ವಿಜಯ ದಶಮಿ ಅಂಗವಾಗಿ ಶಿಡ್ಲಘಟ್ಟದಲ್ಲಿ ಆರ್ಎಸ್ಎಸ್ ಸ್ವಯಂಸೇವಕರಿಂದ ಪಥ ಸಂಚಲನ ಏರ್ಪಡಿಸಲಾಗಿತ್ತು.
ನಗರದ ಅರಳೆಪೇಟೆಯ ಶ್ರೀ ಬಸವೇಶ್ವರ ದೇವಾಲಯದಿಂದ ಆರಂಭವಾದ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪಥ ಸಂಚಲನ ಸಾಗಿದ ಮಾರ್ಗದ ಉದ್ದಕ್ಕೂ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಾರ್ವಜನಿಕರು, ನಾಗರೀಕರು ದೇಶ ಪ್ರೇಮ ಮೆರೆದರು.
ಗಣವೇಷಧಾರಿಗಳು ಭಾರತ್ ಮಾತಾಕಿ ಜೈ ಘೋಷಣೆಗಳೊಂದಿಗೆ ನಗರದ ಅಶೋಕ ರಸ್ತೆ, ಹೂವಿನ ವೃತ್ತ, ಕೋಟೆ ವೃತ್ತ, ಕೆಂಪಣ್ಣ ವೃತ್ತ, ವಿಜಯ ಲಕ್ಷ್ಮೀ ಟಾಕೀಸ್ ವೃತ್ತ, ಉಲ್ಲೂರು ಪೇಟೆ ಮೂಲಕ ಪಥ ಸಂಚಲನ ನಡೆಸಿದರು.
- Advertisement -
- Advertisement -
- Advertisement -
- Advertisement -