Home News ಮುತ್ತೂರಿನ ಜಲಕಂಠೇಶ್ವರ ದೇವಾಲಯದ ಆವರಣದಲ್ಲಿ ನವಗ್ರಹ ವನ

ಮುತ್ತೂರಿನ ಜಲಕಂಠೇಶ್ವರ ದೇವಾಲಯದ ಆವರಣದಲ್ಲಿ ನವಗ್ರಹ ವನ

0
Sidlaghatta Muttur Jalakanteshwara Temple Reforest India Trust

ತಾಲ್ಲೂಕಿನ ಮುತ್ತೂರು ಗ್ರಾಮದ ಪುರಾತನ ಜಲಕಂಠೇಶ್ವರ ದೇವಾಲಯದ ಮುಂದೆ ನವಗ್ರಹ ವನದಲ್ಲಿ ಗಿಡಗಳನ್ನು ನೆಟ್ಟು ಬೆಂಗಳೂರಿನ ರೀಫಾರೆಸ್ಟ್ ಇಂಡಿಯಾ ಟ್ರಸ್ಟ್ ಸಂಚಾಲಕಿ ಉಷಾಶೆಟ್ಟಿ ಮಾತನಾಡಿದರು.

ಸಂಸ್ಥೆಯ ನೆರವಿನಿಂದ ನವಗ್ರಹ ವನಕ್ಕೆ ಬೇಕಾದ ಗಿಡಗಳನ್ನು ಪಡೆದು ಜಲಕಂಠೇಶ್ವರ ದೇವಾಲಯದ ಮುಂದೆ ನೆಡುತ್ತಿದ್ದು, ಅತ್ಯುತ್ತಮ ನವಗ್ರಹವನವನ್ನು ಮಾಡುತ್ತಿರುವುದಾಗಿ ಗ್ರಾಮಾಂತರ ಅವರು ತಿಳಿಸಿದರು.

 ಮುತ್ತೂರು ಗ್ರಾಮದ ಪುರಾತನ ಜಲಕಂಠೇಶ್ವರ ದೇವಾಲಯದ ಮೂರ್ತಿಗಳನ್ನು 17 ನೇ ಶತಮಾನದಲ್ಲಿ ಸೊಣ್ಣಬೈರೇಗೌಡರು ಪ್ರತಿಷ್ಠಾಪಿಸಿರುವರೆಂದು ಹಿರಿಯರು ಹೇಳುತ್ತಾರೆ. ಈ ಪುರಾತನ ದೇವಸ್ಥಾನವನ್ನು ಎರದು ವರ್ಷಗಳ ಹಿಂದೆ ನವೀಕರಣಗೊಳಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ನವಗ್ರಹ ವನವನ್ನು ರೂಪಿಸುವ ಉದ್ದೇಶದಿಂದ ಸೂಕ್ತ ಸ್ಥಳಗಳಲ್ಲಿ ಸೂಕ್ತವಾದ ಗಿಡಗಳನ್ನು ನೆಡುತ್ತಿರುವುದಾಗಿ ಹೇಳಿದರು.

 ಗ್ರಾಮದ ನಾರಾಯಣಮೂರ್ತಿ, ವೆಂಕಟೇಶಮೂರ್ತಿ, ಎಂ.ಎಲ್.ರಾಜಣ್ಣ, ಶಿವಕುಮಾರ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version