24.1 C
Sidlaghatta
Tuesday, December 2, 2025

ಸರ್ಕಾರಿ ನೌಕರರ ಸಂಘ ಚುನಾವಣೆ: 4 ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

- Advertisement -
- Advertisement -

Sidlaghatta : ರ್ಕಾರಿ ನೌಕರರ ಸಂಘದ ತಾಲ್ಲೂಕು ಮತ್ತು ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣೆಗೆ ನಾಮಪತ್ರಗಳನ್ನು ವಾಪಸ್ ಪಡೆಯಲು ಸೋಮವಾರದಂದು ಕೊನೆಯ ದಿನವಾಗಿದ್ದು, 30 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರು ನಾಲ್ಕನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲಾ ಇಲಾಖೆಯಿಂದ ಆಯ್ಕೆಯಾಗಬೇಕಾಗಿದ್ದ 3 ಸ್ಥಾನಗಳಿಗೆ ಈ ಹಿಂದೆ 10 ಮಂದಿ ನಾಮಪತ್ರ ಸಲ್ಲಿಸಿದ್ದು ಆ ಪೈಕಿ ಸೋಮವಾರದಂದು ಇಬ್ಬರು ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆದರು.

3 ಸ್ಥಾನಗಳಿಗೆ ಇನ್ನೂ 8 ಮಂದಿ ಅಂತಿಮ ಕಣದಲ್ಲಿ ಉಳಿದಿದ್ದು, ಇದೇ ತಿಂಗಳ 28 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ, ನಂತರ ಅಂದೇ ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಾಗಲಿದೆ.

ಮತದಾನ ಮಾಡಲು ಸರ್ಕಾರಿ ಶಾಲಾ ಶಿಕ್ಷಕ ಮತದಾರರಿಗೆ ವಿಶೇಷ ಅನುಮತಿ ನೀಡಿದೆ ಎಂದು ಚುನಾವಣಾಧಿಕಾರಿ ಬೈರಾರೆಡ್ಡಿ ತಿಳಿಸಿದ್ದಾರೆ.

ಈ ಹಿಂದಿನ ಎರಡು ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಕೆ.ಎನ್ ಸುಬ್ಬಾರೆಡ್ಡಿ ಅವರು ನಾಲ್ಕನೇ ಬಾರಿಗೆ ಪುನರಾಯ್ಕೆಯಾಗಿದ್ದು, 22 ಇಲಾಖಾ ಮತಕ್ಷೇತ್ರಗಳ 30 ಸ್ಥಾನಗಳಿಗೆ ಕೇವಲ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದುದರಿಂದ ಆ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಬೈರಾರೆಡ್ಡಿ ಘೋಷಿಸಿದ್ದಾರೆ.

ಮೀನುಗಾರಿಕೆ, ಪಿಎಂ ಪೋಷಣ್ ಅಭಿಯಾನ್ ಮತಕ್ಷೇತ್ರದಿಂದ ಕೆ.ಎನ್.ಸುಬ್ಬಾರೆಡ್ಡಿ, ಕೃಷಿ ಇಲಾಖೆಯಿಂದ ರವಿ.ಪಿ.ಆರ್, ಪಶುಪಾಲನಾ ಇಲಾಖೆಯಿಂದ ಡಾ.ಶ್ರೀನಾಥರೆಡ್ಡಿ, ಕಂದಾಯ ಇಲಾಖೆಯಿಂದ ಚಂದ್ರಶೇಖರ್.ಎಸ್ ಮತ್ತು ಶಶಿಧರ್, ಬಿ.ಸಿ, ಲೋಕೋಪಯೋಗಿ,

ಜಲಸಂಪನ್ಮೂಲ, ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಜಿ.ಪದ್ಮಾವತಮ್ಮ, ಪಂಚಾಯತ್ ರಾಜ್ ಎಂಜಿನಿಯರಿಂಗ್, ಪಿಎಂಜಿಎಸ್‌ವೈ, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಿಂದ ಟಿಪ್ಪುಸುಲ್ತಾನ್, ಪ್ರೌಢಶಿಕ್ಷಣ ಇಲಾಖೆಯಿಂದ ಬೈರಾರೆಡ್ಡಿ, ವಿ, ಹರೀಶ್‌ಬಾಬು,ಸಿ.ಕೆ, ಸಾರ್ವಾಜನಿಕ ಶಿಕ್ಷಣ ಇಲಾಖೆಯ ಕಚೇರಿ ಮತಕ್ಷೇತ್ರದಿಂದ ಮಧುಸೂಧನ್,ಆರ್, ಪಪೂ/ಪದವಿ ಕಾಲೇಜು ಕಡೆಯಿಂದ ಸಿ.ವೆಂಕಟಶಿವಾರೆಡ್ಡಿ, ಸಮಾಜಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ ಜಗದೀಶ್,ಎಚ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅರಣ್ಯ ಇಲಾಖೆಯಿಂದ ಎಸ್.ಎನ್.ಜಯಚಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಟಿ.ಟಿ.ನರಸಿಂಹಪ್ಪ, ಎಂ.ಎಸ್.ದೇವರಾಜು, ಲಲಿತಮ್ಮ, ರಹಮತ್ ಉಲ್ಲಾ, ಡಿ.ಎಸ್,ಅಕ್ಕಲರೆಡ್ಡಿ.ಎಸ್.ಎಂ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ಮಂಜುಳಾ.ಪಿ, ತಿಮ್ಮರಾಜು.ಕೆ, ಖಜಾನೆ ಇಲಾಖೆಯಿಂದ ಕಿರಣ್‌ಕುಮಾರ್,ಜೆ.ಎ, ಭೂದಾಖಲೆಗಳ ಕಚೇರಿ, ಭೂಮಾಪನ, ಕಂದಾಯವ್ಯವಸ್ಥೆಯಿಂದ ವಸಂತಕುಮಾರ್,ಜಿ.ಡಿ, ನ್ಯಾಯಾಂಗಇಲಾಖೆಯಿಂದ ರಘುನಂದನ್.ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನಿಂದ ಕಾತ್ಯಾಯಿನಿ,ಎಂ.ಕೆ, ಅಶ್ವತ್ಥಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿದ್ಯಾ ಎ.ವಸ್ತ್ರದ, ಆಹಾರ ಮತ್ತು ನಾಗರೀಕ ಸರಬರಾಜು, ಕಾರ್ಮಿಕಇಲಾಖೆ, ಎಪಿಎಂಸಿಯಿಂದ ವಿಜಯಲಕ್ಷ್ಮಿ, ಅಬಕಾರಿ ಇಲಾಖೆಯಿಂದ ನಿತಿನ್.ಎ, ನಗರಾಭಿವೃದ್ಧಿ, ಪೌರಾಡಳಿತ, ಕೈಗಾರಿಕಾ ತರಬೇತಿ ಸಂಸ್ಥೆ ಕಡೆಯಿಂದ ಮಂಜುನಾಥ್.ಎಂ, ಸಹಕಾರ/ಸಹಕಾರ ಸಂಘ ಲೆಕ್ಕ ಪರಿಶೋಧನೆ, ಸಾಂಖ್ಯಿಕ ಇಲಾಖೆಯಿಂದ ಎಂ.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಣದಲ್ಲಿ 8 ಮಂದಿ:

ಪ್ರಾಥಮಿಕ ಶಾಲಾ ಶಿಕ್ಷಕರ ಮತಕ್ಷೇತ್ರದಿಂದ 3 ಸ್ಥಾನಗಳಿಗೆ 8 ಮಂದಿ ಕಣದಲ್ಲಿದ್ದಾರೆ. ಶಿಕ್ಷಕ ಅಶ್ವತ್ಥಕುಮಾರ.ಎಸ್.ಎಂ, ಕೆಂಪೇಗೌಡ,ಎಂ, ಗೋವಿಂದ.ವಿ, ನರಸಿಂಹರೆಡ್ಡಿ, ಮುಜಾಫೀರ್.ಎಸ್, ಮೋಹನ್.ಎಚ್.ಸಿ, ಮಂಜುನಾಥ ಎಂ.ಮೇಲೂರು, ಸುರೇಶ್‌ಬಾಬು.ಎಸ್ ಚುನಾವಣೆ ಎದುರಿಸಲಿದ್ದಾರೆ.

ಮನೋವೃತ್ತಿ ಶ್ರೇಷ್ಟವಾದುದು:

ಇದೇ ವೇಳೆ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ಎನ್.ಸುಬ್ಬಾರೆಡ್ಡಿ ಅವರು ಮಾತನಾಡಿ, ಮೊದಲು ಒಂದು ಅವಧಿಯಲ್ಲಿ ಕಾರ್ಯಕಾರಿ ಮಂಡಳಿಯಲ್ಲಿದ್ದು, ನಂತರದ ಎರಡು ಅವಧಿಯಲ್ಲಿ ಅಧ್ಯಕ್ಷರಾಗಿ ಸರ್ಕಾರಿ ಎಲ್ಲಾ ಇಲಾಖೆಗಳ ನೌಕರರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ತಾಲ್ಲೂಕಿನಲ್ಲಿ ಯಾವುದೇ ಸಮಸ್ಯೆಯಿಲ್ಲ. ಹಿಂದಿನ ಅವಧಿಯಲ್ಲಿ ಉತ್ತಮ ಕಾರ್ಯಗಳಾಗಲು ಸಹಕರಿಸಿದ ಎಲ್ಲಾ ನೌಕರರ ಮನೋವೃತ್ತಿ ಶ್ರೇಷ್ಟವಾದುದು.

ಇಲ್ಲಿನವರೆಗೆ ಪ್ರತಿತಿಂಗಳೂ ನೌಕರರ ವೇತನವು ಸರಿಯಾದ ಸಮಯಕ್ಕೆ ಆಗಿದ್ದು ವೈದ್ಯಕೀಯ ವೆಚ್ಚ ಮರುಪಾವತಿ, ಬಡ್ತಿ, ವೇತನದಲ್ಲಾಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ಸಂಘವು ಉತ್ತಮ ಕಾರ್ಯ ನಿರ್ವಹಿಸಿದೆ.

ಇದೀಗ ಮತ್ತೊಂದು ಅವಧಿಗೆ ನಾಲ್ಕನೇ ಬಾರಿಗೆ ಪುನರಾಯ್ಕೆ ಮಾಡಿದ್ದು, ನೌಕರರ ಸಹಕಾರದಿಂದ ತಾಲ್ಲೂಕಿನಲ್ಲಿ ನೌಕರರ ಭವನ, ಗುರುಭವನ, ಮತ್ತಿತರ ಭವನಗಳ ನಿರ್ಮಾಣವಾಗಬೇಕಿದೆ. 2024-29 ರ ಈ ಅವಧಿಯಲ್ಲಿ ಅವೆಲ್ಲವೂ ಕೈಗೂಡಬಹುದಾಗಿದೆ ಎಂದು ತಿಳಿಸಿದರು.

30 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು, ನೌಕರರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಅಭಿನಂದನೆ:

ಅವಿರೋಧವಾಗಿ ಅಯ್ಕೆಯಾದ ಎಲ್ಲಾ ನಿರ್ದೇಶಕರನ್ನು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಪ್ರಧಾನಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಉಪಾಧ್ಯಕ್ಷ ಎಂ.ಕೆ.ಸಿದ್ಧರಾಜು, ಖಜಾಂಚಿ ಹೇಮಾವತಿ, ಸಹಕಾರ್ಯದರ್ಶಿ ಎಂ.ಶಿವಕುಮಾರ್ ಅಭಿನಂದಿಸಿದ್ದಾರೆ.

For Daily Updates WhatsApp ‘HI’ to 7406303366

Namma Sidlaghatta WhatsApp Channel

Namma Sidlaghatta Telegram channel

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!