27.5 C
Sidlaghatta
Monday, August 4, 2025

ಮುತ್ತೂರು ವಿದ್ಯಾರ್ಥಿಗಳಿಗೆ ಅಮೇರಿಕೆಯ ಆತ್ಮ ರಕ್ಷಣಾ ಪಾಠ

- Advertisement -
- Advertisement -

ತಾಲ್ಲೂಕಿನ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಟೇಕ್ವಾಂಡೋ ಆತ್ಮ ರಕ್ಷಣಾ ಕಲೆಯನ್ನು ಕಲಿಯುತ್ತಿದ್ದಾರೆ. ಅಮೇರಿಕೆಯಿಂದ ಬಂದು ಗ್ರಾಮೀಣ ಮಕ್ಕಳಿಗೆ ಟೇಕ್ವಾಂಡೋ ಕಲಿಸುತ್ತಿರುವುದು ವಿಶೇಷವಾಗಿದೆ.
22jul4ಭಾರತೀಯ ಮೂಲದ ರೋಹಿತ್ ಕೃಷ್ಣಮೂರ್ತಿ ಮತ್ತು ಸಂಜಿಯ್ ಕೃಷ್ಣಮೂರ್ತಿ ತಮ್ಮ ತಾಯಿ ಜಯಭಾರತಿ ಅವರೊಂದಿಗೆ ಅಮೆರಿಕೆಯಿಂದ ಎರಡು ತಿಂಗಳ ಕಾಲ ಭಾರತಕ್ಕೆ ಬಂದಿದ್ದು, ಮುತ್ತೂರಿನ ಮಕ್ಕಳಿಗೆ ಉಚಿತವಾಗಿ ಆತ್ಮರಕ್ಷಣಾ ಕಲೆಯನ್ನು ಕಲಿಸುತ್ತಿದ್ದಾರೆ.
ಅಮೆರಿಕೆಯಲ್ಲಿ ಹನ್ನೊಂದನೇ ತರಗತಿ ಮತ್ತು ಎರಡನೇ ತರಗತಿಯಲ್ಲಿ ಓದುತ್ತಿರುವ ಈ ಸಹೋದರರು ಟೇಕ್ವಾಂಡೋ ಕಲೆಯಲ್ಲಿ ಮೂರು ಡಿಗ್ರಿ ಪೂರೈಸಿದ್ದಾರೆ. ಇದರಿಂದಾಗಿ ಇತರರಿಗೆ ತರಬೇತಿಯನ್ನು ಪಡೆಯುವ ಅರ್ಹತೆಯನ್ನು ಪಡೆದಿದ್ದು. ಭಾರತದಲ್ಲಿನ ಗ್ರಾಮೀಣ ಹೆಣ್ಣು ಮಕ್ಕಳಿಗೆ ಕಲಿಸುವ ಉದ್ದೇಶದಿಂದ ಮುತ್ತೂರಿಗೆ ಬಂದಿದ್ದಾರೆ.
22jul5‘ನಾವು ಬೆಂಗಳೂರು ಮೂಲದವರು. ಅಮೆರಿಕೆಯ ಅರಿಜೋನಾ ಪ್ರಾಂತ್ಯದಲ್ಲಿ ನೆಲೆಸಿದ್ದೇವೆ. ನಮ್ಮ ಹುಡುಗರು ಅಲ್ಲಿ ವ್ಯಾಸಂಗ ಮಾಡುತ್ತಾ ಟೇಕ್ವಾಂಡೋ ಕೂಡ ಕಲಿಯುತ್ತಿದ್ದಾರೆ. ತಾವು ಕಲಿತ ವಿದ್ಯೆಯನ್ನು ಭಾರತೀಯ ಹೆಣ್ಣು ಮಕ್ಕಳಿಗೆ ಕಲಿಸಿ ಆತ್ಮ ರಕ್ಷಣೆ ಮತ್ತು ಆತ್ಮಾಭಿಮಾನ ಬೆಳೆಸುವ ಉದ್ದೇಶ ಹೊಂದಿದ್ದಾರೆ. ನಮಗೆ ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ ಪರಿಚಿತರಾಗಿ, ಮುತ್ತೂರಿನ ಶಾಲಾ ಮಕ್ಕಳಿಗೆ ಕಲಿಸಲು ಕೋರಿದರು. ಹಾಗಾಗಿ ನಾವು ಮುತ್ತೂರಿಗೆ ಬಂದೆವು. ಅಮೆರಿಕೆಯಲ್ಲಿ ಜೂನ್ ಮತ್ತು ಜುಲೈ ತಿಂಗಳು ರಜೆ ಇರುವ ಕಾರಣ ಇಲ್ಲಿಗೆ ಬಂದು ಕಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವನ ಇನ್ನಷ್ಟು ಅಮೆರಿಕೆಯ ಸ್ನೇಹಿತರೊಂದಿಗೆ ಬಂದು ಭಾರತೀಯ ಗ್ರಾಮೀಣ ಹೆಣ್ಣುಮಕ್ಕಳಿಗೆ ಆತ್ಮರಕ್ಷಣಾ ಕಲೆಯನ್ನು ಕಲಿಸುವ ಉದ್ದೇಶ ಹೊಂದಿದ್ದಾರೆ’ ಎಂದು ಟೇಕ್ವಾಂಡೋ ಕಲಿಸುತ್ತಿರುವ ರೋಹಿತ್ ಮತ್ತು ಸಂಜಿಯ್ ಅವರ ತಾಯಿ ಜಯಭಾರತಿ ತಿಳಿಸಿದರು.
22jul2‘ಭಾರತೀಯತೆಯ ಬೇರನ್ನು ಮರೆಯದೆ ತಾವು ಕಲಿತ ಆತ್ಮರಕ್ಷಣಾ ವಿದ್ಯೆಯನ್ನು ನಮ್ಮ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಸಲು ಅಮೆರಿಕೆಯಿಂದ ಬಂದ ಕುಟುಂಬದವರು ಮಾದರಿಯಾಗಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರಿಗೆ ಸ್ವತಂತ್ರ್ಯ ಮನೋಭಾವ ಮತ್ತು ಆತ್ಮ ರಕ್ಷಣೆಯ ತಿಳುವಳಿಕೆಯನ್ನು ಮೂಡಿಸುತ್ತಿದ್ದಾರೆ’ ಎಂದು ಗ್ರಾಮದ ಮುಖಂಡ ಕೆಂಪೇಗೌಡ ತಿಳಿಸಿದರು.
‘ನಮ್ಮಂಥ ಗ್ರಾಮೀಣ ವಿದ್ಯಾರ್ಥಿಗಳಿಗೆ ಟೇಕ್ವಾಂಡೋ ಎಂಬ ಕಲೆಯನ್ನು ಕಲಿಯಲು ಅವಕಾಶವಿಲ್ಲ. ಆದರೆ ಅಮೆರಿಕೆಯಿಂದ ಬಂದು ನಮಗೆ ಈ ವಿದ್ಯೆಯನ್ನು ಕಲಿಸುತ್ತಿರುವುದು ನಮ್ಮ ಅದೃಷ್ಟವಾಗಿದೆ. ನಾವು ಅದನ್ನು ಚೆನ್ನಾಗಿ ಕಲಿತು ಇತರರಿಗೂ ಕಲಿಸಲು ಪ್ರಯತ್ನಿಸುತ್ತೇವೆ’ ಎನ್ನುತ್ತಾರೆ ವಿದ್ಯಾರ್ಥಿನಿ ಪಿ.ಎಸ್ಸರಳಾರಾಣಿ.
‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ, ಮುಖ್ಯ ಶಿಕ್ಷಕಿ ಜಿ.ಎನ್.ಅಹಲ್ಯಾ, ಶಿಕ್ಷಕರಾದ ವಿ.ಪ್ರಭಾಕರ್, ಎಂ.ಪ್ರೇಮಲೀಲಾ, ಎಸ್.ದಾವೂದ್ ಪಾಷ, ಎಂ.ಜಿ.ವನೀತಾ ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!