21.1 C
Sidlaghatta
Thursday, July 31, 2025

ಪಿಂಡಿಪಾಪನಹಳ್ಳಿಯ ಕಲಾವಿದರಿಂದ ಆಂಧ್ರದಲ್ಲಿ ಕನ್ನಡ ಭಕ್ತಿರಸ ಗಾಯನ

- Advertisement -
- Advertisement -

ತಿರುಪತಿ ತಿರುಮಲ ದೇವಾಲಯದಲ್ಲಿ ಭಜನೆ ಕಾರ್ಯಕ್ರಮ ನಡೆಸುವ ಅವಕಾಶ ಲಭಿಸಿದ್ದರಿಂದ ಕನ್ನಡ ಭಕ್ತಿರಸವನ್ನು ನೆರೆಯ ಆಂದ್ರಪ್ರದೇಶದಲ್ಲಿ ಉಣಬಡಿಸುವ ಭಾಗ್ಯ ನಮ್ಮದಾಯಿತು ಎಂದು ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ಶ್ರೀ ಗಂಗಮ್ಮ ದೇವಿ ಕಲಾವಿದರ ಸಂಘದ ದೇವರಾಜ್ ತಿಳಿಸಿದರು.
ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ಶ್ರೀ ಗಂಗಮ್ಮದೇವಿ ಕಲಾವಿದರ ಸಂಘ ಹಾಗು ಚಿಂತಾಮಣಿಯ ಕೋದಂಡರಾಮ ಭಜನೆ ಕಲಾಸಂಘ ಪದಾಧಿಕಾರಿಗಳ ಸಹಯೋಗದಲ್ಲಿ ತಿರುಪತಿ ತಿರುಮಲ ದೇವಾಲಯದಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟು ಹಿಂದಿರುಗಿ ಅವರು ಮಾತನಾಡಿದರು.
ನಮ್ಮ ಸಂಘದ ಸದಸ್ಯರು ತಿರುಪತಿ ತಿರುಮಲ ದೇವಾಲಯದಲ್ಲಿ ಎರಡು ದಿನಗಳ ಕಾಲ ನಡೆದ ನಿರಂತರ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುರಂದರದಾಸರ, ಕನಕದಾಸರ, ತ್ಯಾಗರಾಜರ ಪದಗಳನ್ನು ಹಾಡಿ ಭಕ್ತಿ, ಜ್ಞಾನ, ಚಿಂತನೆಗಳನ್ನು ತಿಳಿಸಲಾಯಿತು.
ಮಾನವನ ಜೀವನದ ಏಳಿಗೆಗೆ ಅಗತ್ಯವಾದ ಧ್ಯಾನ, ಯೋಗ, ಭಕ್ತಿ, ಚಿಂತನೆಗಳನ್ನು ಒಳಗೊಂಡಂತೆ ಭಗವಂತನ ದಿವ್ಯದರ್ಶನ ಪಡೆಯುವ ಮಾರ್ಗೋಪಾಯ ವಿವರಿಸಲಾಯಿತು ಎಂದು ಹೇಳಿದರು.
ಕೋದಂಡರಾಮ ಭಜನೆ ಕಲಾಸಂಘದ ಜುಂಜನಹಳ್ಳಿ ನಾರಾಯಣಸ್ವಾಮಿ ಸೇರಿದಂತೆ ತಾಲ್ಲೂಕಿನ ವಿವಿಧ ಕಲಾವಿದರು ಭಜನೆಯಲ್ಲಿ ಪಾಲ್ಗೊಂಡಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!