Sidlaghatta : ಇನ್ಫೋಸಿಸ್ ಸಂಸ್ಥಾಪಕರಾದ ಎನ್.ಆರ್. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ತಮ್ಮ ಜನ್ಮಸ್ಥಳವಾದ ಶಿಡ್ಲಘಟ್ಟದಲ್ಲಿ ಸೋಮವಾರ (ಜೂನ್ 1, 2026) ಅಕ್ಷಯ ಪಾತ್ರೆ ಫೌಂಡೇಶನ್ನ 81ನೇ ಶಾಖೆಯನ್ನು ಉದ್ಘಾಟಿಸಿದರು. ಈ ಮೂಲಕ ತಾಲೂಕಿನ ಸರ್ಕಾರಿ ಶಾಲೆಯ 3,000 ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಾರಾಯಣ ಮೂರ್ತಿ ಅವರ ತಾಯಿ ಮತ್ತು ಸೋದರ ಮಾವನವರ ಸ್ಮರಣಾರ್ಥವಾಗಿ ಈ ವಿಶೇಷ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.








