20.8 C
Sidlaghatta
Saturday, October 11, 2025

ಜಂಗಮಕೋಟೆ ಕ್ರಾಸ್‌ನಲ್ಲಿ ಮೂಲಸೌಕರ್ಯದ ಕೊರತೆ – ಸ್ಥಳೀಯರಿಂದ ತ್ವರಿತ ಕ್ರಮಕ್ಕೆ ಆಗ್ರಹ

- Advertisement -
- Advertisement -

Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿ ಜನತೆಗೆ ಅಗತ್ಯವಿರುವ ಮೂಲ ಸೌಕರ್ಯಗಳ ಕೊರತೆಯಿರುವ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆಡಳಿತ ಯಂತ್ರವು ತಕ್ಷಣ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೋಲಾರ, ವಿಜಯಪುರ, ಶಿಡ್ಲಘಟ್ಟ, ಹೊಸಕೋಟೆ ಭಾಗಗಳ ಸಂಪರ್ಕ ಕೇಂದ್ರವಾಗಿರುವ ಈ ಪ್ರದೇಶದಲ್ಲಿ ನಿತ್ಯ ಪ್ರಯಾಣಿಸುವವರು ಬಸ್ಸುಗಳಿಗಾಗಿ ತಂಗುವ ವ್ಯವಸ್ಥೆಯಿಲ್ಲದೆ ಕಷ್ಟಪಡುವ ಸ್ಥಿತಿ ಎದುರಿಸುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಬಿಸಿಲು ಮತ್ತು ಮಳೆಯಲ್ಲಿ ರಸ್ತೆಯ ಪಕ್ಕ ನಿಂತು ಬಸ್ಸಿಗಾಗಿ ಕಾಯಬೇಕಾಗಿದೆ.

ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದು, ಬಸ್ಸುಗಳು ನೇರವಾಗಿ ರಸ್ತೆಯಲ್ಲೇ ನಿಲ್ಲುವುದರಿಂದ ವಾಹನಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ. ಪೊಲೀಸರು ಇಲ್ಲದ ಪರಿಸ್ಥಿತಿ ಮತ್ತು ಸಿಸಿಟಿವಿಗಳ ನಿಷ್ಕ್ರಿಯತೆ ಭದ್ರತೆಗೆ ಆಘಾತ ತಂದಿದೆ. ಹೈಮಾಸ್ಟ್ ದೀಪದ ತಡೆಗೋಡೆಗಳು ಹಾಳಾಗಿದ್ದು, ಗಾಳಿಯಲ್ಲಿ ದೀಪಗಳು ಅಲುಗಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದು ಪ್ರಮುಖ ವಾಣಿಜ್ಯ ವೃತ್ತವಾಗಿರುವುದರಿಂದ, ರಾತ್ರಿ ಸಮಯದಲ್ಲಿ ರಸ್ತೆಯುದ್ದಕ್ಕೂ ಉಜ್ವಲ ಬೆಳಕು ಹರಡುವಂತಹ ಬೀದಿದೀಪಗಳನ್ನು ಅಳವಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕೆಲ ದೀಪಗಳು ಕೆಲಸ ಮಾಡುತ್ತಿಲ್ಲ ಎಂದು ಅವರು ಗಮನಹರಿಸಿದ್ದಾರೆ.

ಮುಖ್ಯ ಬೇಡಿಕೆಗಳು:

  • ನಾಲ್ಕು ದಿಕ್ಕುಗಳಿಂದ ಬರುವ ಬಸ್ಸುಗಳಿಗಾಗಿ ತಂಗುದಾಣಗಳ ನಿರ್ಮಾಣ
  • ಶೌಚಾಲಯ ಹಾಗೂ ಮಹಿಳಾ ವಿಶ್ರಾಂತಿ ಗೃಹಗಳ ವ್ಯವಸ್ಥೆ
  • ಕುಡಿಯುವ ನೀರಿನ ಸೌಲಭ್ಯ
  • ಸಿಸಿಟಿವಿ ಕ್ಯಾಮರ ಅಳವಡಿಕೆ
  • ಹೈಮಾಸ್ಟ್ ದೀಪದ ತಡೆಗೋಡೆ ದುರಸ್ತಿ
  • ಎಲ್ಲಾ ಬೀದಿದೀಪಗಳ ಕಾರ್ಯಾಚರಣೆ ಖಚಿತಪಡಿಸುವುದು

ಸ್ಥಳೀಯರು ಈ ಬೇಡಿಕೆಗಳನ್ನು ಸರಕಾರ ಹಾಗೂ ಸಂಬಂಧಿತ ಇಲಾಖೆಗಳ ಗಮನಕ್ಕೆ ತಂದು, ಶೀಘ್ರ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!