ನಗರದ ಅಶೋಕ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕಿನ ಎ.ಟಿ.ಎಂ. ಅನ್ನು ಶುಕ್ರವಾರ ರಾತ್ರಿ ಕಳ್ಳತನ ಮಾಡಲು ಪ್ರಯತ್ನಿಸಲಾಗಿದೆ. ಒಂದು ಬೀಗವನ್ನು ಮುರಿದುಹಾಕಿದ್ದು, ರಕ್ತದ ಕಲೆಯು ಅಲ್ಲಿ ಕಂಡುಬಂದಿದೆ.
ಸ್ಥಳಕ್ಕೆ ಬ್ಯಾಂಕಿನ ವ್ಯವಸ್ಥಾಪಕ ಶಶಿಕುಮಾರ್ ಹಾಗೂ ಪೊಲೀಸರು ಭೇಟಿ ನೀಡಿದರು. “ಕಳವು ಮಾಡಲು ಪ್ರಯತ್ನ ನಡೆದಿದೆ. ಆದರೆ ಸಂಪೂರ್ಣವಾಗಿ ಎರಡೂ ಕಡೆ ಬೀಗಗಳನ್ನು ಮುರಿದಿಲ್ಲ. ಈ ಬಗ್ಗೆ ದೂರು ನೀಡಿದ್ದೇವೆ” ಎಂದು ಬ್ಯಾಂಕಿನ ವ್ಯವಸ್ಥಾಪಕ ಶಶಿಕುಮಾರ್ ತಿಳಿಸಿದರು.
ರಕ್ತದ ಕಲೆಯನ್ನು ಕಂಡವರು ಬಹುಶಃ ಬೀಗ ಮುರಿಯುವಾಗ ಕಳ್ಳರಿಗೆ ಏಟಾಗಿರಬಹುದು. ಅದಕ್ಕೇ ಕಳ್ಳತನದ ಪ್ರಯತ್ನದಲ್ಲಿ ಸಫಲರಾಗಿಲ್ಲ. ಮುಖ್ಯ ರಸ್ತೆಯಲ್ಲಿರುವ ಎಟಿಎಂ ಕಳ್ಳತನಕ್ಕೆ ಯತ್ನಿಸಿರುವುದನ್ನು ಕಂಡಾಗ ಆತಂಕವಾಗುತ್ತದೆ. ಪೊಲೀಸರು ತಮ್ಮ ಗಸ್ತನ್ನು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.