16.1 C
Sidlaghatta
Friday, December 26, 2025
Home Blog Page 25

ಐ-ಜಲ್ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

0
i Jal Drinking Water Station Inauguration

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ.ಎಸ್.ಆರ್ ಅನುದಾನ ಮತ್ತು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಐ-ಜಲ್ ಸ್ಟೇಷನ್ ಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತೀಕ್ ಪಾಷಾ ಚಾಲನೆ ನೀಡಿದರು.

ಸಾರ್ವಜನಿಕ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರು ತಲುಪಿಸುವ ಉದ್ದೇಶದಿಂದ ತಾಲ್ಲೂಕಿನಾದ್ಯಂತ ಇಂತಹ ಘಟಕಗಳನ್ನು ಸ್ಥಾಪಿಸಲಾಗಿದೆ. ಚೀಮಂಗಲ ಗ್ರಾಮದಲ್ಲಿ ಸ್ಥಾಪಿತವಾದ ಈ ಐ-ಜಲ್ ಸ್ಟೇಷನ್ ಸ್ಥಳೀಯ ನಿವಾಸಿಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಶುದ್ಧ, ಸುರಕ್ಷಿತ ಹಾಗೂ ಲಭ್ಯ ಬೆಲೆಯ ಕುಡಿಯುವ ನೀರನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತೀಕ್ ಪಾಷಾ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ನೀರಿನ ಗುಣಮಟ್ಟ ಹಾಗೂ ಘಟಕದ ನಿರ್ವಹಣೆ ಪರಿಶೀಲಿಸಿದರು. “ಐ-ಜಲ್ ಸ್ಟೇಷನ್ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಕೊರತೆ ನಿವಾರಣೆಗೂ, ಜನರ ಆರೋಗ್ಯ ರಕ್ಷಣೆಯಿಗೂ ಸಹಕಾರಿ ಆಗಲಿದೆ” ಎಂದು ಅವರು ಹೇಳಿದರು.

ಸ್ವಚ್ಛತಾ ಹೀ ಸೇವಾ ಸಹಯೋಗದಲ್ಲಿ ಘಟಕದ ಸುತ್ತಮುತ್ತ ಸ್ವಚ್ಛತೆ ಮತ್ತು ಹಸಿರುನೀಡುವ ಪರಿಸರ ನಿರ್ಮಿಸಲಾಗಿದ್ದು, ಸ್ಥಳವು ಸ್ವಚ್ಛ ಹಾಗೂ ಆಕರ್ಷಕವಾಗಿ ಕಂಗೊಳಿಸುತ್ತಿದೆ.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ, ಚೀಮಂಗಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನ್ವೀರ್ ಅಹಮದ್, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ನಾಟಿ ಕೋಳಿ ಸಾಕಾಣಿಕೆ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಹೊಸ ದಾರಿ

0
Sidlaghatta Country Chicken Farming promotion

Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆ ಮತ್ತು ಹೈನುಗಾರಿಕೆಯ ಜೊತೆಗೆ ನಾಟಿ ಕೋಳಿ ಸಾಕಾಣಿಕೆ ಕೈಗೊಳ್ಳುವುದರಿಂದ ಗ್ರಾಮೀಣ ರೈತರು ಆರ್ಥಿಕವಾಗಿ ಸ್ಥಿರತೆ ಸಾಧಿಸಬಹುದು ಎಂದು ಪಶುವೈದ್ಯಾಧಿಕಾರಿ ಡಾ. ಶ್ರೀನಾಥ್ ರೆಡ್ಡಿ ಹೇಳಿದರು.

ನಗರದ ಪಶು ಆಸ್ಪತ್ರೆ ಆವರಣದಲ್ಲಿ ಶನಿವಾರ ಪಶುಪಾಲನಾ ಮತ್ತು ಸೇವಾ ಇಲಾಖೆಯ ವತಿಯಿಂದ ಮಹಿಳಾ ರೈತರಿಗೆ ಉಚಿತವಾಗಿ ಮೈಸೂರು ತಳಿಯ ನಾಟಿ ಕೋಳಿ ಮರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ರೈತರಿಗೆ ನಾಟಿ ಕೋಳಿ ವಿತರಣಾ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.

ನಾಟಿ ಕೋಳಿ ಮತ್ತು ಅದರ ಮೊಟ್ಟೆಯ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಕುಟುಂಬದ ಆರ್ಥಿಕ ಸ್ಥಿತಿ ಬಲಪಡಿಸಬೇಕೆಂದು ಅವರು ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆ ಈಗಾಗಲೇ ರೇಷ್ಮೆ, ಹೈನುಗಾರಿಕೆ, ಹೂವು, ಹಣ್ಣು ಹಾಗೂ ತರಕಾರಿ ಉತ್ಪಾದನೆಯಲ್ಲಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದು, ನಾಟಿ ಕೋಳಿ ಸಾಕಾಣಿಕೆಯಿಂದ ರೈತರ ಆದಾಯದ ಮೂಲಗಳು ಮತ್ತಷ್ಟು ವಿಸ್ತರಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ. ನಿತಿನ್ ಕುಮಾರ್, ಡಾ. ಪ್ರಶಾಂತ್, ಡಾ. ಸೌಮ್ಯ, ಜಾನುವಾರು ಅಧಿಕಾರಿ ವೀರೇಶ್, ಶಾಸಕರ ಆಪ್ತ ಸಹಾಯಕ ಕುಮಾರ್ ಹಾಗೂ ಸಿಬ್ಬಂದಿಗಳಾದ ಪುಷ್ಪ, ಅನಿಲ್, ಮಂಜು, ಮೂರ್ತಿ, ಅಬ್ಲೂಡು ಮಂಜು, ಬಸವರಾಜ್, ಅಶೋಕ್ ಮತ್ತು ಸ್ಥಳೀಯ ರೈತರು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-04/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 04/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 442
Qty: 24551 Kg
Mx : 696
Mn: 451
Avg: 623

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 21
Qty: 1420 Kg
Mx : ₹ 771
Mn: ₹ 639
Avg: ₹ 708


For Daily Updates WhatsApp ‘HI’ to 7406303366

ವಿಜಯ ದಶಮಿ ಅಂಗವಾಗಿ ಶಮೀ ವೃಕ್ಷ ಪೂಜೆ

0
Sidlaghatta Dasara Vijayadashami Shami Pooja

Sidlaghatta (chikkaballapur district) : ನಾಡಿನುದ್ದಕ್ಕೂ ವೈಭವದಿಂದ ಆಚರಿಸಲ್ಪಡುವ ನವರಾತ್ರಿ ಹಬ್ಬದ ಕೊನೆಯ ದಿನದಂದು ಶಿಡ್ಲಘಟ್ಟ ನಗರದ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶಮೀ (ಬನ್ನಿ) ವೃಕ್ಷ ಪೂಜೆಯನ್ನು ಧಾರ್ಮಿಕ ಶ್ರದ್ಧೆಯಿಂದ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಗನ ಸಿಂಧು ಅವರು ದುಷ್ಟರ ಶಿಕ್ಷೆ ಹಾಗೂ ಶಿಷ್ಟರ ರಕ್ಷಣೆಯ ಸಂಕೇತವಾಗಿ ಅಷ್ಟ ದಿಕ್ಕುಗಳಿಗೂ ಬಾಣಗಳನ್ನು ಬಿಟ್ಟರು. ಈ ಸಂದರ್ಭದಲ್ಲಿ ವೇದಬ್ರಹ್ಮ ದಾಶರಥಿ ಭಟ್ಟಾಚಾರ್ಯರು ಶಮೀ ವೃಕ್ಷ ಪೂಜೆಯ ಮಹತ್ವವನ್ನು ವಿವರಿಸಿ, ಪಾಪನಾಶಕ ಹಾಗೂ ಶತ್ರು ವಿಜಯದ ಸಂಕೇತವಾದ ಶಮೀ ವೃಕ್ಷವು ಪಾಂಡವರ ಕಾಲದಿಂದಲೂ ಮಹತ್ವ ಪಡೆದಿದೆ ಎಂದು ತಿಳಿಸಿದರು. ಅರ್ಜುನನು ಯುದ್ಧಾಸ್ತ್ರಗಳನ್ನು ಶಮೀ ವೃಕ್ಷದಲ್ಲಿ ಅಡಗಿಸಿ ಕೌರವರ ಕಣ್ಣಿಗೆ ಕಾಣದಂತೆ ಉಳಿಸಿಕೊಂಡಿದ್ದನೆಂಬ ಪ್ರಸಂಗವನ್ನು ಅವರು ನೆನಪಿಸಿದರು.

ಪೂಜಾ ವಿಧಿ ಮುಗಿದ ನಂತರ ಮಹಾ ಮಂಗಳಾರತಿ ನಡೆಯಿತು. ಭಕ್ತರು ಶಮೀ ವೃಕ್ಷದ ಎಲೆಗಳನ್ನು ಮುಡಿಗೇರಿಸಿಕೊಂಡು, ಕೆಲವರು ಮನೆಗೆ ಕೊಂಡೊಯ್ದು ಪೂಜಿಸಿದರು. ವಿಜಯದಶಮಿಯ ಈ ಸಂಪ್ರದಾಯವು ಸಾಂಪ್ರದಾಯಿಕ ಧಾರ್ಮಿಕ ನಂಬಿಕೆ ಮತ್ತು ಜನಜೀವನದಲ್ಲಿ ಹಸಿರು-ಶಾಂತಿ ನೆಮ್ಮದಿಯ ಸಂಕೇತವೆಂದು ಭಟ್ಟಾಚಾರ್ಯರು ವಿವರಿಸಿದರು.

ಕಾರ್ಯಕ್ರಮದಲ್ಲಿ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಸೇವಾ ಮತ್ತು ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಬಳೆ ರಘು, ಸಂಚಾಲಕ ರೂಪಸಿ ರಮೇಶ್, ಕಾರ್ಯದರ್ಶಿ ಎಲ್. ಮಧುಸೂಧನ್, ಕೋಟೆ ಸೋಮೇಶ್ವರಸ್ವಾಮಿ ಅಭಿವೃದ್ದಿ ಸಮಿತಿ ಅಧ್ಯಕ್ಷ ನಾಗರಾಜ್ ಹಾಗೂ ಭಕ್ತರು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

“ಅತ್ತೆ ಮಳೆ ಹೊಂಗಲು” ಆಚರಣೆ

0
Sidlaghatta Atte Male Hongalu Tradition Celebration

Devaramallur, Sidlaghatta (Chikkaballapur District) : ಬಯಲುಸೀಮೆ ಭಾಗದ ವಿಶೇಷ ಸಂಪ್ರದಾಯವಾದ “ಅತ್ತೆ ಮಳೆ ಹೊಂಗಲು” ಹಬ್ಬವನ್ನು ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ರೈತರು ಸಂಭ್ರಮದಿಂದ ಆಚರಿಸಿದರು. ಮಳೆಗಾಲದಲ್ಲಿ ಬೆಳೆದು ನಿಂತ ರಾಗಿ, ಅವರೆ, ಅಲಸಂದಿ, ಜೋಳ, ಸೂರ್ಯಕಾಂತಿ, ನೆಲಗಡಲೆ ಬೆಳೆಗಳು “ಕಣ್ ಕಿಸ್ರು” (ವಕ್ರ ದೃಷ್ಟಿ) ತಗುಲಿ ಹಾಳಾಗಬಾರದು ಎಂಬ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಹಬ್ಬವನ್ನು ಗ್ರಾಮ ಹಿರಿಯರು ತೀರ್ಮಾನಿಸುವ ಮೂಲಕ ಪ್ರಾರಂಭಿಸಿ, ಊರ ತಳವಾರ ಮನೆ ಮನೆಗೂ ಸುದ್ದಿ ನೀಡುವ ಪದ್ಧತಿ ಇಂದಿಗೂ ಜೀವಂತವಾಗಿದೆ. ಗ್ರಾಮದ ಜನರಿಂದ ಸಂಗ್ರಹಿಸಿದ ಚಂದಾದಿಂದ ಪೂಜೆ ಸಾಮಗ್ರಿ ಹಾಗೂ ಒಂದು ಕುರಿಯನ್ನು ಖರೀದಿಸಿ, ಗಂಗಮ್ಮನ ಗುಡಿ, ಛಾವಡಿ ಅಥವಾ ಗ್ರಾಮ ಸಭಾ ಸ್ಥಳದಲ್ಲಿ ರಾಕ್ಷಸ ರೂಪದ “ಕೆರೆ ಬಂಟ” ಚಿತ್ರ ಬರೆದು ಹಬ್ಬವನ್ನು ಆಚರಿಸಲಾಯಿತು.

ಹೊಸ ಮಡಿಕೆಯಲ್ಲಿ ಅನ್ನ ಬೇಯಿಸಿ, ಲಕ್ಕಲಿ, ಹೊಂಗೆ, ಅಲಸಂದಿ, ತೊಗರಿ, ಬೇವಿನ ಸೊಪ್ಪು ಸೇರಿದಂತೆ ಒಂಬತ್ತು ವಿಧದ ಸೊಪ್ಪುಗಳನ್ನು ಸೇರಿಸಿ ತಯಾರಿಸಿದ ಅನ್ನದಲ್ಲಿ ಬಲಿ ಕೊಟ್ಟ ಕುರಿಯ ರಕ್ತವನ್ನು ಬೆರೆಸಿ ಹೊಲ ಹೊಲಗಳಿಗೆ ಚೆಲ್ಲುವ ಸಂಪ್ರದಾಯ ಪಾಲಿಸಲಾಯಿತು. ಇದರಿಂದ ಬೆಳೆಗಳಿಗೆ ವಕ್ರ ದೃಷ್ಟಿ ತಾಗುವುದಿಲ್ಲ ಎಂಬುದು ಗ್ರಾಮಸ್ಥರ ನಂಬಿಕೆ.

ನಂತರ ಕುರಿಯ ಮಾಂಸವನ್ನು ಗುಡ್ಡೆ ಮಾಡಿ ಚಂದಾ ನೀಡಿದ ಮನೆಗಳಿಗೆ ಹಂಚಲಾಯಿತು. ಮನೆಗಳಲ್ಲಿ ಮಾಂಸಾಹಾರ ಅಡುಗೆ ಮಾಡಿ ಸೇವಿಸುವುದರ ಮೂಲಕ ಗ್ರಾಮದ ದೇವರ ಆಶೀರ್ವಾದ ಹಾಗೂ ಸಮೃದ್ಧಿ ಬೆಳೆಗಾಗಿ ಪ್ರಾರ್ಥಿಸಲಾಯಿತು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಡ್ರೋನ್ ಮೂಲಕ ಕೃಷಿ ಔಷಧಿ ಸಿಂಪಡಣೆ – ರೈತರಿಗೆ ಕಡಿಮೆ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನ ಲಭ್ಯ

0
Sidlaghatta Drone Farm Pesticide Manure Spray

Sidlaghatta (Chikkaballapur District) : ರೈತರ ಕೈಗೆಟುಕದ ಡ್ರೋನ್ ಬೆಲೆಗಳನ್ನು ಗಮನಿಸಿ, ಖಾಸಗಿ ಸಂಸ್ಥೆಯೊಂದು ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಕಡಿಮೆ ವೆಚ್ಚದಲ್ಲಿ ಡ್ರೋನ್ ಸೇವೆ ಒದಗಿಸಲು ಮುಂದಾಗಿದೆ. ಶುಕ್ರವಾರ, ಸ್ಥಳೀಯ ರೈತ ಮುನೀಂದ್ರ ಅವರ ಮೆಕ್ಕೆ ಜೋಳದ ತೋಟದಲ್ಲಿ ಡ್ರೋನ್ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು.

ಡ್ರೋನ್ ಮೂಲಕ ಕೃಷಿ ಔಷಧಿ ಸಿಂಪಡಣೆ ಒಂದು ಆಧುನಿಕ ಕೃಷಿ ತಂತ್ರಜ್ಞಾನ. ಇದು ಕೀಟನಾಶಕ, ಶಿಲೀಂಧ್ರನಾಶಕ ಮತ್ತು ಎಲೆ ಪೋಷಕ ದ್ರಾವಣಗಳನ್ನು ನಿಖರ ಪ್ರಮಾಣದಲ್ಲಿ ಸಿಂಪಡಿಸುವುದರೊಂದಿಗೆ ನೀರಿನ ವ್ಯರ್ಥತೆ ಕಡಿಮೆ, ಕಾರ್ಮಿಕರ ಕೊರತೆ ನಿವಾರಣೆ ಮತ್ತು ರೈತರ ಆರೋಗ್ಯ ರಕ್ಷಣೆ ಒದಗಿಸುತ್ತದೆ. ಒಂದು ಬಾರಿ 15 ನಿಮಿಷ ಹಾರಬಲ್ಲ ಈ ಡ್ರೋನ್‌ನ 10 ಲೀಟರ್ ಸಾಮರ್ಥ್ಯದ ಟ್ಯಾಂಕ್ ಮೂಲಕ 8 ನಿಮಿಷಗಳಲ್ಲಿ ಒಂದು ಎಕರೆ ಪ್ರದೇಶಕ್ಕೆ ಸಿಂಪಡಣೆ ಸಾಧ್ಯ.

“ಡ್ರೋನ್ ಬಳಕೆಯಿಂದ ದಿನಕ್ಕೆ 40 ಎಕರೆ ಬೆಳೆಗೆ ಔಷಧಿ ಸಿಂಪಡಿಸಬಹುದು. ಒಂದು ಎಕರೆಗೆ ₹600 ದರ ನಿಗದಿಪಡಿಸಲಾಗಿದೆ. ಕನಿಷ್ಠ 10 ಎಕರೆ ಹೊಲ ಹೊಂದಿರುವ ರೈತರಿಗೆ ನಾವೇ ಬಂದು ಸೇವೆ ಒದಗಿಸುತ್ತೇವೆ. ಇದು ಕಡಿಮೆ ನೀರಿನ ಬಳಕೆ ಹಾಗೂ ವೇಗವಾದ ಕಾರ್ಯವಿಧಾನದೊಂದಿಗೆ ರೈತರಿಗೆ ಅನುಕೂಲಕರ” ಎಂದು ಸುರೇಶ್ ಭಟ್ (ಗಾಯತ್ರಿ ಮೈಕ್ರೋ ಎಲಿಮೆಂಟ್ಸ್ ಅಂಡ್ ಕೆಮಿಕಲ್ಸ್ ಕಂಪನಿ) ತಿಳಿಸಿದರು.

ರೈತ ಮುನೀಂದ್ರ ತಮ್ಮ ಅನುಭವ ಹಂಚಿಕೊಂಡು, “ಈಗ ಮೋಟಾರಿಗೆ ಮತ್ತು ಕಾರ್ಮಿಕರಿಗೆ ಹೆಚ್ಚುವರಿ ವೆಚ್ಚ ಮಾಡಬೇಕಾಗಿದೆ. ಆದರೆ ಡ್ರೋನ್ ಸೇವೆ ಕೈಗೆಟಕುವ ದರದಲ್ಲಿ ಸಿಕ್ಕರೆ ನಮಗೆ ಬಹಳ ಪ್ರಯೋಜನವಾಗುತ್ತದೆ” ಎಂದು ಹೇಳಿದರು.

ಡ್ರೋನ್ ಪ್ರಾಯೋಗಿಕ ಪರೀಕ್ಷೆಯಲ್ಲಿ ಸಿದ್ದಪ್ಪ ಕಂಬೋಜಿ, ರಾಹುಲ್ ಭಾಸ್ಕರ್, ವಿಜಯ ಭಾಸ್ಕರ್, ಬಾಲಕೃಷ್ಣ, ನಂಜುಂಡರೆಡ್ಡಿ (ಲಕ್ಷ್ಮೀ ಕೃಪ ಟ್ರೇಡರ್ಸ್), ತ್ಯಾಗರಾಜ್, ರೆಡ್ಡಿ, ಹರೀಶ್ ಸೇರಿದಂತೆ ರೈತರು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-03/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 03/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 351
Qty: 18876 Kg
Mx : 699
Mn: 422
Avg: 635

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 07
Qty: 532 Kg
Mx : ₹ 724
Mn: ₹ 688
Avg: ₹ 704


For Daily Updates WhatsApp ‘HI’ to 7406303366

ನಾಗಪುರದ ದೀಕ್ಷಾಭೂಮಿ ಯಾತ್ರೆಗೆ ಚಾಲನೆ

0
Sidlaghatta Nagpur Deeksha Bhoomi

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹಾಗೂ ದಲಿತ ಮುಖಂಡರು ಗುರುವಾರ ನಾಗಪುರದ ಡಾ. ಬಿ.ಆರ್. ಅಂಬೇಡ್ಕರ್ ದೀಕ್ಷಾಭೂಮಿಗೆ ಯಾತ್ರೆ ಬೆಳೆಸಿದರು.

ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾತ್ರೆಗೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವೇಣುಗೋಪಾಲ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಅವರು, “ದೀಕ್ಷಾಭೂಮಿ ಯಾತ್ರೆಯ ಮುಖ್ಯ ಉದ್ದೇಶವೆಂದರೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ಪವಿತ್ರ ಸ್ಥಳಕ್ಕೆ ಭೇಟಿ ನೀಡಿ, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಮತ್ತು ಸಮಾನತೆಯ ತತ್ವಗಳನ್ನು ಪಾಲಿಸುವುದು. ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಈ ಯಾತ್ರೆ, ಬಡ ವರ್ಗದ ಜನರಿಗೆ ಡಾ. ಅಂಬೇಡ್ಕರ್ ಅವರ ಜೀವನದಿಂದ ಸ್ಫೂರ್ತಿ ಪಡೆಯುವ ಸುವರ್ಣಾವಕಾಶ” ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್, ಸೊಣ್ಣಪ್ಪ, ನರಸಿಂಹಮೂರ್ತಿ, ನಾರಾಯಣಸ್ವಾಮಿ, ಹಾಸ್ಟೆಲ್ ಬಾಬು ಸೇರಿದಂತೆ ಅನೇಕರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಅಭಿಯಾನ

0
Sidlaghatta Gandhi jayanti Cleaning

Sidlaghatta : ಶಿಡ್ಲಘಟ್ಟದಲ್ಲಿ ಗುರುವಾರ ಗಾಂಧಿ ಜಯಂತಿ ಪ್ರಯುಕ್ತ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಅಭಿಯಾನದಲ್ಲಿ ತಹಶೀಲ್ದಾರ್ ಗಗನಸಿಂಧು, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ನಗರಸಭೆ ಪೌರಾಯುಕ್ತೆ ಜಿ. ಅಮೃತ, ನಗರಸಭಾ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡರು.

ತಹಶೀಲ್ದಾರ್ ಗಗನಸಿಂಧು ಅವರು ಮಾತನಾಡಿ, “ಮನೆಯ ಸ್ವಚ್ಛತೆಯಂತೆ ಬೀದಿ ಮತ್ತು ಊರನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ವಿರುದ್ಧ ದಂಡ ವಿಧಿಸಲಾಗುವುದು” ಎಂದು ಎಚ್ಚರಿಸಿದರು.

ಪೌರಾಯುಕ್ತೆ ಜಿ. ಅಮೃತ ಅವರು, “ಅಂಗಡಿ ಮಾಲೀಕರು ನಗರಸಭೆಯ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ಕಸ ಹಸ್ತಾಂತರಿಸಬೇಕು. ರಸ್ತೆಗಳಲ್ಲಿ ಕಸ ಸುರಿಸಿದರೆ ದಂಡ ವಿಧಿಸಲಾಗುವುದು. ಪ್ಲಾಸ್ಟಿಕ್ ಬಳಕೆಯನ್ನು ತಕ್ಷಣ ನಿಲ್ಲಿಸಬೇಕು. ಸ್ವಚ್ಛ ಶಿಡ್ಲಘಟ್ಟ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ” ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಅವರು, “ಮಹಾತ್ಮ ಗಾಂಧೀಜಿ ಅವರ ಸ್ವಚ್ಛತೆಯ ಸಂದೇಶವನ್ನು ಜನರಲ್ಲಿ ಹರಡುವುದೇ ಈ ಅಭಿಯಾನದ ಉದ್ದೇಶ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಯುವುದರ ಮೂಲಕ ರೋಗ ನಿಯಂತ್ರಣ ಸಾಧ್ಯ. ಊರು ಮತ್ತು ಪರಿಸರದ ಬಗ್ಗೆ ಅಭಿಮಾನ ಬೆಳೆಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು” ಎಂದು ಕರೆ ನೀಡಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-02/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 02/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 343
Qty: 18620 Kg
Mx : 699
Mn: 522
Avg: 638

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 13
Qty: 1079 Kg
Mx : ₹ 780
Mn: ₹ 656
Avg: ₹ 733


For Daily Updates WhatsApp ‘HI’ to 7406303366

error: Content is protected !!