16.1 C
Sidlaghatta
Saturday, December 27, 2025
Home Blog Page 38

ವಿಶೇಷ ಚೇತನರಿಗೆ ತ್ರಿ ಚಕ್ರ ವಾಹನ ವಿತರಣೆ

0
Tricycle distribution for Specially Abled

Sidlaghatta : ಶಾಸಕರ ಕ್ಷೇತ್ರ ಅಭಿವೃದ್ದಿ ಅನುದಾನದಲ್ಲಿ 24 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಗುತ್ತಿದೆ. 2 ಕೋಟಿ ರೂ ಶಾಸಕರ ಕ್ಷೇತ್ರ ಅಭಿವೃದ್ದಿ ಅನುದಾನದಲ್ಲಿ ಶೇ 10ರಷ್ಟು ಹಣವನ್ನು ವಿಶೇಷ ಚೇತನರಿಗೆ ಮೀಸಲಿಟ್ಟು ಅದರಲ್ಲಿ ತ್ರಿ ಚಕ್ರ ವಾಹನಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ 24 ಮಂದಿ ವಿಶೇಷಚೇತನರಿಗೆ ಶಾಸಕರ ಕ್ಷೇತ್ರ ಅಭಿವೃದ್ದಿ ಅನುದಾನದಲ್ಲಿ 24 ತ್ರಿ ಚಕ್ರ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಜತೆಗೆ ಕ್ಷೇತ್ರದಲ್ಲಿನ ಗ್ರಾಮೀಣ ಭಾಗದ ಎಲ್ಲ ರಸ್ತೆಗಳ ಬಹುತೇಕ ಹದಗೆಟ್ಟಿವೆ. ಈ ಬಗ್ಗೆ ಸದನದಲ್ಲಿ ನಾನು ಪ್ರಸ್ತಾಪಿಸಿದ್ದು ಮೊದಲಿಗೆ ಶಾಲೆ, ಶಿಕ್ಷಣದ ಅಭಿವೃದ್ದಿಗೆ ಆಧ್ಯತೆ ನೀಡಬೇಕಿದೆ ಎಂದರು.

ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಸಿಕೊಂಡರೆ ಶಿಡ್ಲಘಟ್ಟ ಕ್ಷೇತ್ರ ಅತಿ ಹಿಂದುಳಿದ ಕ್ಷೇತ್ರ. ಆದರೂ ಇಲ್ಲಿನ ಜನತೆ ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಅಬಕಾರಿ, ಪೆಟ್ರೋಲ್ ಡೀಸೆಲ್, ಜಿ.ಎಸ್‌.ಟಿ ಮತ್ತು ಕೆ.ಎಸ್‌.ಆರ್‌.ಟಿ.ಸಿ ಯಿಂದ ಹೆಚ್ಚು ತೆರಿಗೆಯನ್ನು ಪಾವತಿಸಲಾಗುತ್ತಿದೆ.

ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು, ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು. ಅದಕ್ಕೆ ಎಲ್ಲರ ಸಹಕಾರವೂ ಮುಖ್ಯ ಎಂದರು.

ಜಲ ಜೀವನ್ ಯೋಜನೆಯಡಿ ನಡೆದ ಕಾಮಗಾರಿ ಗುಣಮಟ್ಟದಿಂದಲ್ಲ, ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬಂದಿದ್ದು ಈಗಾಗಲೆ ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಬಳಿ ಚರ್ಚಿಸಲಾಗಿದೆ.

ಸಂಬಂಧಿಸಿದ ಗುತ್ತಿಗೆಗಾರರ ಸಭೆ ಕರೆದು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಗುಣಮಟ್ಟದ ಕಾಮಗಾರಿಯನ್ನು ನಿಗಧಿತ ಕಾಲಾವಧಿಯಲ್ಲಿ ಮುಗಿಸಿಕೊಡುವ ಭರವಸೆಯನ್ನು ಸಿಇಒ ಅವರು ನೀಡಿದ್ದಾರೆ. ಇದಲ್ಲದೆ ಥರ್ಡ್ ಪಾರ್ಟಿಯಿಂದ ಕಾಮಗಾರಿ ಗುಣಮಟ್ಟ ಪರೀಕ್ಷೆಯನ್ನು ಮಾಡಿಸುವ ಒತ್ತಾಯವನ್ನು ಮಾಡಿದ್ದೇವೆ ಎಂದರು. 24 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಜ್ಯೋತಿಲಕ್ಷ್ಮಿ, ಯೋಜನಾ ಸಹಾಯಕ ಅರುಣ್‌ಕುಮಾರ್, ಪಿ.ಎಲ್‌.ಡಿ ಬ್ಯಾಂಕ್ ಅಧ್ಯಕ್ಷ ಬಂಕ್‌ ಮುನಿಯಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ಉಪಾಧ್ಯಕ್ಷ ರೂಪ ನವೀನ್, ಸದಸ್ಯರಾದ ಎಸ್.ರಾಘವೇಂದ್ರ, ಅನಿಲ್‌ಕುಮಾರ್, ಮುಖಂಡರಾದ ಎಸ್.ಎಂ.ರಮೇಶ್, ನಂದ ಕಿಶನ್, ಜೆ.ವಿ.ಸದಾಶಿವ, ಬಾಲಕೃಷ್ಣ, ಆರ್.ಎ.ಉಮೇಶ್, ಮೇಲೂರು ಮಂಜುನಾಥ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಬೀದಿ ನಾಯಿಗಳ ಸಂತಾನ ಶಸ್ತ್ರಚಿಕಿತ್ಸೆಗೆ ಅಗತ್ಯ ಸಿದ್ದತೆ ಕೈಗೊಳ್ಳುತ್ತಿದ್ದೇವೆ : ಜಿಲ್ಲಾಧಿಕಾರಿ

0
Sidlaghatta Street Dogs Control plan underway dc raveendra

Sidlaghatta : ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ಕೂಡ ಬೀದಿ ನಾಯಿಗಳ ನಿಯಂತ್ರಣ ಮತ್ತು ನಾಯಿಗಳಿಂದ ಮಕ್ಕಳ ಮೇಲೆ ದಾಳಿ ನಿಯಂತ್ರಿಸುವಲ್ಲಿ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಡಿಸಿ ಪಿ.ಎನ್.ರವೀಂದ್ರ ಕೋರಿದರು.

ನಗರೋತ್ಥಾನ ಹಂತ-4ರಲ್ಲಿನ ಅನುದಾನದಲ್ಲಿ ನಗರದಲ್ಲಿ ನಿರ್ಮಿಸಿರುವ ಸಿಮೆಂಟ್ ರಸ್ತೆ ಕಾಮಗಾರಿಗಳನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬೀದಿ ನಾಯಿಗಳಿಗೆ ಹಿಂಸೆ ಕೊಡಬಾರದು ಎನ್ನುವ ಪ್ರಾಣಿ ದಯಾ ಸಂಘ, ನ್ಯಾಯಾಲಯದ ಕಾನೂನನ್ನು ಒಂದು ಕಡೆ, ನಾಗರಿಕರು, ಮಕ್ಕಳು, ಮುದುಕರ ಹಿತ ರಕ್ಷಣೆ ಮತ್ತೊಂದು ಕಡೆ. ಈ ಎರಡೂ ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಂಡು ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಈಗಾಗಲೆ ಅಗತ್ಯ ಸಿದ್ದತೆಗಳನ್ನು ಕೈಗೊಂಡಿದೆ ಎಂದರು.

ಬೀದಿ ನಾಯಿಗಳನ್ನು ರಕ್ಷಸಿ ಆರೈಕೆ ಮಾಡಲು ಸೂಕ್ತ ಜಾಗ ನಿಗಧಿಗಾಗಿ ನಗರಸಭೆಯಿಂದ ಪ್ರಸ್ತಾವನೆ ಬಂದಿದ್ದು ಅದನ್ನು ಪುರಸ್ಕರಿಸುವುದಾಗಿ ತಿಳಿಸಿದರು.

ಬೀದಿಗಳಲ್ಲಿ ಅಡ್ಡಾಡುವ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿ ಕೆಲ ಕಾಲ ಆರೈಕೆ ಮಾಡಿ ಬಿಡಲಾಗುತ್ತದೆ. ಇದರಿಂದ ಬೀದಿ ನಾಯಿಗಳ ಸಂತತಿ ತಂತಾನೆ ಕಡಿಮೆಯಾಗಿ ಅವುಗಳ ಹಾವಳಿ ಕ್ರಮೇಣ ಇಲ್ಲವಾಗುತ್ತದೆ ಎಂದರು.

ನಗರೋತ್ಥಾನ ಹಂತ-4ರಲ್ಲಿ 12 ಕೋಟಿ ರೂಪಾಯಿಗಳ ಅನುದಾನದಲ್ಲಿ ಈಗಾಗಲೆ 7 ಕೋಟಿ ರೂಗಳ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಮುಗಿದಿದ್ದು ಇನ್ನುಳಿದ 5 ಕೋಟಿ ರೂ ಅನುದಾನದಲ್ಲಿ ಅನುಮೋದನೆಗೊಂಡ ಕಾಮಗಾರಿಗಳು ನಡೆಯಲಿವೆ ಎಂದು ವಿವರಿಸಿದರು.

ನಾಗರಿಕರು ತಮ್ಮ ಆಸುಪಾಸು ಅಭಿವೃದ್ದಿ, ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳು ನಡೆಯುವಾಗ ಅದರ ಗುಣಮಟ್ಟದ ಬಗ್ಗೆ ನಿಗಾವಹಿಸಬೇಕು. ಸರ್ಕಾರದ ದುಡ್ಡು, ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ನಮಗೇಕೆ ಎನ್ನುವ ಉದಾಸೀನ ಬೇಡ ಎಂದರು.

ಸಾರ್ವಜನಿಕರ ತೆರಿಗೆ ಹಣದಿಂದಲೆ ಈ ಎಲ್ಲ ಕಾಮಗಾರಿಗಳನ್ನು ನಡೆಸಲಿದ್ದು ಕಾಮಗಾರಿ ನಡೆಹಯುವುದು, ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ನಿಮ್ಮ ಪಾತ್ರವೂ ಇರಬೇಕಾಗುತ್ತದೆ ಎಂದು ಕೋರಿದರು.

ಶಿಡ್ಲಘಟ್ಟ ನಗರಸಭೆಯಲ್ಲಿ ಖಾತಾ ಆಂದೋಲನ ನಿಧಾನಗತಿಯಲ್ಲಿ ಸಾಗುತ್ತಿದೆ. ಇಲ್ಲಿ ಬಹುತೇಕ ನಿವೇಶನ, ಮನೆ ಇನ್ನಿತರೆ ಆಸ್ತಿಗಳಿಗೆ ನೋಂದಾಯಿತ ಸೂಕ್ತ ದಾಖಲೆಗಳು ಇಲ್ಲ. ಬಹುತೇಕ ಆಸ್ತಿಗಳಿಗೆ ಒಪ್ಪಂದ ಪತ್ರ ಮಾತ್ರ ಇದೆ. ಈ ಕಾರಣಕ್ಕೆ ಖಾತಾ ಅಭಿಯಾನ ನಿಧಾನವಾಗುತ್ತಿದೆ ಎಂದರು.

ಶಿಡ್ಲಘಟ್ಟ ನಗರದಲ್ಲಿ ಬಹುತೇಕ ನಿವೇಶನಗಳು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮೋದನೆಗೊಂಡಿಲ್ಲ. ಜಮೀನಿನ ಮಾಲೀಕರು ನಿವೇಶನಗಳನ್ನು ವಿಂಗಡಣೆ ಮಾಡಿ ನೋಂದಾಯಿಸಿ ಬಿಟ್ಟಿದ್ದಾರೆ. ಇಂತಹ ನಿವೇಶನಗಳಿಗೆ ಇ ಖಾತೆ ನೀಡಲಾಗುವುದಿಲ್ಲ ಎಂದರು.

ಖಾತಾಗೆ ಬಂದ ಅರ್ಜಿಗಳನ್ನು ಸೂಕ್ತ ಎಲ್ಲ ದಾಖಲೆಗಳು ಇರುವ ಮತ್ತು ಸೂಕ್ತ ದಾಖಲೆಗಳು ಇಲ್ಲದ ಅರ್ಜಿಗಳನ್ನಾಗಿ ಪ್ರತ್ಯೇಕಿಸುವ ಕೆಲಸ ನಡೆದಿದೆ. ಮೊದಲು ಸೂಕ್ತ ದಾಖಲೆಗಳೆಲ್ಲವೂ ಇರುವ ಆಸ್ತಿಗೆ ಇ-ಖಾತೆ ಮಾಡಿ ಸೂಕ್ತ ದಾಖಲೆಗಳು ಇಲ್ಲದ ಆಸ್ತಿಗಳ ವಿವರಗಳನ್ನು ಸರಕಾರಕ್ಕೆ ಬರೆದು ಅವರಿಂದ ಸೂಕ್ತ ಸಲಹೆ ಸೂಚನೆ ಕೋರಿ ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮವಹಿಸಲಿದ್ದೇವೆ ಎಂದು ಡಿಸಿ ಪಿ.ಎನ್.ರವೀಂದ್ರ ತಿಳಿಸಿದರು.

ನಗರೋತ್ಥಾನ ಯೋಜನೆಯಡಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಿಸಲು ಆಗಮಿಸಿದ್ದ ಡಿಸಿ ಪಿ.ಎನ್.ರವೀಂದ್ರ ಅವರು, ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ 2000 ರೂ ಜಮೆ ಆಗುತ್ತಿದೆಯಾ? ಎಂದು ಷರಾಫ್ ರಸ್ತೆ ತಿರುವಿನಲ್ಲಿನ ಮಹಿಳೆಯರನ್ನು ಪ್ರಶ್ನಿಸಿದರು.

ಹಾಗೆಯೆ ಭಾಗ್ಯ ಲಕ್ಷ್ಮಿ ಯೋಜನೆಯಡಿ ವಿದ್ಯುತ್ ಬಿಲ್ಲ ಉಚಿತ ಆಗಿದೆಯಾ? ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರಿ ಬಸ್‌ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದೀರಿ ಅಲ್ಲವೇ ಎಂದು ಪ್ರಶ್ನಿಸಿದಾಗ ಅವರು ಹೌದು ಹೌದು ಎಂದರು.

ನಗರಸಭೆ ಆಯುಕ್ತೆ ಜಿ.ಅಮೃತ, ಸಿಬ್ಬಂದಿ, ಗುತ್ತಿಗೆದಾರ ಕೆ.ಬಿ.ಮಂಜುನಾಥ್, ಮುರಳಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ದೇವರಮಳ್ಳೂರು ಡೇರಿಗೆ 2024-25ನೇ ಸಾಲಿನಲ್ಲಿ 7 ಲಕ್ಷ ರೂ.ನಿವ್ವಳ ಲಾಭ

0
Sidlaghatta Devaramallur Milk Dairy records 7 lakh profit

Devaramallur, Sidlaghatta : ರೈತರು ತಮ್ಮ ರಾಸುಗಳಿಗೆ ತಪ್ಪದೆ ಜೀವ ವಿಮೆ ಮಾಡಿಸಬೇಕು. ಇದರಿಂದ ಆಕಸ್ಮಿಕವಾಗಿ ರಾಸುಗಳು ಮೃತಪಟ್ಟರೆ ಆಗಬಹುದಾದ ಆರ್ಥಿಕ ತೊಂದರೆ ತಪ್ಪಲಿದೆ ಎಂದು ಕೋಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್ ರೈತರಲ್ಲಿ ಮನವಿ ಮಾಡಿದರು.

ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಕಷ್ಟು ರೈತರು ಹೆಚ್ಚು ಬೆಲೆ ಕೊಟ್ಟು ಉತ್ತಮ ತಳಿಯ ಸೀಮೆ ಹಸುಗಳನ್ನೆ ತಂದು ಸಾಕುತ್ತಾರೆ. ಆದರೆ ಜೀವ ವಿಮೆ ಮಾಡಿಸುವ ಪ್ರಮಾಣ ಬಹಳ ಕಡಿಮೆಯಿದೆ. ರೋಗ ರುಜಿನಗಳು ಬಂದು ಸಾವನ್ನಪ್ಪಿದರೆ ಬಹಳ ಆರ್ಥಿಕ ನಷ್ಟಕ್ಕೆ ಸಿಲುಕುತ್ತಾರೆ ಎಂದರು.

ಜೀವ ವಿಮೆ ಬಗ್ಗೆ ಸಾಕಷ್ಟು ಅರಿವು ಮೂಡಿಸುತ್ತಿದ್ದರೂ ಹೆಚ್ಚಿನ ರೈತರು ಆಸಕ್ತಿ ತೋರುತ್ತಿಲ್ಲ. ವಿಮೆಯ ಅರ್ಧ ಮೊತ್ತವನ್ನು ಸಹಕಾರ ಸಂಘ ಭರಿಸಲಿದ್ದು ಇನ್ನುಳಿದ ಅರ್ಧ ಮೊತ್ತವನ್ನು ಮಾತ್ರವೇ ರೈತ ಭರಿಸಬೇಕಾಗುತ್ತದೆ ಎಂದು ಹೇಳಿದರು.

ಮಳೆಗಾಲದಲ್ಲಿ ಹಾಲು ನೀಡುವ ಸೀಮೆ ಹಸುಗಳಿಗೆ ಬರೀ ಹಸಿ ಮೇವನ್ನು ಮಾತ್ರ ನೀಡದೆ ಹಸಿ ಮೇವಿನ ಜತೆಗೆ ಒಣ ಮೇವನ್ನು ಕೂಡ ನೀಡುವುದರಿಂದ ಮಾತ್ರ ಉತ್ತಮ ಗುಣಮಟ್ಟದ ಮತ್ತು ಹೆಚ್ಚು ಹಾಲನ್ನು ಸೀಮೆ ಹಸು ನೀಡುತ್ತದೆ ಎಂದು ತಿಳಿಸಿದರು.

ರೈತರು ತಮ್ಮದೇ ಜಮೀನಿನಲ್ಲಿ ಮೇವಿನ ಜೋಳವನ್ನು ಬೆಳೆದರೆ ರೈತರಿಗೆ ಪ್ರತಿ ಎಕರೆಗೆ 3 ಸಾವಿರ ರೂ ಪ್ರೋತ್ಸಾಹ ಧನ ಇಲಾಖೆಯಿಂದ ನೀಡಲಿದ್ದು ಆಸಕ್ತ ರೈತರು ಇಲಾಖೆ ಅಧಿಕಾರಿಗಳನ್ನು, ಡೇರಿ ಕಾರ್ಯನಿರ್ವಹಣಾಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಕೋಚಿಮುಲ್ ಶಿಬಿರ ಕಚೇರಿಯ ವಿಸ್ತರಣಾಧಿಕಾರಿ ಬಿ.ಶ್ರೀನಿವಾಸ್ 2024-25ನೇ ಸಾಲಿನ ಜಮಾ-ಖರ್ಚು ಮಂಡಿಸಿ ಸಭೆಯ ಅನುಮೋಧನೆ ಪಡೆದುಕೊಂಡರು. ಪ್ರಸಕ್ತ ವರ್ಷದಲ್ಲಿ 7 ಲಕ್ಷ ರೂಗಳ ನಿವ್ವಳ ಲಾಭ ಪಡೆದುಕೊಂಡಿದೆ ಎಂದು ವಿವರಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ದೇವರಾಜ್ ಮಾತನಾಡಿ, ಡೇರಿಯ ಅಭಿವೃದ್ದಿ ಆದರೆ ಹಾಲು ಉತ್ಪಾದಕರ ಅಭಿವೃದ್ದಿ ಆದಂತೆ. ಹಾಗಾಗಿ ಎಲ್ಲ ಹೈನುಗಾರರು ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡಿ ಸರಬರಾಜು ಮಾಡುವಂತೆ ಮನವಿ ಮಾಡಿದರು.

ಹೆಚ್ಚು ಹಾಲು ಸರಬರಾಜು ಮಾಡಿದ ಹೈನುಗಾರರಾದ ಆಂಜಿನಪ್ಪ, ಬೈರಮ್ಮ, ಕೇಶವ, ಹೈನುಗಾರರ ಪ್ರತಿಭಾವಂತ ಮಕ್ಕಳಾದ 7ನೇ ತರಗತಿಯ ತೇಜಸ್ವಿನಿ, ಎಸ್ಸೆಸ್ಸೆಲ್ಸಿಯ ನಿಖಿಲ್‌ ಗೌಡ, ದ್ವಿತೀಯ ಪಿಯುಸಿಯ ಸ್ಪೂರ್ತಿ ಮತ್ತು ಎಂಬಿಬಿಎಸ್ ಓದುತ್ತಿರುವ ಜೆ.ನಯನ ಅವರಿಗೆ ಪುರಸ್ಕರಿಸಿ ಪ್ರೋತ್ಸಾಹ ಧನ ವಿತರಿಸಲಾಯಿತು.

ಉಪಾಧ್ಯಕ್ಷ ಎಂ.ಕೇಶವರೆಡ್ಡಿ, ನಿರ್ದೇಶಕರಾದ ಡಿ.ಎನ್.ಕೃಷ್ಣಪ್ಪ, ಬಿ.ಎಲ್.ನಂಜುಂಡಪ್ಪ, ಎಂ.ಆನಂದಪ್ಪ, ಅಶೋಕ್ ಕುಮಾರ್, ಕೆ.ಮುನಿರೆಡ್ಡಿ, ಶಿಶಕುಮಾರ್, ಲಿಂಗಪ್ಪ, ಡಿ.ಎಂ.ವೆಂಕಟೇಶಪ್ಪ, ಗೌರಮ್ಮ, ಬೈರಮ್ಮ, ರಾಧಮ್ಮ, ಡೇರಿಯ ಕಾರ್ಯನಿರ್ವಾಹಕ ಮಂಜುನಾಥ್, ಸಿಬ್ಬಂದಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-29/08/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 29/08/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 350
Qty: 19146 Kg
Mx : ₹ 723
Mn: ₹ 520
Avg: ₹ 641

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 12
Qty: 802 Kg
Mx : ₹ 778
Mn: ₹ 633
Avg: ₹ 713


For Daily Updates WhatsApp ‘HI’ to 7406303366

ಕರ್ನಾಟಕ ರಾಜ್ಯದಲ್ಲಿ AIMIM ಪಕ್ಷ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ

0
Sidlaghatta AIMIM PArty Meeting

Sidlaghatta : ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮೇಲೆ ಜನರ ವಿಶ್ವಾಸ ಹೊರಟುಹೋಗಿದೆ ಹೀಗಾಗಿ AIMIM ಪಕ್ಷ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ರಾಜ್ಯಾಧ್ಯಕ್ಷ ಲತೀಫ್ ಖಾನ್ ಅಮೀರ್ ಖಾನ್ ಪಠಾನ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ನಜಮ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಎ ಐ ಎಂ ಐ ಎಂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜಾತ್ಯತೀತ ಪಕ್ಷವನ್ನು ಅಧಿಕಾರಕ್ಕೆ ತರುವ ಸಲುವಾಗಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದು ನಿಜ. ಆದರೆ ಅಧಿಕಾರಕ್ಕಾಗಿ ಜೆಡಿಎಸ್ ಪಕ್ಷ ಭಾರತೀಯ ಜನತಾ ಪಾರ್ಟಿಯೊಂದಿಗೆ ಕೈಜೋಡಿಸಿತು. ಹೀಗಾಗಿ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದೇವೆ. ಜೊತೆಗೆ ಸ್ಥಳೀಯ ಪುರಸಭೆ, ನಗರಸಭೆ, ಗ್ರಾಮ ಪಂಚಾಯಿತಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು, ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟ ಮಾತು ಮರೆತಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರನ್ನು ಕೇವಲ ಮತ ಬ್ಯಾಂಕುಗಳಾಗಿ ಬಳಸಿಕೊಂಡಿದ್ದಾರೆ ವಿನಃ ಅವರಿಗೆ ರಾಜಕೀಯ ಅಧಿಕಾರ ನೀಡುವ ವಿಚಾರ ಬಂದಾಗ ಹಿಂದಕ್ಕೆ ಸರಿಯುವ ಕಾಂಗ್ರೆಸ್ ಪಕ್ಷದ ನೀತಿಯನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ ಎಂದು ಜರಿದರು.

ದಲಿತರು ಮತ್ತು ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರು ಸಂಘಟಿತರಾದರೆ ಎಲ್ಲ ರಂಗದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದಾಗಿದೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಂಸದ ಬ್ಯಾರಿಸ್ಟರ್ ಅಸದ್ ಉದ್ದೀನ್ ಅವರು ಪಕ್ಷವನ್ನು ಸಂಘಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಅವರಿಗೆ ಶಕ್ತಿ ನೀಡುವ ಕೆಲಸವನ್ನು ಜನ ಮಾಡಿದರೆ ಮಾತ್ರ ಬದಲಾವಣೆ ತರಲು ಸಾಧ್ಯ ಎಂದರು.

ಎ ಐ ಎಂ ಐ ಎಂ ಜಿಲ್ಲಾಧ್ಯಕ್ಷ ಮಹಬೂಬ್ ಖಾನ್ ಮಾತನಾಡಿ, ಶಿಡ್ಲಘಟ್ಟ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಗರಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದರೂ ಸ್ಥಳೀಯ ಶಾಸಕರು ಮಾತ್ರ ಈ ವಿಚಾರದಲ್ಲಿ ಚಕಾರ ಎತ್ತುತ್ತಿಲ್ಲ. ಅವರಿಗೆ ಕೇವಲ ಅಲ್ಪಸಂಖ್ಯಾತರ ಮತಗಳು ಮಾತ್ರ ಬೇಕು. ಅವರ ಸಂಕಷ್ಟಗಳ ಬಗ್ಗೆ ಯಾವುದೇ ರೀತಿ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ನೀತಿಯನ್ನು ಪ್ರಸ್ತಾಪಿಸಿ ಜೈ ಭೀಮ್ ಜೈ ಭೀಮ್ ಘೋಷಣೆಯೊಂದಿಗೆ ಏಐಎಂಐಎಂ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಹಕರಿಸಬೇಕೆಂದು ಪಕ್ಷದ ಎಲ್ಲಾ ಮುಖಂಡರು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಮತ್ತು ಭಾರತೀಯ ಜನತಾ ಪಾರ್ಟಿಯ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಎ ಐ ಎಂ ಐ ಎಂ ಪಕ್ಷದ ಬೆಂಗಳೂರು ಉಸ್ತುವಾರಿ ರಹಮತ್ ಉಲ್ಲಾ ತೈಯಬ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮಹಮ್ಮದ್ ಶರ್ಫೂದ್ದೀನ್, ಪ್ರಧಾನ ಕಾರ್ಯದರ್ಶಿ ಮಝಹರ್ ಷರೀಫ್, ದಾವಣಗೆರೆ ಜಿಲ್ಲಾಧ್ಯಕ್ಷ ಮಹಮ್ಮದ್ ಅಲಿ ಶೇಕ್, ಜಿಲ್ಲಾ ಉಸ್ತುವಾರಿ ನವಾಜ್, ಮುನೀರ್ ಮಮ್ಮದ್ ರಿಯಾಜ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

KSRTC ಬಸ್‌ ನಲ್ಲಿ ಪ್ರಯಣಿಕನ ಸಾವು

0
Sidlaghatta KSRTC Bus Passenger Death

Sidlaghatta : ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿ ಕಡೆಗೆ ಸಂಚರಿಸುತ್ತಿದ್ದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಲ್ಲಿ ವ್ಯಕ್ತಿಯೋರ್ವ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ಮೃತನನ್ನು ತಾಲ್ಲೂಕಿನ ರಾಮಲಿಂಗಪುರದ ಗಾರೆ ಕೆಲಸದ ಪಿಳ್ಳವೆಂಕಟರಮಣಪ್ಪ ಎನ್ನಲಾಗಿದೆ.

ಮೃತ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದು ಗುರುವಾರ ಬೆಳಗ್ಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ವಾಪಸ್ ತಮ್ಮ ಗ್ರಾಮಕ್ಕೆ ತೆರಳಲು ಕೆ.ಎಸ್‌.ಆರ್‌.ಟಿ.ಸಿ ಬಸ್ ಹತ್ತಿದ್ದು, ಬಸ್ ನಗರದ ತಾಲ್ಲೂಕು ಕಚೇರಿ ಮುಂಭಾಗ ಹೋಗುತ್ತಿದ್ದಂತೆ ಕುಸಿದುಬಿದ್ದಿದ್ದಾನೆ. ಘಟನೆಯಿಂದ ಗಾಭರಿಗೊಂಡ ಬಸ್ ಚಾಲಕ ಮತ್ತು ಪ್ರಯಾಣಿಕರು ಬಸ್ ಸಮೇತ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರಾದರೂ ವ್ಯಕ್ತಿ ಅಷ್ಟೊತ್ತಿಗೆ ಮೃತ ಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿಡಲಾಗಿದೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಥಸಂಚಲ

0
Sidlaghatta Gowri Ganesha Eid Milad Festival Police Marchpast

Sidlaghatta : ಶಿಡ್ಲಘಟ್ಟ ನಗರದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕೆಂದು ಡಿ ವೈ ಎಸ್ ಪಿ ಪಿ. ಮುರಳಿಧರ್ ತಿಳಿಸಿದರು.

ನಗರದಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯಸ್ಥೆ ಕಾಪಾಡುವ ಸಲುವಾಗಿ ಮತ್ತು ನಾಗರಿಕರಲ್ಲಿ ಧೈರ್ಯ ತುಂಬಿಸಲು ಪಥ ಸಂಚಲನ ನಡೆಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಗೌರಿ ಗಣೇಶದ ಹಬ್ಬವನ್ನು ಹೋರಾಟದ ಕಿಚ್ಚು ಹಚ್ಚಿಸಲು ಆಚರಿಸಲಾಗುತ್ತಿತ್ತು. ಅದೇ ರೀತಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯನ್ನು ಮುಸ್ಲಿಂ ಸಮಾಜದವರು ಈದ್ ಮಿಲಾದ್ ಆಚರಿಸುತ್ತಿದ್ದಾರೆ. ಉಭಯ ಸಮುದಾಯದವರು ಶಾಂತಿ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಬೇಕೆಂದರು.

ಶಿಡ್ಲಘಟ್ಟ ನಗರದ ಟಿಬಿ ರಸ್ತೆ, ಅಶೋಕ ರಸ್ತೆ, ವಾಸವಿ ರಸ್ತೆ, ಗಾರ್ಡನ್ ರಸ್ತೆ, ಸಾರಿಗೆ ಬಸ್ ನಿಲ್ದಾಣ ಇನ್ನಿತರೆ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಥಸಂಚಲ ನಡೆಸಿದರು.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್, ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವೇಣುಗೋಪಾಲ್ ಮತ್ತು ಸಿಬ್ಬಂದಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-28/08/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 28/08/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 201
Qty: 10645 Kg
Mx : ₹ 721
Mn: ₹ 556
Avg: ₹ 661

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 04
Qty: 223 Kg
Mx : ₹ 770
Mn: ₹ 665
Avg: ₹ 708


For Daily Updates WhatsApp ‘HI’ to 7406303366

Sidlaghatta Silk Cocoon Market-27/08/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 27/08/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 225
Qty: 12213 Kg
Mx : ₹ 708
Mn: ₹ 538
Avg: ₹ 645

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 06
Qty: 420 Kg
Mx : ₹ 722
Mn: ₹ 639
Avg: ₹ 694


For Daily Updates WhatsApp ‘HI’ to 7406303366

ಬರಡು ರಾಸುಗಳ ತಪಾಸಣೆ ಶಿಬಿರ

0
Sidlaghatta Kalanayakanahalli cattle clinic

Kalanayakanahalli, Sidlaghatta : ಸಾಮಾನ್ಯ ಕೃಷಿ ಮಾಡುವ ರೈತರು ಮತ್ತು ಹೈನುಗಾರಿಕೆ ಮಾಡುವ ರೈತರು ತಮ್ಮ ಕುರಿ ಮೇಕೆ ಎತ್ತು ಎಮ್ಮೆ ಮುಖ್ಯವಾಗಿ ಸೀಮೆ ಹಸುಗಳಿಗೆ ತಪ್ಪದೆ ಜೀವ ವಿಮೆ ಮಾಡಿಸಿ ಎಂದು ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್‌ ರಾಮಯ್ಯ ರೈತರಿಗೆ ತಿಳಿಸಿದರು.

ತಾಲ್ಲೂಕಿನ ಜಂಗಮಕೋಟೆ ಹೋಬಳಿ ಕಾಳನಾಯಕನಹಳ್ಳಿಯಲ್ಲಿ ಜಿಕೆವಿಕೆ ಕೃಷಿ ಪದವಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯ್ಕಕ್ರಮದಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆ, ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹಾಲು ನೀಡುವ ಸೀಮೆ ಹಸು, ಸೀಮೆ ಕರುಗಳ ಬೆಲೆ ಹೆಚ್ಚಿದೆ. ನಾನಾ ಕಾರಣಗಳಿಂದ ಅವುಗಳು ಮೃತಪಟ್ಟರೆ ರೈತರಿಗೆ ಬಹಳಷ್ಟು ನಷ್ಟವಾಗುತ್ತದೆ. ಹಾಗಾಗಿ ತಪ್ಪದೆ ಜೀವ ವಿಮೆ ಮಾಡಿಸಿ. ಸಹಕಾರ ಸಂಘದಿಂದ ಅರ್ಧ ಮಿಕ್ಕ ಅರ್ಧ ವಿಮೆಯ ಪ್ರೀಮಿಯಂ ಹಣವನ್ನು ಮಾತ್ರ ರೈತರು ಕಟ್ಟಬೇಕಾಗುತ್ತದೆ ಎಂದರು.

ಗುಣಮಟ್ಟದ ಹಾಲು ಉತ್ಪಾದನೆಯತ್ತ ರೈತರು ಹೆಚ್ಚು ಗಮನ ಹರಿಸಬೇಕು, ಗುಣಮಟ್ಟದ ಆಧಾರದಲ್ಲಿ ಹಾಲಿಗೆ ಬೆಲೆ ನೀಡುವುದರಿಂದ ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸುವುದು ರೈತರು ಹಾಗೂ ಸಹಕಾರ ಸಂಘಕ್ಕೂ ಆರ್ಥಿಕವಾಗಿ ಲಾಭ ಆಗಲಿದೆ ಎಂದರು.

ಬರಡು ರಾಸುಗಳ ನಿರ್ವಹಣೆ ಆರ್ಥಿಕವಾಗಿ ಹೊರೆ ಆಗಲಿದೆ. ಹಾಗಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ, ಔಷದೋಪಚಾರ, ಆರೈಕೆಯಿಂದ ಬರಡುತನ ಹೋಗಲಿದೆ, ಪಶು ವೈದ್ಯರ ಮಾರ್ಗದರ್ಶನ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಅವರ ನೆರವು ಮಾರ್ಗದರ್ಶನ ಪಡೆಯಲು ರೈತರಲ್ಲಿ ಮನವಿ ಮಾಡಿದರು.

ಜಿಕೆವಿಕೆ ಸಹ ಪ್ರಾಧ್ಯಾಪಕಿ ಡಾ.ಸಿ.ಎಂ.ಸವಿತಾ ಮಾತನಾಡಿ, ರೈತರು ಉತ್ತಮ ಫಸಲು, ಬೆಳೆಯನ್ನು ಬೆಳೆಯಬೇಕಾದರೆ ಪೋಷಕಾಂಶ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆ ಮುಖ್ಯವಾಗಿ ಆಗಬೇಕಿದೆ. ಆಗ ಮಾತ್ರ ಉತ್ತಮ ಇಳುವರಿ ಸಿಗಲಿದೆ ಎಂದರು.

ಕೃಷಿ, ತೋಟಗಾರಿಕೆ, ಹೈನುಗಾರಿಕೆ ಯಾವುದೆ ಇರಲಿ ರೈತರು ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಪ್ರಯತ್ನ ಇನ್ನಷ್ಟು ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬರಡು ರಾಸುಗಳ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ, ರೇಬಿಸ್ ಲಸಿಕೆ ಅಭಿಯಾನ, ಕಾಲು ಮತ್ತು ಬಾಯಿ ರೋಗ ಲಸಿಕೆ ಅಭಿಯಾನ, ಜಂತುಹುಳು ನಿವಾರಣೆ ಔಷಧಿಗಳ ವಿತರಣೆ, ಮಿಶ್ರತಳಿ ಕರುಗಳ ಪ್ರದರ್ಶನ ನಡೆಯಿತು.

ವಿದ್ಯಾರ್ಥಿ ಲೋಕೇಶ್ ಮಾತನಾಡಿ, ನಾವು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಮೂರು ತಿಂಗಳ ಕಾಲ ಕಾಳನಾಯಕನಹಳ್ಳಿ ಗ್ರಾಮದಲ್ಲಿ ಬಂದು ರೈತರ ಜತೆಗೂಡಿ ಅವರ ಕುಟುಂಬದಲ್ಲಿ ನಾವು ಕೂಡ ಒಬ್ಬರಾಗಿದ್ದೇವೆ ಎಂದರು.

ರೈತರ ಜಮೀನುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ತಿಳಿಸುವುದು, ಚರ್ಚೆ, ಸಂವಾದ, ತರಬೇತಿಯಂತ ಕಾರ್ಯಕ್ರಮಗಳ ಮೂಲಕ ಪರಸ್ಪರ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗುತ್ತಿದೆ ಎಂದು ಹೇಳಿದರು.

ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪನ್ನ ಹೆಚ್ಚು ಲಾಭ ಮಾಡಿಕೊಡುವುದು ನಮ್ಮ ಉದ್ದೇಶ, ಆ ನಿಟ್ಟಿನಲ್ಲಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದ ಎಲ್ಲರ ಸಹಕಾರ ಮುಖ್ಯ ಎಂದರು.

ಗ್ರಾಮದ ಮುಖಂಡರಾದ ಎನ್.ರಮೇಶ್, ಮಂಜೇಶ್, ಡಾ.ಸುಧಾ, ಡಾ.ಆನಂದ್, ಡಾ.ಪ್ರಶಾಂತ್, ರಮೇಶ್ ಕುಮಾರ್, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!