20.9 C
Sidlaghatta
Saturday, October 11, 2025

ಜಾತಿ ಕಲಂನಲ್ಲಿ “ಕುರುಬ”, ಕುಲ ಕಸುಬು ಕಾಲಂನಲ್ಲಿ ಕುರಿ ಮೇಯಿಸುವುದು ಎಂದು ಬರೆಸಲು ಮನವಿ

- Advertisement -
- Advertisement -

Sidlaghatta : ರಾಜ್ಯ ಸರ್ಕಾರವು ಕೈಗೊಂಡಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಗಣತಿದಾರರು ತಮ್ಮ ಬಳಿ ಬಂದಾಗ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಕುರುಬ ಎಂದಷ್ಟೆ ಬರೆಸಿ ಎಂದು ಶಿಡ್ಲಘಟ್ಟ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಮಂಜುನಾಥ್ ಸಮುದಾಯದವರಲ್ಲಿ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಕುರುಬರನ್ನು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಕರೆಯುತ್ತಾರೆ. ಹಾಲು ಮತಸ್ತರು, ಹಳೆ ಕುರುಬ, ಹೊಸ ಕುರುಬ, ಜೇಣು ಕುರುಬ, ಗೊಂಡ, ಕುರುಬ ಗೌಡ್ರು, ಕಾಡು ಕುರುಬ ಎಂಬಿತ್ಯಾದಿ ಹೆಸರುಗಳಲ್ಲಿ ಸಂಬೋಧಿಸುತ್ತಾರೆ.

ಆದರೆ ಸಮೀಕ್ಷೆ ಸಮಯದಲ್ಲಿ ಧರ್ಮ ಹಿಂದೂ ಧರ್ಮವೆಂದು, ಜಾತಿ ಕಲಂನದಲ್ಲಿ “ಕುರುಬ” ಎಂದು ಮಾತ್ರ ಬರೆಸಿ, ಉಪ ಜಾತಿ ಕಲಂನಲ್ಲೂ ಕುರುಬ ಎಂದು ಮಾತ್ರವೇ ನಮೂದಿಸಿ. ಕುಲ ಕಸುಬು ಕಲಂನಲ್ಲಿ ಕುರಿ ಮೇಕೆ ಮೇಯಿಸುವುದು ಎಂದು ಬರೆಸಿ ಎಂದು ಮನವಿ ಮಾಡಿದರು.

ಮಿಕ್ಕಂತೆ ನಿಮ್ಮ ಶೈಕ್ಷಣಿಕ ಅರ್ಹತೆ, ಉದ್ಯೋಗ, ಆದಾಯ ಇನ್ನಿತರೆ ವಿಷಯಗಳ ಕಲಂನಲ್ಲಿ ವಾಸ್ತವ ವಿಚಾರವನ್ನು ನಮೂದಿಸಿ ಎಂದು ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಎಂ.ರಾಮಾಂಜಿನಪ್ಪ, ಉಪಾಧ್ಯಕ್ಷ ವೀರಾಪುರ ರಾಮಣ್ಣ, ಮುತ್ತುಕದಹಳ್ಳಿ ಮುನೇಗೌಡ, ಸುಬ್ರಮಣಿ(ಸುಬ್ಬು), ಮಂಜುನಾಥ್ ಹಾಜರಿದ್ದರು.

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!