ರೈತರು ಹಾಗೂ ರೀಲರ್‌ಗಳ ಸಮಸ್ಯೆಗಳ ಬಗ್ಗೆ ಕೇಂದ್ರಕ್ಕೆ ವರದಿ

- Advertisement -
- Advertisement -

ರೈತರು ಹಾಗೂ ರೀಲರ್‌ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೇಂದ್ರದ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷ ಬಿಸ್ಸೇಗೌಡ ತಿಳಿಸಿದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಮಂಗಳವಾರ ಸಂಜೆ ಭೇಟಿ ನೀಡಿ ಅವರು ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕರ ಕಚೇರಿಯಲ್ಲಿ ರೈತರ ಹಾಗೂ ರೀಲರ್‌ಗಳ ಸ್ಥಿತಿ ಗತಿಗಳ ಬಗ್ಗೆ ಚರ್ಚೆ ನಡೆಸಿ ಅವರು ಮಾತನಾಡಿದರು.
ರೇಷ್ಮೆ ಗೂಡು ಮಾರಾಟಕ್ಕೆ ಇರುವಂತೆ ರೇಷ್ಮೆ ನೂಲು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಿ ಹಾಗು ರೇಷ್ಮೆ ನೂಲು ಬಿಚ್ಚಾಣಿಕೆ ಮಾಡುವ ಯಂತ್ರಗಳ ಮೇಲೆ ನೀಡುತ್ತಿರುವ ಸಬ್ಸಿಡಿ ಹಣ ಸೇರಿದಂತೆ ಕೈ ಮಗ್ಗದಾರರಿಗೆ ಪ್ರತಿ ಕೆಜಿಯೊಂದಕ್ಕೆ ನೀಡುತ್ತಿರುವ ೧೦ ರೂ ಸಹಾಯಧನ ದುರುಪಯೋಗವಾಗುತ್ತಿದ್ದು ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ರೀಲರ್‌ಗಳು ಈ ಸಂದರ್ಭದಲ್ಲಿ ಬೇಡಿಕೆಯಿಟ್ಟರು.
ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಉತ್ತಮ ತಳಿಯ ರೇಷ್ಮೆ ಹುಳುವಿನ ಆವಿಷ್ಕಾರ, ಗೂಡಿಗೆ ಪ್ರೋತ್ಸಾಹಧನ ಮುಂದುವರೆಸುವುದು. ಕನಿಷ್ಠ ಬೆಲೆ ನಿಗಧಿಪಡಿಸುವುದು ಹಾಗು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ವಹಿವಾಟಿಗೆ ಸಂಬಂದಿಸಿದಂತೆ ಕಟ್ಟುವ ಶುಲ್ಕವನ್ನು ಶೇ. ೧ ರಿಂದ ಶೇ. ೦.೫ ಗೆ ಇಳಿಸಬೇಕು ಎಂದು ರೈತರು ಸೇರಿದಂತೆ ರೀಲರ್‌ಗಳು ಬೇಡಿಕೆಯನ್ನು ಇಟ್ಟರು.
ರೀಲರ್‌ಗಳು ಹಾಗು ರೇಷ್ಮೆ ಬೆಳೆಗಾರರಿಂದ ಮತ್ತು ಮಾರುಕಟ್ಟೆಯ ಅಧಿಕಾರಿಗಳಿಂದ ಸಾಕಷ್ಟು ಮಾಹಿತಿ ಪಡೆದುಕೊಂಡು ಅವರು ಶೀಘ್ರದಲ್ಲಿಯೇ ರೀಲರ್ ಹಾಗು ರೇಷ್ಮೆ ಬೆಳೆಗಾರರನ್ನು ಕೇಂದ್ರ ರೇಷ್ಮೆ ಮಂಡಳಿ ಆಯುಕ್ತರೊಂದಿಗೆ ಭೇಟಿ ಮಾಡಿಸಿ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.
ಬಿಜೆಪಿ ರೇಷ್ಮೆ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ಸಿ.ವಿ.ಲೋಕೇಶ್‌ಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್, ರೇಷ್ಮೆ ಗೂಡು ಮಾರುಕಟ್ಟೆ ಉಪನಿರ್ದೆಶಕ ರತ್ನಯ್ಯ ಶೆಟ್ಟಿ, ರೀಲರ್‌ಗಳ ಸಂಘದ ಅಧ್ಯಕ್ಷ ಅನ್ಸರ್‌ಖಾನ್, ರೀಲರ್‌ಗಳಾದ ರೆಹಮಾನ್, ಸಾಧಿಕ್‌ಪಾಷ, ರಾಮಕೃಷ್ಣಪ್ಪ, ರೇಷ್ಮೆ ಬೆಳೆಗಾರರಾದ ಹಿತ್ತಲಹಳ್ಳಿ ಗೋಪಾಲಗೌಡ, ವೆಂಕಟಸ್ವಾಮಿರೆಡ್ಡಿ, ಸುರೇಶ್, ಶಿವಮೂರ್ತಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!