ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಡಿಯಾಲಜಿ, ನ್ಯೂರಾಲಜಿ, ಹೃದಯ ತಪಾಸಣಾ ಯಂತ್ರಗಳು, ಹೃದಯ ರೋಗ ತಜ್ಞರು, ಸಕ್ಕರೆ ಖಾಯಿಲೆ ತಜ್ಞರು, ಮಕ್ಕಳ ತಜ್ಞರು, ಕಿವಿ ಮೂಗು ಗಂಟಲು ತಜ್ಞರು, ಸ್ತ್ರೀರೋಗ ತಜ್ಞರು, ಚರ್ಮ ರೋಗ ತಜ್ಞರು, ನರರೋಗ ತಜ್ಞರು, ದಂತ ವೈದ್ಯರು ಮುಂತಾದವರು ಆಗಮಿಸಿದ್ದರಿಂದ ಸುಮಾರು 800 ಕ್ಕೂ ಹೆಚ್ಚು ಮಂದಿ ಚಿಕಿತ್ಸೆಯನ್ನು ಪಡೆದರು. ಈ ಸಂದರ್ಭದಲ್ಲಿ ಉಚಿತವಾಗಿ ರೋಗಿಗಳಿಗೆ ಔಷಧಿಗಳನ್ನು ವಿತರಿಸಿದರು. ಆಗಮಿಸಿದ್ದ ರೋಗಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
‘ನಿಯಮಿತವಾಗಿ ತೋರಿಸಿಕೊಂಡು ಚಿಕಿತ್ಸೆ ಪಡೆಯಬೇಕಾದ ಖಾಯಿಲೆಗಳಾದ ಕ್ಯಾನ್ಸರ್, ಮಾನಸಿಕ ರೋಗ ಮುಂತಾದವುಗಳಿಗೆ ಬೆಂಗಳೂರಿನಂಥ ನಗರಗಳಿಗೆ ಹೋಗಲಾಗದೇ ಹಲವಾರು ಮಂದಿ ಹಾಗೇ ಇದ್ದುಬಿಟ್ಟಿರುತ್ತಾರೆ. ಇನ್ನು ಕೆಲವು ರೋಗಗಳಾದ ಸಕ್ಕರೆ ಖಾಯಿಲೆ, ಬಿ.ಪಿ ಮುಂತಾದವುಗಳು ಇರುವುದೇ ತಿಳಿದಿರುವುದಿಲ್ಲ. ಬೃಹತ್ ಆರೋಗ್ಯ ತಪಾಸಣಾ ಶಿಬಿರವೆಂದರೆ ರೋಗಿಯ ಬಳಿ ಆಸ್ಪತ್ರೆಯನ್ನೇ ತರುವುದಾಗಿದೆ. ಇಲ್ಲಿ ಎಲ್ಲಾ ರೀತಿಯ ತಜ್ಞ ವೈದ್ಯರು ಮತ್ತು ಎಲ್ಲಾ ಉಪಕರಣಗಳನ್ನು ತಂದಿರುವುದರಿಂದ ತಾಲ್ಲೂಕಿನ ಜನರಿಗೆ ಉಪಯುಕ್ತವಾಗಲಿದೆ’ ಎಂದು ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಡಾ.ಬಿ.ಜಿ.ರಂಗನಾಥ್ ತಿಳಿಸಿದರು.
ಶಾಸಕ ಎಂ.ರಾಜಣ್ಣ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಡಾ.ಈಶ್ವರಯ್ಯ, ತಜ್ಞ ವೈದ್ಯರಾದ ಡಾ.ಮುನಿನಾರಾಯಣ, ಡಾ.ಹರೀಶ್, ಡಾ.ಸುಮಂತ್, ಡಾ.ಪ್ರಮೋದ್, ಡಾ.ಮುನಿಕೃಷ್ಣ, ಎನ್.ಅಕ್ಷಯ್ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -