22.5 C
Sidlaghatta
Thursday, July 31, 2025

ಹಣದ ಹಂಚಿಕೆಯಲ್ಲಿ ತಾರತಮ್ಯ, ಕೆ.ಎಚ್.ಮುನಿಯಪ್ಪ ಅವರನ್ನು ಆಕ್ಷೇಪಿಸಿದ ಮುಖಂಡರು

- Advertisement -
- Advertisement -

ನಗರದಲ್ಲಿ ಸೋಮವಾರ ದಿಬ್ಬೂರಹಳ್ಳಿ ರಸ್ತೆಯಲ್ಲಿ ಇರುವ ಅಮೀರ್ ಬಾಬಾ ದರ್ಗಾಗೆ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ವಿ.ಮುನಿಯಪ್ಪ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಅಲ್ಪಸಂಖ್ಯಾತ ಮುಸ್ಲೀಂ ಮುಖಂಡರು ಹಾಗೂ ನಗರ ಸಭಾ ಸದಸ್ಯರು ತಮ್ಮನ್ನು ಕಡೆಗಣಿಸಿದ್ದೀರೆಂದು ಕೆ.ಎಚ್.ಮುನಿಯಪ್ಪ ಅವರನ್ನು ಅಲ್ಪಸಂಖ್ಯಾತ ಮುಖಂಡರು ಆರೋಪಿಸಿದರು.
“ಪ್ರತಿ ಬೂತ್ ಗೂ ಪ್ರತಿಯೊಂದು ಪಂಚಾಯಿತಿಗೂ ಹಣ ಹೋಗಿದೆ. ನೆನ್ನೆ ಮೊನ್ನೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಪಕ್ಷದವರಿಗೆ ಹಣ ನೀಡಿದ್ದೀರಿ. ಅಲ್ಪಸಂಖ್ಯಾತ ಮುಸ್ಲೀಮರನ್ನು ಯಾಕೆ ಕಡೆಗಣಿಸಿದ್ದೀರಿ” ಎಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಅಲ್ಪಸಂಖ್ಯಾತ ಮುಖಂಡರು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿರುವ ನಮಗಿಂತೆ ನಿಮಗೆ ಜೆಡಿಎಸ್ ನವರೇ ಮುಖ್ಯರಾಗಿಬಿಟ್ಟರೆ ಹೇಗೆ. ನಿಷ್ಠಾವಂತ ಕಾರ್ಯಕರ್ತರನ್ನು ಏಕೆ ಕಡೆಗಣನೆ ಮಾಡಿದಿರಿ. ಜೆಡಿಎಸ್ ಪಕ್ಷದ ಮುಖಂಡರಿಗೆ ಈಗಾಗಲೇ ಹಣ ನೀಡಿದ್ದು, ಇದುವರೆಗೂ ಮೂಲ ಕಾಂಗ್ರೆಸಿಗರಿಗೆ ಹಾಗೂ ಪಕ್ಷವನ್ನು ಕಟ್ಟಿ ಬೆಳೆಸಿದ ಅಲ್ಪಸಂಖ್ಯಾತ ಮುಖಂಡರಿಗೆ ಒಂದು ಬೀಡಿಕಾಸನ್ನು ಸಹ ನೀಡಿಲ್ಲ ಎಂದು ಶಾಸಕ ವಿ.ಮುನಿಯಪ್ಪರವರ ಸಮ್ಮುಖದಲ್ಲಿ ಮುಂದೆ ನೇರವಾಗಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಹಣದ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ವಿ.ಮುನಿಯಪ್ಪ ಮಾತನಾಡಿ, ೩೫ ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳಸಿದ ನಿಷ್ಟವಂತ ಕಾಂಗ್ರೆಸಿಗರನ್ನು ಕಡೆಗಣಿಸುವುದು ಸರಿಯಲ್ಲ ಎಂದು ನಾನು ಈಗಾಗಲೇ ಕೆ.ಎಚ್.ಮುನಿಯಪ್ಪನವರಿಗೆ ಹೇಳಿದ್ದೇನೆ. ನೆನ್ನೆಮೊನ್ನೆಗೆ ಮೈತ್ರಿ ಮಾಡಿಕೊಂಡು ಬಂದಿರುವಂತಹ ಜೆಡಿಎಸ್ ಪಕ್ಷದ ಮುಖಂಡರೊಂದಿಗೆ ಕೈಜೊಡಿಸಿಕೊಂಡು ಅವರನ್ನು ಒಲೈಸುತ್ತಾ ಹಣ ನೀಡುತ್ತಾ ನಮ್ಮ ಕಾರ್ಯಕರ್ತರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಕೆ.ಎಚ್.ಮುನಿಯಪ್ಪರವರಿಗೆ ಹೇಳಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಖಂಡರು ಹಾಗೂ ನಗರ ಸಭಾ ಸದಸ್ಯರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!