23.8 C
Sidlaghatta
Sunday, July 6, 2025

ಸಾಕ್ಷರ ಭಾರತ್ ಕಾರ್ಯಕ್ರಮವು ಹೃದಯವಂತರ ಕಾರ್ಯಕ್ರಮ

- Advertisement -
- Advertisement -

ಅನಕ್ಷರಸ್ಥರಿಗೆ ಕ್ರಿಯಾತ್ಮಕ ಸಾಕ್ಷರತೆಯೊಂದಿಗೆ ಸಮಾನಶಿಕ್ಷಣ, ವೃತ್ತಿಕೌಶಲ ಒದಗಿಸುವುದು ಸಾಕ್ಷರಭಾರತ್ ಯೋಜನೆಯ ಉದ್ದೇಶವಾಗಿದ್ದು, ಬುದ್ಧಿವಂತರಿಗಿಂತ ಹೃದಯವಂತರ ಕಾರ್ಯಕ್ರಮವಾಗಿದೆ ಎಂದು ಗಂಭೀರನಹಳ್ಳಿ ಕ್ಲಸ್ಟರ್ ಸಿಆರ್ಪಿ ರಮೇಶ್ ಅಭಿಪ್ರಯಪಟ್ಟರು.
ಲೋಕಶಿಕ್ಷಣ ನಿರ್ದೇಶನಾಲಯ ಹಾಗೂ ಕುಂಬಿಗಾನಹಳ್ಳಿ ಗ್ರಾಮಪಂಚಾಯತಿ ಲೋಕಶಿಕ್ಷಣಸಮಿತಿ ಆಶ್ರಯದಲ್ಲಿ ಸಾಕ್ಷರ ಭಾರತ್ ಯೋಜನೆಯಡಿ ಸ್ವಯಂಸೇವಕರಿಗಾಗಿ ಹಾರಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ೩ ದಿನಗಳ ೨ ನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಾಳಿಗೆ ಬೆಳಕು ಪ್ರಾಥಮಿಕೆಯು ಲಿಂಗಸಮಾನತೆ, ಮಹಿಳಾಸಬಲೀಕರಣ ಮತ್ತು ಮನೋವೈಜ್ಞಾನಿಕ ಅಂಶಗಳನ್ನು ಆಧರಿಸಿ ತಯಾರಿಸಿರುವುದರಿಂದ ಅದರ ಕಲಿಕೆಯು ನವಸಾಕ್ಷರರಿಗೆ ಅನುಕೂಲವಾಗಲಿದೆ ಮತ್ತು ಕಲಿಕಾಸಕ್ತಿಯನ್ನು ವೃದ್ಧಿಸುತ್ತದೆ ಎಂದು ಅವರು ತಿಳಿಸಿದರು.
ಮುಖ್ಯ ತರಬೇತುದಾರ ಎಚ್.ಎಸ್.ರುದ್ರೇಶಮೂರ್ತಿ ಅವರು ಮಾತನಾಡಿ, ಸ್ವಯಂಸೇವಕರು ಈಗಾಗಲೇ ಕಲಿತಿರುವುದಕ್ಕಿಂತ ಅನಕ್ಷರಸ್ಥರಿಗೆ ಕಲಿಸುವಾಗ ಕಲಿಯುವುದು ಬಹಳಷ್ಟಿದೆ. ಜ್ಞಾನವು ಬಳಸುವುದರಿಂದ ವೃದ್ಧಿಸುತ್ತದೆ. ಐಪಿಸಿಎಲ್ ವಿಧಾನ ಮತ್ತು ಹಂತಗಳನ್ನು ಬಳಸಿ ಕ್ರಿಯಾಶೀಲತೆಯಿಂದ ವೈಜ್ಞಾನಿಕ ಮತ್ತು ಕಲಾತ್ಮಕವಾಗಿ ಕಲಿಸುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಮಧ್ಯದಲ್ಲಿ ಕಲಿಕಾಕೇಂದ್ರ ತೊರೆಯುವ ನವಸಾಕ್ಷರರ ಸಮಸ್ಯೆಗಳನ್ನು ಹೋಗಲಾಡಿಸಲು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ವಿವರಿಸಿದರು.
ಕುಂಬಿಗಾನಹಳ್ಳಿ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಭಾಗ್ಯಮ್ಮ ನಾರಾಯಣಸ್ವಾಮಿ, ಸದಸ್ಯೆ ಆನಂದಮ್ಮ, ರೂಪ, ಮುಖ್ಯ ತರಬೇತುದಾರ ಜೆ.ಬಿ.ಅಶೋಕ್, ಮುಖ್ಯಶಿಕ್ಷಕ ಬಿ.ಎನ್.ಬಸವರಾಜು, ಎಸ್ಡಿಎಂಸಿ ಸದಸ್ಯರು, ಪ್ರೇರಕಿ ಅನುಷಾ, ಬೇಬಿ, ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!