15.1 C
Sidlaghatta
Sunday, December 28, 2025
Home Blog Page 50

ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ

0
Sidlaghatta Village Accountant Laptop Distribution

Sidlaghatta : ಕ್ಷೇತ್ರದ ಜನತೆ ಅದರಲ್ಲಿಯೂ ಮುಖ್ಯವಾಗಿ ರೈತರಿಗೆ ಶೀಘ್ರವಾಗಿ ಸೇವೆ ಸಲ್ಲಿಸಲು ನೆರವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ್ದು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಅವರು ಮಾತನಾಡಿದರು.

ಗ್ರಾಮ ಆಡಳಿತಾಧಿಕಾರಿಗಳ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಲ್ಯಾಪ್ ಟಾಪ್ ನೀಡಿದೆ. ಜನಸಾಮಾನ್ಯರು ಸೇರಿದಂತೆ ರೈತರು ತಮ್ಮ ಕೆಲಸಕ್ಕಾಗಿ ಕಚೇರಿಗೆ ಬಂದಾಗ ವಿನಾಕಾರಣ ಅವರನ್ನು ಕಚೇರಿಗೆ ಅಲೆಸದೇ ಶೀಘ್ರವಾಗಿ ಕೆಲಸ ಮಾಡಿಕೊಡಿ ಎಂದರು.

ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಡಿಜಿಟಲ್ ಕರ್ನಾಟಕದ ಭಾಗವಾಗಿ ಕಂದಾಯ ಇಲಾಖೆಯಲ್ಲಿ ರಾಜ್ಯದ ಎಲ್ಲಾ ಭೂ ದಾಖಲೆಗಳನ್ನು ಆನ್ ಲೈನ್ ವ್ಯವಸ್ಥೆಗೆ ತರಲಾಗುತ್ತಿದೆ. ಭೂ ಸುರಕ್ಷಾ, ಪಬ್ಲಿಕ್ ಖಾತೆ ಸೇರಿದಂತೆ ಎಲ್ಲವೂ ಡಿಜಿಟಲ್ ಆಗುತ್ತಿದೆ. ಹಿಂದಿನಂತೆ ಕಚೇರಿಯಿಲ್ಲದೆ ಫೋನ್‌ ನಲ್ಲಿ ಮಾತ್ರ ಕೆಲಸ ಮಾಡಬೇಕಾಗುತ್ತಿದ್ದ ತೊಂದರೆಯನ್ನು ನಿವಾರಿಸಲು ಇದೀಗ ಲ್ಯಾಪ್ ಟಾಪ್ ವಿತರಣೆಯಾಗಿದ್ದು ಅಧಿಕಾರಿಗಳು ಸರಿಯಾದ ತಾಂತ್ರಿಕ ಸೌಲಭ್ಯಗಳೊಂದಿಗೆ ಜನತೆಗೆ ಉತ್ತಮ ಸೇವೆ ನೀಡಲು ಸಜ್ಜಾಗಬೇಕಿದೆ ಎಂದರು.

ಗ್ರಾಮ ಆಡಳಿತಾಧಿಕಾರಿಗಳು ಈಗ ಡಿಜಿಟಲ್ ವ್ಯವಸ್ಥೆಯೊಂದಿಗೆ ತೊಡಗಿಸಿಕೊಂಡು ಗ್ರಾಮೀಣ ಮಟ್ಟದಲ್ಲಿಯೇ ಮಾಹಿತಿ ನಿರ್ವಹಣೆ, ದಾಖಲೆ ಸಂರಕ್ಷಣೆ ಹಾಗೂ ಸೇವಾ ವಿತರಣೆಯಲ್ಲಿ ನೂತನ ಪ್ರಗತಿಗೆ ಕಾರಣರಾಗಬೇಕಿದೆ. ಇದು “ಡಿಜಿಟಲ್ ಕರ್ನಾಟಕ” ಕನಸು ಸಾಕಾರವಾಗಲು ನೆರವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಆಯಿಷಾ ಬೀ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ನೈಸರ್ಗಿಕ ಕೃಷಿಯ ಬಗ್ಗೆ ರೈತರಿಗೆ ಅರಿವು ಕಾರ್ಯಕ್ರಮ

0
Sidlaghatta Appegowdanahalli Organic Farming Workshop

Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಕೃಷಿ ಇಲಾಖೆ ಮತ್ತು ಕಾಗತಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ ( ಡಿ.ಎ.ಟಿ.ಸಿ) ಸಹಯೋಗದಲ್ಲಿ ನೈಸರ್ಗಿಕ ಕೃಷಿಯ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾಗತಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಚೇತನಾ ಮಾತನಾಡಿ, ಭೂಮಿಗೆ ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಸುರಿದು ಭೂಮಿಯ ಫಲವತ್ತತೆಯನ್ನು ಹಾಳು ಮಾಡುವುದಲ್ಲದೆ, ಅದರಿಂದ ಬೆಳೆದ ತರಕಾರಿ, ಹಣ್ಣುಗಳನ್ನು ತಿಂದು ನಾವು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ಎಲ್ಲಾ ರೈತರು ನೈಸರ್ಗಿಕ ಕೃಷಿಯನ್ನು ಮಾಡಬೇಕೆಂದು ಮನವಿ ಮಾಡಿದರು.

ಸಂಪನ್ಮೂಲ ವ್ಯಕ್ತಿ ರಾಧಾಕೃಷ್ಣ ಮಾತನಾಡಿ, ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಕೃಷಿಯತ್ತ ಗಮನ ಹರಿಸಿದರೆ ಬೆಳೆಗಳಿಗೆ ತಗುಲಬಹುದಾದ ರೋಗಗಳನ್ನು ತಡೆಗಟ್ಟಬಹುದಲ್ಲದೆ ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿ, ನೈಸರ್ಗಿಕ ಕೃಷಿಯಲ್ಲಿ ಪ್ರಮುಖವಾಗಿ ಜೀವಾಮೃತ, ಬೀಜಾಮೃತ, ಪಂಚಗವ್ಯ, ಹಸಿರೆಲೆ ಗೊಬ್ಬರಗಳ ಮಹತ್ವ, ಮಣ್ಣು ಪರೀಕ್ಷೆ, ಪರಿಸರ ಸ್ನೇಹಿ ಕೀಟ ಹಾಗೂ ರೋಗ ನಿರ್ವಹಣೆಯ ಬಗ್ಗೆ ವಿವರಿಸಿದರು.

ಕೃಷಿ ಅಧಿಕಾರಿ ಸುನಿಲ್ ಕುಮಾರ್ ಮಾತನಾಡಿ, ಇಲಾಖೆಯ ಯೋಜನೆಗಳಾದ ಪಿ.ಎಂ.ಕಿಸಾನ್, ಕೃಷಿ ಯಂತ್ರೋಪಕರಣ, ಅಟಲ್ ಭೂಜಲ ಯೋಜನೆ, ಕೃಷಿ ಭಾಗ್ಯ, ಬೆಳೆ ಸಮೀಕ್ಷೆ, ಬೆಳೆ ವಿಮೆ ಮತ್ತಿತರ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಡಿ.ಎ.ಪಿ ರಸಗೊಬ್ಬರದ ಬದಲಾಗಿ ಕಾಂಪ್ಲೆಕ್ಸ್ ಗೊಬ್ಬರವನ್ನು ಬಳಸಲು ರೈತರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರೈತರಾದ ತ್ಯಾಗರಾಜು, ಮುನೀಂದ್ರ, ಗೋವಿಂದರಾಜು, ಬಚ್ಚರೆಡ್ಡಿ, ಶ್ರೀರಾಮ್, ನಾರಾಯಣಸ್ವಾಮಿ, ಹರೀಶ್, ವೆಂಕಟೇಶ್, ಅನಿಲ್, ಡಿ.ಮುನಿನಾರಾಯಣ, ವೇಣುಗೋಪಾಲ್, ಮುನಿಯಪ್ಪ, ರಾಘವೇಂದ್ರ, ಆವಲರೆಡ್ಡಿ, ಗೋವಪ್ಪ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಅವರೇ ಘೋಷಿಸಿದ ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ಸಿಎಂ ಹೆಣಗಾಡುತ್ತಿದ್ದಾರೆ

0
Sidlaghatta Seekal Ramachandra Gowda ED Raid

Sidlaghatta : ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿದೆ. ಹಣಕಾಸಿನ ತೊಂದರೆಯಿಂದ ಅನೇಕ ಯೋಜನೆಗಳು ಮತ್ತು ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು BJP ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆರೋಪಿಸಿದರು.

ಬಿಜೆಪಿ ಸೇವಾಸೌಧ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್ಥಿಕ ತಜ್ಞ, ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಿಎಂ ಎಂದೆಲ್ಲಾ ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಅವರೇ ಘೋಷಿಸಿದ ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ಹೆಣಗಾಡುತ್ತಿದ್ದಾರೆ ಎಂದರು.

ಬೀದಿ ಬದಿಯ ಸಣ್ಣ ಪುಟ್ಟ ವ್ಯಾಪಾರಿಗಳಿಂದ ಹಿಡಿದು ಯಾರನ್ನೂ ಕೂಡ ಬಿಡದೆ ಎಲ್ಲ ರೀತಿಯ ಸುಂಕ, ಕಂದಾಯ, ತೆರಿಗೆ ಹಾಕಿ ಜನ ಸಾಮಾನ್ಯರ ಬದುಕನ್ನು ನರಕವಾಗಿಸುತ್ತಿದ್ದಾರೆ. ಇದರಿಂದ ದಿನ ನಿತ್ಯ ಬಳಕೆಯ ಸರಕುಗಳ ಬೆಲೆ ಹೆಚ್ಚಿದ್ದು ಬದುಕು ನಡೆಸಲು ಜನ ಸಾಮಾನ್ಯರು ಕಷ್ಟಪಡುವಂತಾಗಿದೆ ಎಂದರು.

ಕೇವಲ ಪೋನ್ ಪೇ ಆಧಾರದಲ್ಲಿ ರಾಜ್ಯದ ಲಕ್ಷಾಂತರ ಬೀದಿ ಬದಿಯ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ಇಲಾಖೆ ಮೂಲಕ ನೊಟೀಸ್ ಕೊಡಿಸಿ ಲಕ್ಷಾಂತರ, ಕೋಟ್ಯಂತರ ರೂಪಾಯಿಗಳ ತೆರಿಗೆ ಕಟ್ಟುವಂತೆ ಸೂಚಿಸಿದ್ದು ವ್ಯಾಪಾರಿಗಳು ಲಕ್ಷ ಲಕ್ಷ, ಕೋಟಿ ಕೋಟಿ ತೆರಿಗೆ ನೊಟೀಸ್ ನೋಡಿ ಕಂಗಾಲಾಗಿದ್ದಾರೆ ಎಂದು ದೂರಿದರು.

ಪಂಚ ಗ್ಯಾರಂಟಿಗಳಿಗೆ ಮನಸೋತು ಮತ ಕೊಟ್ಟು ಅಧಿಕಾರಕ್ಕೆ ತಂದಿದ್ದಕ್ಕೆ ಇದೀಗ ರಾಜ್ಯದ ಮತದಾರರು ಕಾಂಗ್ರೆಸ್ ಸರ್ಕಾರದ ವಿರುದ್ದ ಶಾಪ ಹಾಕತೊಡಗಿದ್ದಾರೆ ಎಂದು ವ್ಯಂಗ್ಯವಾಡಿದರು.

ತೆರಿಗೆ ಕಟ್ಟುವಂತೆ ನೀಡಿರುವ ನೊಟೀಸ್‌ ಗೆ ಯಾರು ಕೂಡ ಹೆದರುವ ಅಗತ್ಯವಿಲ್ಲ, ನಿಮ್ಮೊಂದಿಗೆ ನಮ್ಮ ಬಿಜೆಪಿ ಪಕ್ಷವಿದ್ದು ನಿಮ್ಮೆಲ್ಲರ ನೆರವಿಗೆ ಸಹಾಯವಾಣಿ 8884245123 ಗೆ ಕರೆ ಮಾಡಿ ಎಂದು ಅವರು ನಾಗರಿಕರಲ್ಲಿ ಮನವಿ ಮಾಡಿದರು.

ರಾಜ್ಯದ ಉದ್ದಗಲಕ್ಕೂ ಈ ಬಗ್ಗೆ ಪೂರ್ಣ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ದ ತೀವ್ರ ಹೋರಾಟ ನಡೆಸಲು ಬಿಜೆಪಿ ರಾಜ್ಯ ಘಟಕ ತೀರ್ಮಾನಿಸಿದೆ. ನಿಮ್ಮೊಂದಿಗೆ ನಾವಿದ್ದೇವೆ, ಹೆದರಬೇಡಿ ಎಂದು ತಿಳಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-24/07/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 24/07/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 486
Qty: 26983 Kg
Mx : ₹ 656
Mn: ₹ 200
Avg: ₹ 482

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 13
Qty: 714 Kg
Mx : ₹ 676
Mn: ₹ 335
Avg: ₹ 551


For Daily Updates WhatsApp ‘HI’ to 7406303366

ಸಿದ್ಧಾರ್ಥನಗರದಲ್ಲಿ ಗಂಗಮ್ಮದೇವಿಯ ಜಾತ್ರೆ

0
Sidlaghatta Gangamma Devi Jatre

Sidlaghatta : ಶಿಡ್ಲಘಟ್ಟ ನಗರದ ಸಿದ್ಧಾರ್ಥನಗರದಲ್ಲಿ ಗಂಗಮ್ಮದೇವಿಯ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.

ತಲೆ ಮೇಲೆ ತಂಬಿಟ್ಟು ದೀಪ ಹೊತ್ತು ಊರ ಪ್ರದಕ್ಷಿಣೆ ನಡೆಸಿ ಗ್ರಾಮ ದೇವತೆಗಳಾದ ಶ್ರೀ ಗಂಗಮ್ಮದೇವಿ, ಶ್ರೀಪೂಜಮ್ಮ ದೇವಿ, ಶ್ರೀ ಎಲ್ಲಮ್ಮದೇವಿ, ಶ್ರೀನಾಗಲಮುದ್ದಮ್ಮ ದೇವಿ ಹಾಗೂ ಕೋಟೆ ಶ್ರೀಸೋಮೇಶ್ವರ ಸ್ವಾಮಿ ಹಾಗೂ ಊರ ಕೆರೆ ದೇವರು ಮುನೇಶ್ವರ ಸ್ವಾಮಿಗೆ ತಂಬಿಟ್ಟು ದೀಪದಾರತಿ ಬೆಳಗಿದರು.

ಜಾತ್ರೆಯ ಪ್ರಯುಕ್ತ ಸಿದ್ದಾರ್ಥ ನಗರದ ಎಲ್ಲೆಡೆ ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ತೋರಣ, ಗ್ರಾಮದ ಪ್ರಮುಖ ರಸ್ತೆಗಳು ನವವಧುವಿನಂತೆ ಶೃಂಗಾರಗೊಂಡಿದ್ದವು. ಸಿದ್ದಾರ್ಥನಗರ,ನಗರ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ನಗರದ ಸಿದ್ದಾರ್ಥ ನಗರದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವವನ್ನು ಬಹಳ ಅದ್ದೂರಿಯಿಂದ ನೆರವೇರಿಸಲಾಯಿತು. ಎಂದಿನಂತೆ ಈ ಬಾರಿಯೂ ಸಹ ಕುರಿ, ಮೇಕೆ, ಕೋಳಿ ಬಲಿ ನೀಡಿ ಸಕಾಲದಲ್ಲಿ ಮಳೆ ಬೆಳೆ ಆಗಲಿ, ಜನತೆ ಆರೋಗ್ಯದಿಂದ ಇರಲಿ ಎಂದು ಪ್ರಾರ್ಥಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

“ಗುರು ಪೂರ್ಣಿಮೆ” ಹಾಗೂ “ಸತ್ಸಂಗ” ಕಾರ್ಯಕ್ರಮ

0
sidlaghatta Guru Purnima Satsanga Programme

Sidlaghatta : ಸಮಾಜದಲ್ಲಿ ಏನಾದರೂ ಸಾಮಾಜಿಕ ಕ್ರಾಂತಿ, ಉತ್ತಮ ಬದಲಾವಣೆ, ಅಭಿವೃದ್ದಿ ಕಂಡರೆ ಅದರ ಹಿಂದೆ ವಿದ್ಯಾರ್ಥಿ ಮತ್ತು ಯುವಜನರ ಪಾತ್ರ ಬಹಳಷ್ಟಿರುತ್ತದೆ. ಈ ವಿದ್ಯಾರ್ಥಿ, ಯುವಜನರನ್ನು ಸರಿದಾರಿಯಲ್ಲಿ ಸಾಗುವಂತೆ ಮಾಡುವಲ್ಲಿ ತಾಯಂದಿರ ಪಾತ್ರ ಹಿಂದೆಂದಿಗಿಂತಲೂ ಇದೀಗ ಹೆಚ್ಚು ಮುಖ್ಯವಾಗಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.

ನಗರದ ಹೊರವಲಯದ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದ ಹಂಡಿಗನಾಳ ಬಳಿಯ ಶ್ರೀಬಾಲಾಜಿ ಕನ್ವೆಂಷನ್ ಹಾಲ್‌ ನಲ್ಲಿ ಹಮ್ಮಿಕೊಂಡಿದ್ದ “ಗುರು ಪೂರ್ಣಿಮೆ” ಹಾಗೂ “ಸತ್ಸಂಗ” ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರಿಗೆ ಅವರು ಆಶೀರ್ವಚನ ನೀಡಿದರು.

ಮಕ್ಕಳೊಂದಿಗೆ ತಂದೆಗಿಂತಲೂ ತಾಯಿಯಾದವಳು ಹೆಚ್ಚು ಒಡನಾಟ ಇಟ್ಟುಕೊಂಡಿರುತ್ತಾಳೆ. ಮಕ್ಕಳ ಚಲನ ವಲನದ ಮೇಲೆ ಹೆಚ್ಚು ನಿಗಾಯಿಡುವುದು ಕೂಡ ತಾಯಿಯೆ. ಹೆಚ್ಚು ಮಕ್ಕಳು ಅನುಕರಣೆ ಮಾಡುವುದು ಕೂಡ ತಾಯಿಯನ್ನೇ ಆದ ಕಾರಣ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವ ಹೊಣೆ ತಾಯಂದರಿಂದ ಆಗಬೇಕಿದೆ ಎಂದು ಹೇಳಿದರು.

ರಾಷ್ಟ್ರಕವಿ ಕುವೆಂಪು ಅವರು ಯುಗಕವಿಯಾಗಿ ಜಗದ ಕವಿಯಾಗಿ ಬೆಳೆಯಲು ಅವರ ತಾಯಿ ಹಾಕಿದ ಅಡಿಪಾಯ ಕಾರಣ. ಕುವೆಂಪು ಅವರ ತಾಯಿಗೆ ಓದು ಬರಹ ಬರುತ್ತಿರಲಿಲ್ಲ. ಆದರೆ ಕುವೆಂಪು ಅವರು ಸಾಕಷ್ಟು ಕಡೆ ನನ್ನ ಬೆಳವಣಿಗೆಯಲ್ಲಿ ನಮ್ಮ ತಾಯಿ ಪಾತ್ರ ಜಾಸ್ತಿ ಇದೆ ಎಂದಿದ್ದಾರೆ ಎಂದು ತಿಳಿಸಿದರು.

ಈ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ. ಹಾಗಾಗಿ ಪೋಷಕರು ತಮ್ಮ ಸಂಪಾದನೆಯ ಹೆಚ್ಚು ಭಾಗವನ್ನು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲೆಂದೆ ಖರ್ಚು ಮಾಡುತ್ತಾರೆ. ಈ ದಿನಗಳಲ್ಲಿ ಕೂಲಿ ಮಾಡುವ ವ್ಯಕ್ತಿ ಕೂಡ ತನ್ನಂತೆ ತನ್ನ ಮಕ್ಕಳು ಆಗಬಾರದೆಂದು ಉತ್ತಮ ವಿದ್ಯಾಭ್ಯಾಸ ನೀಡುವಂತಾಗಿದೆ ಎಂದು ಹೇಳಿದರು.

ನಮ್ಮ ಸಂಸ್ಕೃತಿಯಲ್ಲಿ ವ್ಯಾಸ ಪೂರ್ಣಿಮೆಗೆ ಹೆಚ್ಚಿನ ಮಹತ್ವ ಇದೆ. ಗುರು ಹಾಗೂ ಗುರಿ ಇಲ್ಲದೆ ಯಾವುದೇ ವ್ಯಕ್ತಿಗೆ ಮುಕ್ತಿ ಸಿಗುವುದಿಲ್ಲ. ಮನುಷ್ಯನ ಒಳ ಹಾಗೂ ಹೊರಗಿನ ವಿದ್ಯೆ ಫಲಪ್ರದ ಆಗಬೇಕಾದರೆ ಗುರುಗಳ ಮಾರ್ಗದರ್ಶನ ಬಹಳ ಮುಖ್ಯ ಎಂದರು.

ಈ ಜಿಲ್ಲೆಯು ಅನೇಕ ಸಾಧು, ಸಂತರು, ಶರಣರು ತಪಸ್ಸು ಮಾಡಿದ ಪುಣ್ಯ ಭೂಮಿ. ಆಧ್ಯಾತ್ಮಿಕತೆಯ ವಿಚಾರದಲ್ಲಿ ಅನೇಕ ಸಂಗತಿಗಳು ಜಿಲ್ಲೆಯಲ್ಲಿ ಮೇಳೈಸಿವೆ, ನಾವೆಲ್ಲರೂ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡು ಉತ್ತಮ ಬದುಕನ್ನಾಗಿಸಿಕೊಳ್ಳಬೇಕೆಂದರು.

ಮಠದ ಭಕ್ತರಾದ ಸಹನಾ ರಾಜೀವ್‌ ಗೌಡ, ರಾಣಿ ಸೀಕಲ್ ರಾಮಚಂದ್ರಗೌಡ ಮತ್ತು ಪಾಲುಣ್ಯ ಸಚಿನ್ ದಂಪತಿಗಳು ಸೇರಿದಂತೆ ಮಠದ ಅನೇಕ ಭಕ್ತರು ದಂಪತಿ ಸಮೇತ ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿ ಪಾದಪೂಜೆ ಸಲ್ಲಿಸಿದರು. ನೂರಾರು ವಿದ್ಯಾರ್ಥಿಗಳು ಪೋಷಕರೊಂದಿಗೆ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಚನ ಪಡೆದರು.

ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಕೆಪಿಸಿಸಿ ಸಂಯೋಜಕ ಹಾಗೂ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಮಾಜಿ ಶಾಸಕ ರಾಜಣ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಯುವ ಸೇನೆ ಅಧ್ಯಕ್ಷ ಜೆಎಸ್.ವೆಂಕಟಸ್ವಾಮಿ, ತಹಶೀಲ್ದಾರ್ ಗಗನ ಸಿಂಧು, ಹಿರಿಯ ವಕೀಲ ಪಾಪಿರೆಡ್ಡಿ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಬಿಜಿಎಸ್ ಶಾಲೆಯ ಪ್ರಿನ್ಸಿಪಾಲ್ ಕೆ.ಮಹದೇವ್ ಸೇರಿದಂತೆ ಮಠದ ಭಕ್ತರು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸೊರಕಾಯಲಹಳ್ಳಿಯಲ್ಲಿ ಏಳು ಗ್ರಾಮ ದೇವತೆಗಳ ಮೆರವಣಿಗೆ

0
Sidlaghatta Sorakayalahalli jatre

Sorakayalahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸೊರಕಾಯಲಹಳ್ಳಿಯಲ್ಲಿ ಗ್ರಾಮದ ಏಳು ದೇವತೆಯರಾದದ ಗಂಗಮ್ಮ, ನೆರಡಮ್ಮ, ಸಪ್ಪಲಮ್ಮ, ಪೂಜಮ್ಮ, ಅಷ್ಟಮೂರ್ತಮ್ಮ, ಚೌಡೇಶ್ವರಿ ದೇವಿ, ಕಾಳಿಕಾಂಭ ದೇವಿಯನ್ನು ಆಶಾಡ ಮಾಸದ ಪ್ರಯುಕ್ತವಾಗಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿ, ಮಹಿಳೆಯರು ತಲೆಯ ಮೇಲೆ ಕಳಶವನ್ನು ಹೊತ್ತು ಉತ್ಸವ ದೇವರುಗಳ ಜೊತೆಯಲ್ಲಿ ಮೆರವಣಿಗೆ ನಡೆಸಿದರು.

ಏಳು ಗ್ರಾಮ ದೇವತೆಗಳಿಗೆ ಪ್ರತಿ ಮನೆ ಮನೆಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮ ದೇವತೆಗಳ ಮೂರ್ತಿಗಳನ್ನು ಟ್ರಾಕ್ಟರ್ ಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಮಹಿಳೆಯರು ದೇವರಿಗೆ ಕಳಶದೊಂದಿಗೆ ಪೂಜೆ ಸಲ್ಲಿಸಿದರು. ಹಳ್ಳಿಯಲ್ಲಿ ಅನ್ನ ಸಂತರ್ಪಣೆಯನ್ನು ಆಯೋಜನೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸೊರಕಾಯಲಹಳ್ಳಿ ಗ್ರಾಮದ ಮುಖಂಡರು,ಯುವಕರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-23/07/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 23/07/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 424
Qty: 23201 Kg
Mx : ₹ 639
Mn: ₹ 266
Avg: ₹ 521

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 12
Qty: 977 Kg
Mx : ₹ 639
Mn: ₹ 520
Avg: ₹ 584


For Daily Updates WhatsApp ‘HI’ to 7406303366

15 ವರ್ಷಗಳ ನಂತರ ಚೌಡಸಂದ್ರ ಗ್ರಾಮದಲ್ಲಿ ಜಾತ್ರಾ ಮಹೋತ್ಸವ

0
Sidlaghatta Cohowdasandra Jatre

Chowdasandra, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ 15 ವರ್ಷಗಳ ನಂತರ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಮೂರು ದಿನ ಗ್ರಾಮಸ್ಥರೆಲ್ಲರೂ ಸೇರಿ ಸೌಹಾರ್ಧತೆಯಿಂದ ಆಚರಿಸಿದರು.

ಸೋಮವಾರ ಗ್ರಾಮ ದೇವರುಗಳಾದ ಶ್ರೀಆಂಜನೇಯಸ್ವಾಮಿ, ಶ್ರೀಸೋಮೇಶ್ವರಸ್ವಾಮಿ, ಶ್ರೀಗಣೇಶ , ಶ್ರೀ ವೆಂಕಟರಮಣಸ್ವಾಮಿ, ಶ್ರೀಶನೇಶ್ವರಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ಮಂಗಳವಾರ ಗ್ರಾಮದೇವತೆಗಳಾದ ಶ್ರೀಸಪ್ಪಲಮ್ಮ ದೇವಿ, ಶ್ರೀಗಂಗಮ್ಮ ದೇವಿ, ಶ್ರೀಸುಗ್ಗಲಮ್ಮ ದೇವಿ, ಶ್ರೀ ಮಾರಿಯಮ್ಮ ದೇವಿ, ಕಾಟೇರಮ್ಮ ದೇವಿ ದೇವಾಲಯಗಳಲ್ಲಿ ದೀಪ ಬೆಳಗಿ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.

ಗ್ರಾಮದ ಪ್ರತಿಯೊಂದು ಮನೆಯಿಂದಲೂ ಗೃಹಿಣಿಯರು, ಹೆಂಗಳೆಯರು, ತವರಿಗೆ ಬಂದ ಹೆಣ್ಣು ಮಕ್ಕಳು ತಲೆ ಮೇಲೆ ತಂಬಿಟ್ಟಿನ ದೀಪ ಹೊತ್ತು ಗ್ರಾಮ ಹಾಗೂ ದೇವಾಲಯಗಳ ಪ್ರದಕ್ಷಿಣೆ ಹಾಕಿ ಭಕ್ತಿ ಬಾವದಿಂದ ತಂಬಿಟ್ಟು ದೀಪದಾರತಿಗಳನ್ನು ಬೆಳಗಿದರು.

ಮಂಗಳವಾದ್ಯ, ತಮಟೆ ವಾದ್ಯ ಸೇರಿದಂತೆ ವಿವಿಧ ಕಲಾತಂಡಗಳ ತಾಳ ಮನರಂಜಿಸಿತು. ಗ್ರಾಮದ ದೇವಾಲಯಗಳಿಗೆ, ಪ್ರಮುಖ ರಸ್ತೆಗಳು ಹಾಗೂ ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಮತ್ತು ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ಗ್ರಾಮದ ಜಾತ್ರಾ ಮಹೋತ್ಸವಕ್ಕೆ ಕಳೆಕಟ್ಟಿತ್ತು.

15 ವರ್ಷಗಳ ನಂತರ ಗ್ರಾಮದಲ್ಲಿ ನಡೆದ ಊರ ಜಾತ್ರೆಯಲ್ಲಿ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಸಂಭ್ರಮದಿಂದ ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ದೇವರಮಳ್ಳೂರು ಗ್ರಾಮದಲ್ಲಿ ವಿಶೇಷ ಸತ್ಸಂಗ- ದಿವ್ಯ ಸತ್ಸಂಗ ಕಾರ್ಯಕ್ರಮ

0
Devaramallur Satsanga Programme

Devaramallur, Sidlaghatta : ನಾವು ಪ್ರತಿ ನಿತ್ಯದ ಕೆಲಸ ಕಾರ್ಯಗಳ ನಡುವೆ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಪರಿಸರ, ಪ್ರಕೃತಿಯೊಂದಿಗೆ ಒಟನಾಟವಿಟ್ಟುಕೊಂಡು ಬದುಕಬೇಕು. ಸಮಾಜಮುಖಿ ಬದುಕು ನಮ್ಮದಾಗಬೇಕೆಂದು ಬಿಜೆಪಿ ಗ್ರಾಮೀಣ ಅಧ್ಯಕ್ಷ ಸೀಕಲ್ ಆನಂದಗೌಡ ತಿಳಿಸಿದರು.

ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶಿಡ್ಲಘಟ್ಟದ ವಿವೇಕ ಜಾಗೃತ ದಳ ಹಾಗೂ ಉಡುಪಿಯ ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್‌ ನ ಆಶ್ರಯದಲ್ಲಿ ಗ್ರಾಮದ ಶ್ರೀಆತ್ಮ ರಾಮ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ- ದಿವ್ಯ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಭೂಮಿಯ ಮೇಲೆ ಜೀವಿಸಿರುವ ಎಲ್ಲ ಜೀವಿಗಳಲ್ಲೂ ಮನುಷ್ಯ ಜೀವಿಯ ನಮ್ಮ ಜನ್ಮ ಬಹಳ ಪವಿತ್ರ ಮತ್ತು ಸಾರ್ಥಕವಾದದ್ದು. ಅಪರೂಪಕ್ಕೆ ನಮಗೆ ಮನುಷ್ಯ ಜನ್ಮ ಸಿಗಲಿದ್ದು ಈ ಮನುಷ್ಯ ಜನ್ಮವನ್ನು ನಾವು ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಬದುಕು ಸಾಗಬೇಕೆಂದರು.

ಪೂಜೆ ಪುನಸ್ಕಾರದಂತ ಧಾರ್ಮಿಕ ಕಾರ್ಯಗಳು, ಸತ್ಸಂಗ, ದಾರ್ಶನಿಕರ ಆಶೀರ್ವಚನಗಳಂತ ಕಾರ್ಯಗಳಲ್ಲಿ ಭಾಗವಹಿಸಿ ನಮ್ಮ ಧಾರ್ಮಿಕ ಚಿಂತನೆಗಳು, ಹಿತವಚನಗಳು, ಸನಾತನ ಧರ್ಮದ ಬಗ್ಗೆ ತಿಳಿದುಕೊಂಡು ನಮ್ಮ ಬದುಕನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬೇಕಿದೆ ಎಂದರು.

ಸಾಲಿಗ್ರಾಮ ಡಿವೈನ್ ಪಾರ್ಕ್‌ ನ ಆರ್ತ ಸೇವಕ ಡಿ.ಎಸ್.ಯಶ್ವಂತ್ ವಿಶೇಷ ಉಪನ್ಯಾಸ ನೀಡಿ, ನಮ್ಮ ಧಾರ್ಮಿಕ ಚಿಂತನೆಗಳು, ಆಚಾರ ವಿಚಾರಗಳನ್ನು, ಸಂಪ್ರದಾಯಗಳನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಮತ್ತು ಅವರು ಆಚರಿಸುವ ಕೆಲಸ ಆಗಬೇಕು.

ಒಂದು ಭಾಷೆ ಉಳಿಯಬೇಕೆಂದರೆ ಆ ಭಾಷೆಯನ್ನು ಮಾತನಾಡುವವರು ಇರಬೇಕು. ಹಾಗೆಯೆ ಒಂದು ಧರ್ಮ ಉಳಿಯಬೇಕೆಂದರೆ ಧರ್ಮವನ್ನು ಹಾಗೂ ಧರ್ಮದ ಕಟ್ಟುಪಾಡು, ಆಚಾರಗಳನ್ನು ಸಂಪ್ರದಾಯಗಳನ್ನು ಪಾಲಿಸುವ ತನಕ ಧರ್ಮ ಇರುತ್ತದೆ ಎಂದರು.

ಶ್ರೀ ಆತ್ಮರಾಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.

ಡಿವೈನ್ ಪಾರ್ಕ್‌ ನ ಪ್ರಭಾಕರ್, ರಾಮಕಷ್ಣಪ್ಪ, ವಿವೇಕ ಜಾಗೃತ ಬಳಗದ ಅಧ್ಯಕ್ಷ ಆನಂದ್, ಶಿವಣ್ಣ, ರಾಮಕೃಷ್ಣಪ್ಪ, ಮಧು, ಗ್ರಾಮದ ಮುಖಂಡರಾದ ವೆಂಕೋಬರಾವ್, ಬಚ್ಚಪ್ಪ, ಎಚ್.ವಿ.ಅಕ್ಕಲಪ್ಪ, ಬಾಲಕೃಷ್ಣ, ಆನಂದ್, ವೆಂಕಟಸ್ವಾಮಿ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!