Kothanur, Sidlaghatta : ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗ್ರಾಮದಲ್ಲಿ 3 ತಿಂಗಳುಗಳ ಕಾಲ ವಾಸ್ತವ್ಯವಿರುವ ಜಿ ಕೆ ವಿ ಕೆ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಣ್ಣಿನ ಪರೀಕ್ಷೆ ಮಾಡುವ ವಿಧಾನ ಹಾಗು ಮಣ್ಣಿನ ಪರೀಕ್ಷೆಯಿಂದ ರೈತರಿಗಾಗುವ ಉಪಯೋಗದ ಕುರಿತು ಪದ್ಧತಿ ಪ್ರಾತ್ಯಕ್ಷಿಕೆ ಹಾಗೂ ಗುಂಪು ಚರ್ಚಾ ಸಭೆಯನ್ನು ಹಮ್ಮಿಕೊಂಡಿದ್ದರು.
ಮಣ್ಣಿನ ಪರೀಕ್ಷೆಯನ್ನು ಮಾಡುವುದರಿಂದ ಮಣ್ಣಿನ ಆರೋಗ್ಯವನ್ನು ತಿಳಿದುಕೊಂಡು ಅಗತ್ಯವಿದ್ದಷ್ಟು ಗೊಬ್ಬರವನ್ನಷ್ಟೇ ಬಳಸಬಹುದು ,ಇದರಿಂದ ರೈತರೂ ಹೆಚ್ಚಿನ ಲಾಭ ಪಡೆಯಬಹುದು ಎಂದು ವಿದ್ಯಾರ್ಥಿಗಳು ತಿಳಿಸಿದರು.
ಊರಿನ ರೈತರಿಗೆ ಉಚಿತವಾಗಿ ಮಣ್ಣಿನ ಪರೀಕ್ಷೆ ಮಾಡಿಸಲು ಮಣ್ಣಿನ ಮಾದರಿ ಸಂಗ್ರಹಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಗಗನ್, ಚೆನ್ನಯ್ಯ, ಇಮಾಮ್ ಹಾಗೂ ಅನುಷಾ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು .ಊರಿನ ಮುಖ್ಯಸ್ಥರು , ರೈತರು ಉಪಸ್ಥಿತರಿದ್ದರು.








