ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ವತಿಯಿಂದ ಪಾರ್ವತಿ ಸಮೇತ ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವ

- Advertisement -
- Advertisement -

ತಾಲ್ಲೂಕಿನ ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ವತಿಯಿಂದ ಪಾರ್ವತಿ ಸಮೇತ ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವ, ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದ ವಾರ್ಷಿಕೋತ್ಸವ, ಬಸವ ಜಯಂತಿ ಹಾಗೂ ಶಿವಕುಮಾರಸ್ವಾಮಿಗಳ 107ನೇ ಜನ್ಮದಿನವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಪುರಾತನ ನಗರೇಶ್ವರ ದೇವಾಲಯದಲ್ಲಿ ಬುಧವಾರ ಸಂಜೆಯಿಂದ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. ಅಗ್ರೋಧಕ ಗಂಗಾಪೂಜೆ, ಗಣಪತಿಪೂಜೆ, ವರುಣ ವಾಸ್ತುಪೂಜೆ, ನಾಂದಿ, ಋತ್ವಿಗಾವರಣ, ರಕ್ಷಾಬಂಧನ, ಅಸ್ತ್ರರಾಜ ಪೂಜೆ, ಮೃತ್ರಂಗರಣ, ಅಂಕುರಾರ್ಪಣೆ, ವಾಸ್ತುಹೋಮ, ಗಣಪತಿಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಗುರುವಾರ ಬೆಳಿಗ್ಗೆಯಿಂದ ಪ್ರಾರಂಭವಾದ ಪೂಜೆಗಳಲ್ಲಿ ಭಕ್ತರೆಲ್ಲ ಪಾಲ್ಗೊಂಡಿದ್ದರು. ಗಣಪತಿ ಪೂಜೆ, ಸರ್ವದೇವತಾ ಕಳಶಗಳ ಪೂಜೆ, ನವಗ್ರಹ ಪೂಜೆ, ಪ್ರಧಾನ ಕಳಶಗಳ ಪೂಜೆ, ಧ್ವಜಾರೋಹಣ, ಮೂಲದೇವರಿಗೆ ರುದ್ರಾಭಿಷೇಕ, ಪ್ರಧಾನ ಹೋಮ, ಪೂರ್ಣಾಹುತಿ ನಂತರ ಪಾರ್ವತಿ ಸಮೇತ ನಗರೇಶ್ವರಸ್ವಾಮಿಯ ಕಲ್ಯಾಣೋತ್ಸವವನ್ನು ನಡೆಸಲಾಯಿತು. ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗಿಸಿದ ನಂತರ ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಿದ್ದರು.
‘ನಗರ್ತ ಮಂಡಳಿ ವತಿಯಿಂದ ಆಯೋಜಿಸಿರುವ ದೇವರ ಕಲ್ಯಾಣೋತ್ಸವ, ಬಸವ ಜಯಂತಿ ಹಾಗೂ ಶಿವಕುಮಾರಸ್ವಾಮಿಗಳ 107ನೇ ಜನ್ಮದಿನ ಆಚರಣೆಯ ಉದ್ದೇಶ ದೇವರ ಅನುಗ್ರಹ ಎಲ್ಲರ ಮೇಲೂ ಆಗಿ ಮಳೆ ಬೆಳೆ ಕಾಲಕಾಲಕ್ಕೆ ಆಗಲಿ ಎಂಬುದಾಗಿದೆ. ಲೋಕಕಲ್ಯಾಣಕ್ಕಾಗಿ ನಡೆಯುವ ಈ ಪೂಜಾ ಕಾರ್ಯಕ್ರಮಗಳು ಸದ್ಭಾವನೆಯಿಂದ ಕೂಡಿದ್ದು, ಎಲ್ಲರ ಪಾಲ್ಗೊಳ್ಳುವಿಕೆಯಿಂದ ಅರ್ಥಪೂರ್ಣವಾಗಿದೆ’ ಎಂದು ಶಾಸಕ ಎಂ.ರಾಜಣ್ಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಿಳಿಸಿದರು.
ಅಯೋಧ್ಯನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ಅಧ್ಯಕ್ಷ ಶಿವಶಂಕರ್‌, ಕಾರ್ಯದರ್ಶಿ ಕೆ.ಎಂ.ವಿನಾಯಕ, ಕೆ.ಸಿ.ಸುರೇಶ್‌ಬಾಬು, ಆರ್‌.ಮಲ್ಲಿಕಾರ್ಜುನ, ಎಸ್‌.ನಾಗರಾಜ್‌, ನಗರ್ತ ಮಹಿಳಾ ಮಂಡಳಿ ಅಧ್ಯಕ್ಷೆ ಉಮಾ ಸುರೇಶ್‌ಬಾಬು, ಉಷಾ ನಾಗರಾಜ್‌, ರೂಪಾ, ವಿದ್ಯಾ, ಮುಕ್ತಾಂಬ, ಶುಭಾ, ನಗರ್ತ ಯುವಕ ಮಂಡಳಿ ಅಧ್ಯಕ್ಷ ಮಂಜುನಾಥ್‌, ದೇವರಾಜ್‌, ಮುಖೇಶ್‌, ನವೀನ್‌, ಅನಿಲ್‌ಕುಮಾರ್‌, ರೋಹಿತ್‌, ರೋಹನ್‌ ಆರ್‌.ಗಂಧರ್ವ, ಮಹೇಶ್‌, ಶಿವಶಂಕರ್‌, ಭರತ್‌, ಮುರಳಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!