28 C
Sidlaghatta
Tuesday, July 1, 2025

ಒಗ್ಗಟ್ಟಿನಿಂದ ಕೂಡಿದ ಯುವಕರ ಶಕ್ತಿ ಅಪಾರವಾದುದು

- Advertisement -
- Advertisement -

ಯುವ ಸಂಘಟನೆಗಳು ಶಿಸ್ತು, ಬದ್ಧತೆ, ನಿಯಮ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಗುರಿಯನ್ನಿಟ್ಟುಕೊಂಡು ಕೆಲಸ ಮಾಡಿದಲ್ಲಿ ಸಮಾಜದಲ್ಲಿ ಗುರುತರವಾದ ಬದಲಾವಣೆಗಳನ್ನು ತರಬಹುದಾಗಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.
ನಗರದ ಅಶೋಕ ರಸ್ತೆಯಲ್ಲಿ ಭಾನುವಾರ ಒಕ್ಕಲಿಗರ ಯುವಸೇನೆ ಸಂಘದ ಕಚೇರಿಯನ್ನು ಉದ್ಘಾಟಿಸಿ ನಂತರ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚರಿತ್ರೆಯನ್ನು ನಾವು ಮರೆಯಬಾರದು. ಮುಂದಿನ ಪೀಳಿಗೆಗೆ ಹಿಂದಿನವರ ಸಾಧನೆ ತಿಳಿಯಬೇಕೆಂದರೆ ಅದು ಪುಸ್ತಕ ರೂಪದಲ್ಲಿ ದಾಖಲಾಗಬೇಕಿದೆ. ಕೆಂಪೇಗೌಡರು ಸೇರಿದಂತೆ ಒಕ್ಕಲಿಗರಲ್ಲಿ ಹಲವಾರು ಮಂದಿ ಸಾಧಕರಿದ್ದಾರೆ. ಯುವಕರು ಒಕ್ಕಲಿಗರ ಚರಿತ್ರೆ, ಸಾಧಕರ ಸಾಧನೆಯ ಪುಸ್ತಕಗಳನ್ನು ಹೊರತನ್ನಿ. ಮಳೆ ಬೆಳೆ ಇಲ್ಲದ ಜಿಲ್ಲೆಯ ರೈತ ಮಕ್ಕಳಿಗೆ ವಿದ್ಯೆಯೇ ಜೀವಾಳ. ರೈತರ ಮಕ್ಕಳು ಸುಶಿಕ್ಷಿತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನೀರಿನ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಯುವಕರು ಒಗ್ಗೂಡಬೇಕು. ಒಗ್ಗಟ್ಟಿನಿಂದ ಕೂಡಿದ ಯುವಕರ ಶಕ್ತಿ ಅಪಾರವಾದುದು. ಶಿಡ್ಲಘಟ್ಟ ತಾಲ್ಲೂಕಿನಲ್ಲಿನ ಯುವಕರ ಉತ್ಸಾಹವನ್ನು ಕಂಡು ಅಪಾರ ಸಾಧ್ಯತೆಗಳು ಕಾಣಿಸುತ್ತಿವೆ. ನಮ್ಮ ಭರವಸೆಯನ್ನು ಹುಸಿಗೊಳಿಸಬೇಡಿ ಎಂದು ಹೇಳಿದರು.
ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ಜೆ.ಎಸ್‌.ವೆಂಕಟಸ್ವಾಮಿ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಉತ್ಸಾಹಿ ಯುವಕರ ಪಡೆ ಸಿದ್ಧವಾಗಿದೆ. ಹಿರಿಯರು ಮಾರ್ಗದರ್ಶನ ಮಾಡಿ ಬೆನ್ನುತಟ್ಟುವ ಮೂಲಕ ಪ್ರೋತ್ಸಾಹಿಸಬೇಕಿದೆ. ಸಮಾಜದ ಎಲ್ಲ ಸ್ಥರದವರನ್ನೂ ತಲುಪುವ, ಎಲ್ಲರಿಗೂ ಒಳಿತಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.
ಒಕ್ಕಲಿಗರ ಯುವಸೇನೆ ಸಂಘದ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಪ್ರಭಾಕರ್‌, ಪ್ರಸನ್ನ, ಪಿ.ವಿ.ಮುನಿರಾಜು, ಮುರಳಿ, ಪ್ರತಾಪ್‌, ಪುರುಷೋತ್ತಮ್‌, ನಾರಾಯಣಸ್ವಾಮಿ, ಒಕ್ಕಲಿಗರ ಯುವಸೇನೆ ಸಂಘದ ಗ್ರಾಮ ಪಂಚಾಯಿತಿ ಘಟಕಗಳ ಅಧ್ಯಕ್ಷರುಗಳು

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!