18.7 C
Sidlaghatta
Tuesday, March 3, 2026

ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನ ಮಹೋತ್ಸವ

- Advertisement -
- Advertisement -

ನಗರದ ಮಯೂರ ವೃತ್ತದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನ ಮಹೋತ್ಸವವನ್ನು ಮೂರು ದಿನಗಳ ಕಾಲ ನಡೆಸಿದ್ದು, ಬುಧವಾರ ದಿ.ಎಂ.ಆರ್.ರಂಗಪ್ಪನವರ ಕುಟುಂಬದ ಸದಸ್ಯರು ಪುರಜನರ ನೇತೃತ್ವದಲ್ಲಿ ಲೋಕಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.
ದಶಮಿ ಪೂರ್ವಬಾದ್ರ ನಕ್ಷತ್ರಾದಿ ಸ್ವಾಮಿಯ ಅಲಂಕಾರದೊಂದಿಗೆ ಮಹಾಮುಖ್ಯ ಪ್ರಾಣ ಏಕಾದಶ ರುದ್ರ ಹನುಮ ಬ್ರಹ್ಮಪುರ ದರ್ಶನ ಹಾಗೂ ನಾಗದೇವತೆಗಳ ದಿವ್ಯ ಪ್ರತಿಷ್ಠಾಪನ ದರ್ಶನ ಆಯೋಜಿಸಲಾಗಿತ್ತು. ಹನುಮಕೃತಾಶ್ವ ಯಾಗ, ಪವಮಾನ ಯಾಗ ನಡೆಸಿ ನಾದಸ್ವರ ಪೂಜಾ ವಿಧಿವಿಧಾನದೊಂದಿಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ವಿ.ನಾಗೇಂದ್ರಪ್ರಸಾದ್ ಅವರ ರಚನೆಯ ‘ಹನುಮ ಸಂಕೀರ್ತನೆ’ ಆಡಿಯೋ ಸಿಡಿ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
‘ಶಿಡ್ಲಘಟ್ಟದಲ್ಲಿ ನಮ್ಮ ಕುಟುಂಬದ ಹಲವಾರು ಮಂದಿ ಇದ್ದು, ದೇವಸ್ಥಾನ ಪುನರ್ ಪ್ರತಿಷ್ಠಾಪನ ಮಹೋತ್ಸವದ ಸಂದರ್ಭದಲ್ಲಿ ದೇವರ ಹಾಡುಗಳನ್ನು ಬರೆಯಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯನಾಗಿದ್ದು, ಇದು ತಾನು ಊರಿಗೆ ಹಾಗೂ ದೇವರಿಗೆ ಮಾಡುವ ಸೇವೆ’ ಎಂದು ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ವಿ.ನಾಗೇಂದ್ರಪ್ರಸಾದ್ ತಿಳಿಸಿದರು. ಮಾರುತಿ ಗುರೂಜಿ, ನಾರಾಯಣಾಚಾರಿ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!