ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ‘ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ’

- Advertisement -
- Advertisement -

ವಿದ್ಯಾರ್ಥಿಗಳು ಬಾಲ್ಯದಲ್ಲೇ ಐತಿಹಾಸಿಕ ಪ್ರಜ್ಞೆ ಬೆಳೆಸಿಕೊಂಡು ಅಪಾರ ಸಾಂಸ್ಕೃತಿಕ ಸಂಪತ್ತನ್ನು ಉಳಿಸಬೇಕು ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕೆ.ಮಂಜುಳಾ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ‘ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತಿಹಾಸವನ್ನು ಮರೆತರೆ ಇತಿಹಾಸವನ್ನು ಸೃಷ್ಠಿಸಲು ಸಾಧ್ಯವಿಲ್ಲ. ನಮ್ಮ ಸಾಂಸ್ಕೃತಿಕ ಪರಂಪರೆಯು ಉತೃಷ್ಟವಾದುದು ಎಂದು ಹೇಳಿದರು.
ಮುತ್ತೂರು ಶಾಲೆಯ ಮುಖ್ಯ ಶಿಕ್ಷಕ ಆಂಜನೇಯ ಮಾತನಾಡಿ, ನಮ್ಮ ಮಹತ್ವದ ಸ್ಮಾರಕಗಳ ಅಧ್ಯಯನದಿಂದ ಗತಕಾಲದ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ಜೀವನವನ್ನು ತಿಳಿಯಬಹುದಾಗಿದೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯದ ಪ್ರಾಚೀನ ಸ್ಮಾರಕಗಳ ಮೂರ್ತ ಮತ್ತು ಅಮೂರ್ತ ಪರಂಪರೆಯ ಸಂಪತ್ತಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪ್ರಬಂಧ, ರಸಪ್ರಶ್ನೆ, ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ನಡೆಸಲಾಯಿತು. ಪ್ರಥಮ ಬಹುಮಾನದ ಮೊತ್ತ 1000ರೂ, ದ್ವಿತೀಯ ಬಹುಮಾನದ ಮೊತ್ತ 500 ಮತ್ತು ತೃತೀಯ ಬಹುಮಾನದ ಮೊತ್ತ 200 ಎಂದು ಪ್ರಕಟಿಸಲಾಯಿತು.

ರಸಪ್ರಶ್ನೆ: ಎನ್.ಶಿವಕುಮಾರ್, ಸರ್ಕಾರಿ ಪ್ರೌಢಶಾಲೆ ಚೀಮಂಗಲ(ಪ್ರಥಮ), ಸಿ.ನವ್ಯ, ಸರ್ಕಾರಿ ಪ್ರೌಢಶಾಲೆ ಕುಂದಲಗುರ್ಕಿ(ದ್ವಿತೀಯ), ಡಿ.ವೆಂಕಟೇಶ್, ಎಸ್.ಆರ್.ಇ.ಟಿ ಪ್ರೌಢಶಾಲೆ(ತೃತೀಯ)
ಪ್ರಬಂಧ ಸ್ಪರ್ಧೆ: ಜಿ.ಎಸ್.ಮೋನಿಕಾ, ಸರ್ಕಾರಿ ಪ್ರೌಢಶಾಲೆ ದ್ಯಾವಪ್ಪನಗುಡಿ(ಪ್ರಥಮ), ನಯನಶ್ರೀ, ನವೋದಯ ನಡಿಪಿನಾಯಕನಹಳ್ಳಿ(ದ್ವಿತೀಯ), ವಿ.ಭವಾನಿ, ಸರ್ಕಾರಿ ಪ್ರೌಢಶಾಲೆ ಜಂಗಮಕೋಟೆ(ತೃತೀಯ)
ಭಾಷಣ ಸ್ಪರ್ಧೆ: ಬಿ.ರಾಗಿಣಿ, ನವೋದಯ ಪ್ರೌಢಶಾಲೆ(ಪ್ರಥಮ), ಕೆ.ವಿ.ವಂದನಾ, ಸರ್ಕಾರಿ ಪ್ರೌಢಶಾಲೆ ದ್ಯಾವಪ್ಪನಗುಡಿ(ದ್ವಿತೀಯ), ಹರಿಕೃಷ್ಣ, ಸರ್ಕಾರಿ ಪ್ರೌಢಶಾಲೆ ಚೀಮಂಗಲ(ತೃತೀಯ)
ಚಿತ್ರಕಲಾ ಸ್ಪರ್ಧೆ: ವೈ.ಎನ್.ಮುರಳಿ, ಸರ್ಕಾರಿ ಪ್ರೌಢಶಾಲೆ ಜಂಗಮಕೋಟೆ(ಪ್ರಥಮ), ಜೆ.ಎಂ.ಮನೋಹರ, ನವೋದಯ ನಡಿಪಿನಾಯಕನಹಳ್ಳಿ(ದ್ವಿತೀಯ), ಎಂ.ಶಶಾಂಕ್, ಸರ್ಕಾರಿ ಪ್ರೌಢಶಾಲೆ ಮುತ್ತೂರು(ತೃತೀಯ)

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!