಯಂಸೇವಕರ ಪಾತ್ರ ಹಿರಿದು ಎಂದರು.
ಗ್ರಾಮಪಂಚಾಯತಿ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯ ರಾಮಸ್ವಾಮಿ, ಮುಖಂಡ ಚನ್ನರಾಯಪ್ಪ, ಎಸ್ಡಿಎಂಸಿ ಅಧ್ಯಕ್ಷ ಚನ್ನಕೃಷ್ಣಪ್ಪ, ಮುಖ್ಯತರಬೇತುದಾರ ರಮೇಶ್ಕುಮಾರ್, ಜೆ.ಬಿ.ಅಶೋಕ್ಕುಮಾರ್, ಎಚ್.ಎಸ್.ರುದ್ರೇಶಮೂರ್ತಿ, ಪ್ರೇರಕಿ ಅನುಷಾ, ಕೆ.ಎಂ.ಬೇಬಿ ಮತ್ತಿತರರು ಇದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!