ಮೆಗಾಸ್ಟಾರ್ ಚಿರಂಜೀವಿ ಅವರ 61ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಬಸ್ ನಿಲ್ದಾಣದ ಬಳಿಯಿರುವ ಸಲ್ಲಾಪುರಮ್ಮ ದೇವಾಲಯದ ಬಳಿ ಸೋಮವಾರ ಆಚರಿಸಿದರು.
ತೆಲುಗಿನ ಖ್ಯಾತ ನಟ ಹಾಗೂ ಮಾಜಿ ಕೇಂದ್ರ ಸಚಿವ ಚಿರಂಜೀವಿ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳೊಂದಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ, ಅನ್ನಸಂತರ್ಪಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ದಿನೇಶ್ಬಾಬು,‘ಪ್ರತಿವರ್ಷವೂ ನಾವು ನಮ್ಮ ನೆಚ್ಚಿನ ನಾಯಕನಟನ ಹುಟ್ಟುಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸುತ್ತಿದ್ದೇವೆ. ಅಂಧ ಮಕ್ಕಳೊಂದಿಗೆ ಈ ದಿನ ಸಿಹಿ ಹಂಚಿಕೊಂಡು ಆಚರಣೆ ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನೂ ನಡೆಸುತ್ತಿದ್ದೇವೆ. ಈ ದಿನ ನಮ್ಮೊಂದಿಗೆ ಈ ಆಚರಣೆಯಲ್ಲಿ ನಮ್ಮ ತಾಲ್ಲೂಕಿನ ಬಚ್ಚಹಳ್ಳಿಯ ‘ಕ್ರಾಕ್ಜಾಕ್’ ಚಲನಚಿತ್ರದ ನಟ ಅಭಿರಾಮ್ ಹಾಜರಿದ್ದು ಹುರಿದುಂಬಿಸಿದ್ದಾರೆ’ ಎಂದು ಹೇಳಿದರು.
ನಾಗೇಶ್ಗೌಡ, ಮಂಜುನಾಥ್, ಶ್ರೀನಿವಾಸ್, ಪ್ರಕಾಶ್, ದೇವರಾಜು, ಮಾಮಯ್ಯ, ಮಹೇಶ್, ರಾಮು, ಸಿ.ಎಂ.ಶ್ರೀನಿವಾಸ್, ಪಿ.ದೇವರಾಜ್, ಸಾದಿಕ್, ರಾಧಾಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -