21.1 C
Sidlaghatta
Thursday, July 31, 2025

ತ್ಯಾಜ್ಯ ವಿಲೇವಾರಿ ಮಾಡದ ನಗರಸಭೆ ಸಿಬ್ಬಂದಿ

- Advertisement -
- Advertisement -

ಕರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಎಂದಿನಂತೆ ಸೇರಿದ್ದ ಸಂತೆಗೆ ತೆರಳಿದ ನಗರಸಭೆ ಪರಿಸರ ಅಭಿಯಂತರ ದಿಲೀಪ್ ಮತ್ತು ಸಿಬ್ಬಂದಿ ಹಾಗೂ ಪೊಲೀಸರು ಸಂತೆಯನ್ನು ನಿಲ್ಲಿಸುವಂತೆ ಜನರಿಗೆ ತಿಳುವಳಿಕೆ ಮೂಡಿಸಿದರು.
ಕರೋನಾ ಸೋಂಕು ಹರಡದಂತೆ ತಡೆಯಲು ಜನಸಂದಣಿ ಸೇರಿಸಬಾರದೆಂದು ಸರ್ಕಾರ ಆದೇಶವಿರುವುದರಿಂದ ಸಂತೆಯಲ್ಲಿ ಅರಿವು ಮೂಡಿಸುವ ಕರಪತ್ರ ನೀಡಿದ ಅಧಿಕಾರಿಗಳು ಕುರಿಗಳನ್ನು ತಂದ ರೈತರನ್ನು ಮನವೊಲಿಸಿ ವಾಪಸ್ ಕಳುಹಿಸಿದರು. ಆದರೆ, ತರಕಾರಿಗಳನ್ನು ತಂದಿದ್ದ ರೈತರು ಮತ್ತು ವ್ಯಾಪಾರಿಗಳು, “ನಾಳೆ ಮುನಿದ್ಯಾವರ ಕಾರ್ಯ ಇರುವ ಕಾರಣ ಎರಡರಿಂದ ಮೂರು ಗಂಟೆ ಅವಧಿ ಸಂತೆ ನಡೆಸಲು ಅವಕಾಶ ನೀಡಬೇಕೆಂದು” ಮನವಿ ಮಾಡಿದರು. ಹೆಚ್ಚು ಜನರು ಸೇರಬಾರದು ಎಂದು ಜನರಲ್ಲಿ ನಗರಸಭೆ ಸಿಬ್ಬಂದಿ ತಿಳಿಹೇಳಿದರು.
ಕೆಲವು ಅಂಗಡಿಗಳವರು, ನಗರಸಭೆಯ ಸಿಬ್ಬಂದಿ ಕೇವಲ ಕರಪತ್ರ ಹಂಚುತ್ತಾರೆ. ಕನಿಷ್ಟ ಅದರಲ್ಲಿರುವ ಸಂಗತಿಗಳನ್ನು ಅವರೂ ಪಾಲಿಸಬೇಕಲ್ಲ. ಕಸ, ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿಕಸದ ರಾಶಿ ಬಿದ್ದಿರುತ್ತದೆ. ತ್ಯಾಜ್ಯವನ್ನು ವಿಲೇವಾರಿ ಮಾಡುವವರಿಗೆ ಹಲವು ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲದ ಕಾರಣ ಅವರು ಕೆಲಸ ಮಾಡುತ್ತಿಲ್ಲವೆಂದು ಹೇಳುತ್ತಾರೆ. ಒಟ್ಟಾರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಿದೆ” ಎಂದು ಹೇಳಿದರು.
ಸಂತೆ ನಡೆಯುವ ಆಸುಪಾಸಿನಲ್ಲಿ ತ್ಯಾಜ್ಯ ವಿಲೇವಾರಿ ಆಗದಿರುವುದು, ಕರೋನಾ ಸೋಂಕಿನ ಕುರಿತಾದ ಆತಂಕದಿಂದಾಗಿ ಜನರು ಹೆಚ್ಚಾಗಿ ಸಂತೆಯ ಬಳಿ ಸುಳಿಯದ ಕಾರಣ ಬಿಸಿಲಿನಲ್ಲಿ ಸಂತೆ ಭಣಗುಟ್ಟುತ್ತಿತ್ತು.
ಬಸ್ ನಿಲ್ದಾಣದ ಬಳಿ ತಳ್ಳುವ ಗಾಡಿಗಳಲ್ಲಿ ಹಣ್ಣುಗಳನ್ನು ಮಾರುವವರು ತಮ್ಮ ಗಾಡಿಗಳ ಬಳಿ ರಾಶಿ ರಾಶಿ ತ್ಯಾಜ್ಯ ಇವೆ ನಗರಸಭೆಯವರು ವಿಲೇವಾರಿ ಮಾಡುತ್ತಿಲ್ಲ ಎಂದು ದೂರಿದರೆ, ಸಂತೆಯಲ್ಲಿ ಹಾದು ಹೋಗುವ ಚರಂಡಿಗೆ ಫಾಗಿಂಗ್ ಅಥವಾ ಬ್ಲೀಚಿಂಗ್ ಪೌಡರ್ ಕೂಡ ಹಾಕಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದ ಬಳಿಯ ಕಾಲುವೆಯಂತೂ ತ್ಯಾಜ್ಯದ ಗುಂಡಿಯಾಗಿದೆ. ಅದನ್ನು ಸ್ವಚ್ಛಗೊಳಿಸುವುದಾಗಲೀ, ಫಾಗಿಂಗ್ ಮಾಡುವುದಾಗಲೀ ನಗರಸಭೆಯವರು ಮಾಡುತ್ತಿಲ್ಲ. ಸಂಕ್ರಾಮಿಕ ರೋಗ ಹರಡಲು ಎಲ್ಲಾ ಅನುಕೂಲಗಳನ್ನೂ ನಗರಸಭೆಯವರೇ ಮಾಡಿಕೊಟ್ಟಂತಿದೆ ಎನ್ನುತ್ತಾರೆ ಆಟೋ ಚಾಲಕರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!