20.1 C
Sidlaghatta
Friday, February 13, 2026

ಚನ್ನಕೇಶವ ಸ್ವಾಮಿಯವರ ತಿರುಕಲ್ಯಾಣೋತ್ಸವ

- Advertisement -
- Advertisement -

ತಾಲ್ಲೂಕಿನ ಕೊತ್ತನೂರು ಗ್ರಾಮದ ಚನ್ನಕೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರೀದೇವಿ ಭೂದೇವಿ ಸಹಿತ ಶ್ರೀಚನ್ನಕೇಶವ ಸ್ವಾಮಿಯವರ ತಿರುಕಲ್ಯಾಣೋತ್ಸವ ಹಾಗು ಶ್ರೀ ಮಹಾಸುದರ್ಶನ ನಾರಸಿಂಹ ಹೋಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಎರಡು ದಿನಗಳ ಕಾಲ ಶನಿವಾರ ಮತ್ತು ಭಾನುವಾರ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ತಾಲ್ಲೂಕಿನ ವಿವಿದೆಡೆಗಳಿಂದ ಭಕ್ತರು ಆಗಮಿಸಿ ಪಾಲ್ಗೊಂಡರು.

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಚನ್ನಕೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರೀದೇವಿ ಭೂದೇವಿ ಸಹಿತ ಶ್ರೀಚನ್ನಕೇಶವ ಸ್ವಾಮಿಯವರ ತಿರುಕಲ್ಯಾಣೋತ್ಸವ ಹಾಗು ಶ್ರೀ ಮಹಾಸುದರ್ಶನ ನಾರಸಿಂಹ ಹೋಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು

ಭಾನುವಾರ ಬೆಳಗಿನಿಂದಲೇ ಪ್ರಾರಂಭವಾದ ಪೂಜಾ ಕಾರ್ಯಕ್ರಮದಲ್ಲಿ ಸುಪ್ರಭಾತ ಸೇವೆ, ವೇದ ಸ್ತೋತ್ರ ದಿವ್ಯಪ್ರಬಂಧ ಪಾರಾಯಣ, ಕಳಶಾರಾಧನೆ, ಪ್ರಧಾನಹೋಮ, ಪ್ರಾಣಪ್ರತಿಷ್ಠೆ ಹೋಮ, ವಿಶೇಷ ಸುದರ್ಶನ ನಾರಸಿಂಹ ಹೋಮ, ಪ್ರಾಯಶ್ಚಿತ್ತ ಹೋಮ, ಮಹಾಪೂರ್ಣಾಹುತಿ, ಕಳಶ ಗ್ರಾಮ ಪ್ರದಕ್ಷಿಣೆ, ಕುಂಭಾಭಿಷೇಕ, ತಿರುಕಲ್ಯಾಣ ಮಹೋತ್ಸವ, ಅಷ್ಟಾವಧಾನ ಸೇವೆ, ರಾಷ್ಟ್ರಾಶೀರ್ವಾದ, ಶಾತ್ತುಮೊರೈ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಪ್ರಧಾನ ಅರ್ಚಕರಾದ ಚನ್ನಕೇಶವಾಚಾರ್, ರಾಜಘಟ್ಟದ ಉಮಾ ಮಹೇಶ್ವರಸ್ವಾಮಿ, ದೇವರಾಜ್, ಪಂಚಾಕ್ಷರಿರೆಡ್ಡಿ, ಮಾಜಿ ಡಿ,ವೈ.ಎಸ್.ಪಿ ಮುನಿರೆಡ್ಡಿ, ಜ್ಞಾನೇಶ್ವರ್‌ರಾವ್, ಕೇಶವರಾವ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!