20.1 C
Sidlaghatta
Thursday, October 30, 2025

ಜಿಲ್ಲಾಧಿಕಾರಿಗಳ ಭೇಟಿ

- Advertisement -
- Advertisement -

ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿಮಳೆಯಿಂದಾಗಿ ಜಿಲ್ಲೆಯಾಧ್ಯಂತ ನೂರಾರು ಮನೆಗಳು ಕುಸಿದಿದ್ದು ಈ ಬಗ್ಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೇಂಕಟೇಶ್ ಹೇಳಿದರು.
ನಗರದ ಸಿದ್ದಾರ್ಥನಗರದ ಹರಿಜನ ಕಾಲೋನಿಯಲ್ಲಿ ಗುರುವಾರ ಕುಸಿದುಬಿದ್ದಿರುವ ಮನೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು.
ನಗರದ ೮ ಮತ್ತು ೯ ನೇ ವಾರ್ಡುಗಳಲ್ಲಿ ಸುಮಾರು ೧೫ ಕ್ಕೂ ಹೆಚ್ಚು ಮನೆಗಳು ಮಳೆಯಿಂದಾಗಿ ಕುಸಿದುಬಿದ್ದಿದ್ದು ಮನೆಗಳಿಲ್ಲದೆ ನಿರಾಶ್ರಿತರಾಗಿವವರಿಗೆ ಕೂಡಲೇ ಪರಿಹಾರಧನ ವಿತರಿಸುವಂತೆ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿರಿಗೆ ಸೂಚಿಸಿದರು.
ಮನೆಗಳನ್ನು ಕಳೆದುಕೊಂಡಿರುವ ನಾಗರಿಕರು ಸರ್ಕಾರದಿಂದ ನೀಡುವ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ ಪರಿಹಾರಧನದ ಹಣವನ್ನು ಮನೆಗಳ ರಿಪೇರಿ ಮಾಡಿಸಿಕೊಳ್ಳಲಷ್ಟೆ ಉಪಯೋಗ ಮಾಡಿಕೊಳ್ಳಬೇಕು. ಬೇರೆ ಉದ್ದೇಶಗಳಿಗೆ ಈ ಹಣವನ್ನು ಉಪಯೋಗ ಮಾಡಿಕೊಂಡರೆ ನೀಡಿರುವ ಪರಿಹಾರಧನವನ್ನು ಹಿಂಪಡೆಯಲಾಗುತ್ತದೆ ಎಂದರು.
ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಗರಸಭೆ ಆಯುಕ್ತ ಎಚ್.ಎ.ಹರೀಶ್, ನಗರಸಭಾ ಸದಸ್ಯ ಚಿಕ್ಕಮುನಿಯಪ್ಪ, ಎಸ್.ಎಂ.ರಮೇಶ್, ನಾಗನರಸಿಂಹ, ಕೆ.ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸುಭ್ರಮಣ್ಯಂ, ಗ್ರಾಮ ಲೆಕ್ಕಾಧಿಕಾರಿ ಲಾರೆನ್ಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!