20.1 C
Sidlaghatta
Wednesday, January 14, 2026

ಎಚ್.ಕ್ರಾಸ್ ನಲ್ಲಿ ಕನ್ನಡ ರಾಜ್ಯೋತ್ಸವ

- Advertisement -
- Advertisement -

Sidlaghatta, chikkaballapur : ನಾವು ನಮ್ಮ ಮನೆ, ವ್ಯವಹಾರ, ಕೆಲಸ ಕಾರ್ಯಗಳ ಸ್ಥಳದಲ್ಲೇ ಕನ್ನಡವನ್ನು ಮಾತನಾಡುವ, ಕನ್ನಡದಲ್ಲೇ ಬರೆಯುವ ಮತ್ತು ವ್ಯವಹರಿಸುವ ಕೆಲಸ ಮಾಡಬೇಕು. ನಮ್ಮ ಮಾತೃ ಭಾಷೆ ಕನ್ನಡದ ಮೇಲೆ ಅಭಿಮಾನ ಇರದಿದ್ದಲ್ಲಿ ಮುಂದೊಂದು ದಿನ ನಮ್ಮ ನೆಲದಲ್ಲೇ ನಾವು ಪರಕೀಯರಾಗಬೇಕಾಗುತ್ತದೆ ಎಂದು ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರ್‌ಗೌಡ ತಿಳಿಸಿದರು.

ತಾಲ್ಲೂಕಿನ ಎಚ್.ಕ್ರಾಸ್(ಕುಂಭಿಗಾನಹಳ್ಳಿ)ಯಲ್ಲಿ ಹಮ್ಮಿಕೊಂಡಿದ್ದ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

ನಾವು ಕನ್ನಡ ಮಾತನಾಡೋಣ, ಬರೆಯೋಣ, ವ್ಯವಹರಿಸೋಣ. ಹಾಗೆಯೆ ನಮ್ಮಲ್ಲಿ ಇರುವ ಅನ್ಯ ಭಾಷಿಕರಿಗೂ ಕನ್ನಡ ಕಲಿಸುವ ವಾತಾವರಣ ನಿರ್ಮಿಸೋಣ ಎಂದರು.

ಆದರೆ ನಮ್ಮಲ್ಲಿ ಇತರೆ ಭಾಷೆಯವರು ಮಾತನಾಡುವುದಕ್ಕೂ ಮುನ್ನವೇ ನಾವೇ ಅವರ ಭಾಷೆಯಲ್ಲಿ ಮಾತನಾಡುವ ಪ್ರಯತ್ನ ಮಾಡುವುದರಿಂದ ಅನ್ಯ ಭಾಷಿಕರು ಕನ್ನಡ ಕಲಿಯುವಂತ ಪ್ರಯತ್ನವೇ ಮಾಡಲು ಹೋಗುವುದಿಲ್ಲ. ಇದು ನಮ್ಮ ದೌರ್ಭಾಗ್ಯ ಎಂದರು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೈ ಮುಗಿದು ಪುಷ್ಪ ನಮನ ಸಲ್ಲಿಸಲಾಯಿತು. ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು. ಎಲ್ಲರಿಗೂ ಸಿಹಿ ಹಂಚಿ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಗಾರುಡಿ ಗೊಂಬೆ, ಕೀಲು ಕುದುರೆ, ಕರಡಿ ವೇಷಗಳೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಎಂ.ಮಂಜುನಾಥ್, ಅಂಬರೀಷ್, ಮುನೇಗೌಡ, ಬಿಜೆಪಿ ಮಂಜುಮ ಸಿ.ಎಂ.ನಾರಾಯಣಸ್ವಾಮಿ, ನಾಗಣ್ಣ, ರೈತ ಸಂಘದ ದೇವರಾಜಪ್ಪ, ಮಿಲ್ಟ್ರಿ ಮಂಜು, ಪ್ರದೀಪ್, ದೀಪು, ಮಧು, ಕೆ.ಎಸ್.ಸಿದ್ದಲಿಂಗಪ್ಪ, ಕಾಳನಾಯಕನಹಳ್ಳಿ ಮಂಜಯ್ಯ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!