Home News ನಿಷೇಧಿತ ಗಾಂಜಾ ಸೊಪ್ಪಿನ ಗಿಡ ಬೆಳೆದಿದ್ದ ರೈತನ ಬಂಧನ

ನಿಷೇಧಿತ ಗಾಂಜಾ ಸೊಪ್ಪಿನ ಗಿಡ ಬೆಳೆದಿದ್ದ ರೈತನ ಬಂಧನ

0

Tummanahalli, Sidlaghatta : ನಿಷೇಧಿತ ಗಾಂಜಾ ಸೊಪ್ಪಿನ ಗಿಡವನ್ನು ಬೆಳೆದಿದ್ದ ಮಾಹಿತಿಯನ್ನು ಖಚಿತಪಡಿಸಿಕೊಂಡ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಪೊಲೀಸರು ಗಾಂಜಾ ಸೊಪ್ಪಿನ ಗಿಡವನ್ನು ವಶಪಡಿಸಿಕೊಂಡು ಗಾಂಜಾ ಸೊಪ್ಪನ್ನು ಬೆಳೆದಿದ್ದ ರೈತನ್ನು ದಸ್ತಗಿರಿ ಮಾಡಿರುವ ಪ್ರಕರಣದಾಖಲಿಸಿದ್ದಾರೆ.

ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಗುಡ್ಲನರಸಿಂಹನಹಳ್ಳಿಯ ರೈತ ನರಸೇಗೌಡ ಅವರು ತಮ್ಮ ತೋಟದಲ್ಲಿ ಗಾಂಜಾಸೊಪ್ಪಿನ ಗಿಡವನ್ನು ತಮ್ಮ ತೋಟದಲ್ಲಿ ಬೆಳೆದಿದ್ದರು.

ಡಿವೈಎಸ್ಪಿ ಮುರಳೀಧರ್, ಎಸ್‌.ಐ ಸತೀಶ್, ಪೇದೆಗಳಾದ ಸುಧಾಕರ್, ವೆಂಕಟೇಶ್, ಕಂದಾಯ ಇಲಾಖೆಯ ಶಿಶಧರ್, ಯಶಸ್ವಿನಿಇನ್ನಿತರರು ದಾಳಿ ನಡೆಸಿ ಸುಮಾರು ಹತ್ತು ಕೆಜಿಯಷ್ಟು ಗಾಂಜಾ ಸೊಪ್ಪಿನ ಗಿಡವನ್ನು ಹಾಗೂ ರೈತ ನರಸೇಗೌಡ ಅವರನ್ನು ವಶಕ್ಕೆಪಡೆದಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version