19.9 C
Sidlaghatta
Sunday, July 20, 2025

ಆರೋಪಿಗಳನ್ನು ಬಂಧಿಸಲು ಒಕ್ಕಲಿಗರ ಯುವ ಸೇನೆ ಸಂಘದ ಸದಸ್ಯರ ಮನವಿ

- Advertisement -
- Advertisement -

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ಆರೋಪಿಗಳನ್ನು ಹಿಡಿದುಕೊಟ್ಟರೂ ಬಿಟ್ಟು ಕಳಿಸಿದ ಪೇದೆ ಜಯರಾಮ್ ರನ್ನು ಅಮಾನತ್ತುಗೊಳಿಸಬೇಕೆಂದು ಒಕ್ಕಲಿಗರ ಯುವ ಸೇನೆ ಸಂಘದ ಸದಸ್ಯರು ಡಿ.ವೈ.ಎಸ್.ಪಿ ನಾಗೇಶ್ ಅವರಿಗೆ ಮನವಿಪತ್ರವನ್ನು ಸೋಮವಾರ ಸಲ್ಲಿಸಿದರು.
ಇದ್ಲೂಡು ರಸ್ತೆಯ ಮಾರುತಿನಗರದ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸುನಿಲ್, ಕಲ್ಯಾಣ್, ಮಂಜು, ಶಶಿ ಎಂಬುವವರು ಗುಂಪುಗೂಡಿ ಬಂದು ಸಂದೀಪ್, ನಾಗೇಶ್ ಮತ್ತು ಮಹೇಶ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮಾರಕಾಸ್ತ್ರಗಳೊಂದಿಗೆ ಹಿಂದೆ ಹಲ್ಲೆ ನಡೆಸಿರುವವರು ಗುಂಪುಗೂಡಿ ಬಂದಿದ್ದರು. ಆ ಸಮಯದಲ್ಲಿ ಮೂವರನ್ನು ಹಿಡಿದು ಪೇದೆ ಜಯರಾಮ್ಗೆ ಒಪ್ಪಿಸಲಾಗಿತ್ತು. ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೇ ಆರೋಪಿಗಳನ್ನು ಬಿಟ್ಟು ಕಳಿಸಿದ್ದಾರೆ. ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಬೇಕು. ಪೇದೆ ಜಯರಾಮ್ ರನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು.
ವಿನಾಕಾರಣ ಒಕ್ಕಲಿಗ ಸಮುದಾಯದವರ ಮೇಲೆ ಸುಳ್ಳು ದಾಖಲೆಗಳೊಂದಿಗೆ ಜಾತಿ ನಿಂದನೆಯ ದೂರು ದಾಖಲಿಸಬಾರದು. ಅದಕ್ಕೆ ಪ್ರೋತ್ಸಾಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.
ಒಕ್ಕಲಿಗರ ಯುವ ಸೇನೆ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಮುರಳಿ, ಶ್ರೀನಾಥ್, ರಾಜಣ್ಣ, ವಿಜಿ, ಸಂತೋಷ್, ರೆಡ್ಡಿ, ಮಂಜುನಾಥ್, ಮುದ್ದರಾಜ್ ಹಾಜರಿದ್ದರು

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!