ಪಟ್ಟಣದ ಬಸ್ ನಿಲ್ದಾಣದ ಬಳಿ ಶುಕ್ರವಾರ ಬೆಳಗಿನ ಜಾವ ಅಪರಿಚಿತರು ಸುಮಾರು 85 ಕ್ಕೂ ಹೆಚ್ಚು ವಯಸ್ಸಿನ ವೃದ್ಧೆಯನ್ನು ಬಿಟ್ಟು ಹೋಗಿರುವ ಮನ ಕಲಕುವ ಘಟನೆ ನಡೆದಿದೆ.
ಬಸ್ ನಿಲ್ದಾಣದ ಪುಸ್ತಕ ಅಂಗಡಿಯ ಮಾಲೀಕ ಮುನಿರಾಜು ಬೆಳಿಗ್ಗೆ ಅಂಗಡಿ ತೆಗೆಯಲು ಬಂದಾಗ ರಸ್ತೆಯಲ್ಲಿ ಸುಸ್ತಾಗಿ ಮಲಗಿದ್ದ ವೃದ್ಧೆಯನ್ನು ಗಮನಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ತಿಮ್ಮಕ್ಕನ ಸಹಾಯ ಪಡೆದು ನೆರಳಿನಲ್ಲಿ ತಂದು ಮಲಗಿಸಿದ್ದಾರೆ. ಹೋಟೆಲಿನಿಂದ ಇಡ್ಲಿ ತಂದು ತಿನಿಸಿದ್ದಾರೆ. ನಂತರ ಮಾತನಾಡಿಸಿ ವಿಚಾರಿಸಿದಾಗ ಅಜ್ಜಿ ಕೈ ಸನ್ನೆಯ ಮೂಲಕ ಮಾತುಬಾರದೆಂದು ತಿಳಿಸಿದಾಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಾಶ್ ಕುಮಾರ್ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣ ಮತ್ತು ವಯೋವೃದ್ಧರ ಇಲಾಖೆಯ ಅಧಿಕಾರಿ ಶಾಂತಾ ಅರಸ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ತಾಲ್ಲೂಕಿನ ಗೊರಮಡುಗು ಗ್ರಾಮದ ವೃದ್ಧಾಶ್ರಮದ ಓಬಣ್ಣ ಅವರ ವಶಕ್ಕೆ ಈ ವೃದ್ಧೆಯನ್ನು ಒಪ್ಪಿಸಿದರು.
ಅಪರಿಚಿತರು ತ್ಯಜಿಸಿ ಹೋಗಿದ್ದ ವೃದ್ಧೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆ
- Advertisement -
- Advertisement -
- Advertisement -
- Advertisement -