Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿ.ಎಂ. ಶಿವಾನಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿದ್ದ ಜಿ.ವಿ. ಸುರೇಶ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಿವಾನಂದ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಮಂಜುನಾಥ್ ಅವರು ಆಯ್ಕೆಯನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ಸಿ. ವೆಂಕಟೇಶಪ್ಪ ಮಾತನಾಡಿ, ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆ ದೊರಕುವಂತೆ ನೋಡಿಕೊಳ್ಳುವುದು, ಸರ್ಕಾರದ ಅನುದಾನಗಳನ್ನು ಸಮರ್ಪಕವಾಗಿ ತಲುಪಿಸುವುದು ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಜಿ.ಎಂ. ಮುತ್ತೇಗೌಡ, ನಿರ್ದೇಶಕರಾದ ಕರಗಪ್ಪ, ಜಿ.ವಿ. ಸುರೇಶ್, ಜಿ.ಎಂ. ನಾಗರಾಜ್, ಅಶ್ವಥಪ್ಪ, ಜಿ.ಕೆ. ಶಿವಾನಂದ, ಯಶೋಧಮ್ಮ, ದಿಲೀಪ್ ಕುಮಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಸಿ. ಬೈರೇಗೌಡ, ಸಿಬ್ಬಂದಿ ಅಂಬರೀಶ್, ಮುನಿಬಚ್ಚಪ್ಪ ಹಾಗೂ ಮುಖಂಡ ಜಿ.ವಿ. ದೇವರಾಜ್ ಉಪಸ್ಥಿತರಿದ್ದರು. ಇದೇ ರೀತಿ ಇತ್ತೀಚೆಗೆ ಮಳಮಾಚನಹಳ್ಳಿ ಡೇರಿಯಲ್ಲಿಯೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿತ್ತು.
In English: G.M. Shivananda has been elected unopposed as the new president of Gangenahalli Milk Producers Cooperative Society in Sidlaghatta taluk, filling the vacancy left by G.V. Suresh’s resignation. Returning officer Manjunath declared the result after Shivananda was the sole nomination received.








