ಕಲಾವಿದರಿಗೆ ಸನ್ಮಾನ

- Advertisement -
- Advertisement -

ತಾಲ್ಲೂಕಿನ ಕೆಂಪನಹಳ್ಳಿಯ ಅಕ್ಕಮಹಾದೇವಿ ದೇವಾಲಯ ಸಮಿತಿ ವತಿಯಿಂದ ಶುಕ್ರವಾರ ತಾಲ್ಲೂಕಿನ ಹಿರಿಯ ತಬಲ ವಿದ್ವಾಂಸರಾದ ವರದನಾಯಕನಹಳ್ಳಿ ವೆಂಕಟರಾಯಪ್ಪ ದಂಪತಿಗಳನ್ನು ಹಾಗೂ ಕೀರ್ತನಕಾರ ತಿಪ್ಪೇನಹಳ್ಳಿ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ವರದನಾಯಕನಹಳ್ಳಿ ವೆಂಕಟರಾಯಪ್ಪ ಅವರು ಸುಮಾರು 30 ವರ್ಷಗಳಿಂದ ಪ್ರತಿ ತಿಂಗಳೂ ನಡೆಯುವ ಭಜನೆ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸುತ್ತಿರುವುದಲ್ಲದೆ, ಅನೇಕ ನಾಟಕ, ಹರಿಕಥೆ, ಭಜನೆ, ದಾಸರ ಆರಾಧನೆಗಳಲ್ಲಿ ಪಾಲ್ಗೊಂಡು ಸನ್ಮಾನ ಹಾಗೂ ಅಭಿನಂದನೆಗೆ ಪಾತ್ರರಾಗಿದ್ದಾರೆ. ದಿ.ವಿ.ಎಸ್.ಪುಟ್ಟನಾಗರಾಜ್, ಮೃದಂಗ ಮುನಿಯಪ್ಪ, ಹನುಮಂತಪ್ಪ ಅವರಲ್ಲಿ ಶಿಕ್ಷಣ ಪಡೆದಿದ್ದ ಇವರು ಸನ್ಮಾನ ಸ್ವೀಕರಿಸಿದಾಗ ಗುರುಗಳನ್ನು ನೆನೆದು ನಮನ ಅರ್ಪಿಸಿದರು.
ಈ ಸಂದರ್ಭದಲ್ಲಿ ಸಂಗೀತ ಹಾಗೂ ಭಜನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪಿಟೀಲು ವಿದ್ವಾನ್ ವಿ.ಶ್ಯಾಮಸುಂದರ್, ಕಲಾವಿದರಾದ ಎಸ್.ವಿ.ರಾಮಮೂರ್ತಿ, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಶಿವಶಂಕರ, ಮುನಿರೆಡ್ಡಿ, ಶೆಟ್ಟಹಳ್ಳಿ ಸೀನಪ್ಪ, ನಾಗರಾಜ್, ಮುನಿಕೃಷ್ಣಪ್ಪ, ಲೋಕೇಶ, ಗ್ರಾಮಸ್ಥರಾದ ಅಬ್ಲೂಡು ಬೈರಪ್ಪ, ನಾರಾಯಣಮ್ಮ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!