ಯೂನಿಟಿ ಸಿಲ್ ಸಿಲಾ ಎಜುಕೇಷನಲ್ ಮತ್ತು ವೆಲ್ಫೇರ್ ಟ್ರಸ್ಟ್ ಹಾಗೂ ಕರ್ನಾಟಕ ಟಿಪ್ಪು ಸುಲ್ತಾನ್ ಸಂಘ, ಮುಸ್ಲಿಂ ಯೂತ್ ಸಂಘ, ಎಂ.ಸಿ.ಸಿ ಸ್ಪೋರ್ಟ್ಸ್್ ಕ್ಲಬ್ ಮತ್ತು ಪಿ.ಎಫ್.ವೈ ಸಂಘಟನೆಗಳು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಶುಕ್ರವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈದ್ ಮಿಲಾದ್ ಹಾಗೂ ಮಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ರೈತ ಮುಖಂಡರು ಚಾಲನೆ ನೀಡಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 306 ಯೂನಿಟ್ ರಕ್ತ ಸಂಗ್ರಹಣೆಯಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಶಿಬಿರದಲ್ಲಿ 202 ಯೂನಿಟ್ ರಕ್ತ ಸಂಗ್ರಹಣೆಯಾಯಿತು.
ರೈತ ಮುಖಂಡರಾದ ಬೈರೇಗೌಡ, ವೆಂಕಟಸ್ವಾಮಿ, ಯೂನಿಟಿ ಸಿಲ್ ಸಿಲಾ ಸಂಸ್ಥೆಯ ಅಧ್ಯಕ್ಷ ಅಸ್ಸದ್, ಅಕ್ರಂಪಾಷ, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಅಫ್ಜಲ್, ಇಮ್ತಿಯಾಜ್, ವಸೀಮ್ ಪಾಷ, ವಿಕ್ರಂ, ಮುದಾಸಿರ್, ರಹಮತ್ ಪಾಷ, ಮುಸ್ತಕ್, ಸರ್ಕಾರಿ ಆಸ್ಪತ್ರೆಯ ಸಮೀವುಲ್ಲಾ, ರೆಡ್ ಕ್ರಾಸ್ ಸೊಸೈಟಿಯ ರವಿ, ಗುರುರಾಜರಾವ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







