24.1 C
Sidlaghatta
Wednesday, July 30, 2025

ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಕೃತಿಯೊಂದಿಗೆ ಮೋಜಿನ ಕಲಿಕೆ

- Advertisement -
- Advertisement -

ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಿ.ಆರ್.ಟಿ., ಎಫ್.ಸಿ.ಡಬ್ಲೂ., ಆರ್.ಟಿ.ಇ ಕಾರ್ಯಪಡೆ, ಐ.ಎಲ್.ಪಿ, ಉಸಿರಿಗಾಗಿ ಹಸಿರು ಹಾಗೂ ಶಾಲೆಯ ಸಹಯೋಗದಲ್ಲಿ ಪ್ರಾರಂಭವಾದ ಚಿಣ್ಣರ ಬೇಸಿಗೆ ಸಂಭ್ರಮ (ಪ್ರಕೃತಿಯೊಂದಿಗೆ ಮೋಜಿನ ಕಲಿಕೆ)ದಲ್ಲಿ ಸಾಯಿಲ್ ವಾಸು ಅವರು ಮಕ್ಕಳಿಗೆ ಮಣ್ಣಿನ ಕುರಿತಾಗಿ ಪ್ರಾತ್ಯಕ್ಷಿಕೆಗಳೊಂದಿಗೆ ವಿವರಿಸಿದರು.
ಸದಾ ಮಣ್ಣಿನ ಸಂಪರ್ಕದಲ್ಲಿರುವ ಮಕ್ಕಳು ಮಣ್ಣಿನ ಬಗ್ಗೆ ತಿಳಿದುಕೊಳ್ಳುವ ಸಾಕಷ್ಟು ವಿಷಯಗಳಿವೆ. ಮಣ್ಣಿನ ಕುರಿತಾಗಿ ಜ್ಞಾನ ಹೆಚ್ಚಿದಂತೆ ಮಣ್ಣಿನೊಂದಿಗಿನ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಮಣ್ಣಿನ ವಿಧಗಳು, ಮಣ್ಣಿನ ಉಪಯೋಗ, ಮಣ್ಣಿನ ಮಾಲಿನ್ಯದ ಕುರಿತಾಗಿ ಪ್ರಾತ್ಯಕ್ಷಿಕೆಗಳ ಮೂಲಕ ಮಕ್ಕಳಿಗೆ ಮಾಹಿತಿ ನೀಡಿದರು.
ಸಿ.ಆರ್.ಟಿ ಜಿಲ್ಲಾ ಸಂಯೋಜಕ ಸಂತೋಷ್ ಮತ್ತು ತಾಲ್ಲೂಕು ಸಂಯೋಜಕ ಸತೀಶ್ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು. ಬಿ.ಆರ್.ಸಿ ಸಮನ್ವಯಾಧಿಕಾರಿ ಎಂ.ತ್ಯಾಗರಾಜ್ ಶಾಲೆಯ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಅಕ್ಷರ ದಾಸೋಹ ಸಹಾಯ ನಿರ್ದೇಶಕ ಆಂಜನೇಯ ಮಾತನಾಡಿ, ಬಿಸಿಯೂಟ ಜಾರಿಯಲ್ಲಿರುವಾಗ ಮಕ್ಕಳು ಅದರೊಂದಿಗೆ ಬೇಸಿಗೆ ಶಿಬಿರಗಳಲ್ಲಿ ಸಂತಸದಿಂದ ಕಲಿಯುತ್ತಿರುವುದು ಅಭಿನಂದನೀಯ ಎಂದರು.
ಶಿಕ್ಷಕ ಎಂ.ದೇವರಾಜ್, ಜೈ ಭಾರತ್ ಯುವಕ ಸಂಘದ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮದ್ದಿರೆಡ್ಡಿ, ಸಾಯಿಲ್ ಆರ್ಗನೈಸೇಷನ್ ಆನಂದ್, ಸಿ.ಆರ್.ಟಿ ಟ್ರಸ್ಟ್ ನ ಕಾಂತರಾಜು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!