24.1 C
Sidlaghatta
Wednesday, October 29, 2025

ಬಂದ್ ಬೆಂಬಲಿಸಿದ ತಾಲ್ಲೂಕು ಕ.ಸಾ.ಪ

- Advertisement -
- Advertisement -

ಮಹದಾಯಿ ಮಧ್ಯಂತರ ಆದೇಶ ಕನ್ನಡಿಗರಿಗೆ ಆಘಾತಕಾರಿಯಾಗಿದ್ದು, ರಾಜ್ಯದ ಕನ್ನಡಿಗರ ಹಿತ ಕಾಯುವ ಕಾಯಕದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸಹ ರಾಜ್ಯ ಕ.ಸಾ.ಪ ದ ಸಲಹೆಯಂತೆ ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತಪಡಿಸುತ್ತಿರುವುದಾಗಿ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ತಾಲ್ಲೂಕು ಕ.ಸಾ.ಪ ವತಿಯಿಂದ ಶಿರಸ್ತೆದಾರ್ ನಿರಂಜನಬಾಬು ಅವರಿಗೆ ಮನವಿಯನ್ನು ಸಲ್ಲಿಸಿ ಅವರು ಮಾತನಾಡಿದರು.
ಕಳಸಾ ಬಂಡೂರಿ ಮಹದಾಯಿ ಮಧ್ಯಂತರ ಆದೇಶದಲ್ಲಿ ಕನ್ನಡಿಗರ ಕುಡಿಯುವ ನೀರಿಗೆ ನ್ಯಾಯ ಕಲ್ಪಿಸಲು ಕೋರಿ ಸರ್ವೋಚ್ಚ ನಾಯ್ಯಾಲಯದಲ್ಲಿ ಮೇಲ್ಮನವಿಗಾಗಿ ಒತ್ತಾಯಿಸಿ ಮನವಿ ಸಲ್ಲಿಸುತ್ತಿರುವುದಾಗಿ ಹೇಳಿದರು.
ರೂಪಸಿ ರಮೇಶ್, ನಾಗರಾಜ್, ಸಿ.ಎಂ.ರಾಜಶೇಖರ್, ಜಿ.ಎನ್.ಶ್ಯಾಮಸುಂದರ್, ಸತ್ಯನಾರಾಯಣರಾವ್, ತಮೀಮ್, ರಾಮಚಂದ್ರಪ್ಪ, ಜಗದೀಶ್ಬಾಬು, ವಿ.ಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!