ಬಂಬೈನೂರ ಎರಡು ವರ್ಷಗಳ ಇತಿಹಾಸ ಪ್ರಸಿದ್ದ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿ ಗುಟ್ಟದ ಮೇಲಿರುವ ಬ್ಯಾಟರಾಯಸ್ವಾಮಿಯ ಬ್ರಹ್ಮರಥೋತ್ಸವವು ಭಾನುವಾರ ಶಾಸಕ ಎಂ.ರಾಜಣ್ಣ ಮತ್ತು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಚಾಲನೆ ನೀಡುವುದರೊಂದಿಗೆ ನಡೆಯಿತು. ಬ್ಯಾಟರಾಯಸ್ವಾಮಿ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದರು.
ನೂರಾರು ಭಕ್ತರು ಸುತ್ತ ಮುತ್ತಲ ಗ್ರಾಮಗಳು ಮತ್ತು ತಾಲ್ಲೂಕು ಕೇಂದ್ರಗಳಿಂದ ಆಗಮಿಸಿದ್ದರು. ತೇರಿಗೆ ದವನದ ಜೊತೆ ಬಾಳೆಹಣ್ಣನ್ನು ಅರ್ಪಿಸುತ್ತ, ತೇರನ್ನು ಗುಟ್ಟದ ಪ್ರದಕ್ಷಿಣೆ ಮಾಡಿಸಿದರು. ವಾದ್ಯಗಳೊಂದಿಗೆ ವೀರಗಾಸೆ ಮತ್ತು ಡೊಳ್ಳುಕುಣಿತ ರಥದ ಮುಂದೆ ಎಲ್ಲರನ್ನೂ ಆಕರ್ಷಿಸುತ್ತಿತ್ತು.
ವಿಜಯನಗರ ಕಾಲದ ಈ ಬ್ಯಾಟರಾಯಸ್ವಾಮಿ ದೇವಾಲಯವು ಎತ್ತರವಾದ ಗುಡ್ಡ ಅಥವಾ ದಿಬ್ಬದ ಮೇಲೆ ವಿಸ್ತಾರವಾಗಿ ಹರಡಿಕೊಂಡಿದೆ. ಬ್ಯಾಟರಾಯಸ್ವಾಮಿಯು ನಾಯಕ ಜನಾಂಗದವರ ಕುಲದೈವವಾಗಿದ್ದು, ಈ ದೇವರ ಪೂಜಾ ಕೈಂಕರ್ಯಗಳನ್ನು ನಾಯಕ ಜನಾಂಗದವರೇ ನಡೆಸುತ್ತಿರುವರು.
ದೇವಾಲಯವು ವಿಶಾಲವಾದ ಪ್ರಾಕಾರ, ಗರ್ಭಗೃಹ, ಅರ್ಧಮಂಟಪ ಹಾಗೂ ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಬಾಗಿಲುವಾಡವು ಅಲಂಕಾರಿಕವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿಯ ಬಿಂಬವನ್ನು ಹೊಂದಿದೆ ಹಾಗೂ ದ್ವಾರದ ಎರಡೂ ಕಡೆ ದ್ವಾರಪಾಲಕರ ವಿಗ್ರಹಗಳಿವೆ. ಬ್ಯಾಟರಾಯಸ್ವಾಮಿಯ ವಿಗ್ರಹವು ಸುಮಾರು ೪.೫ ಅಡಿ ಎತ್ತರವಿದೆ. ಈ ವಿಗ್ರಹವು ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಅಭಯ ಹಾಗೂ ಗದೆಗಳನ್ನು ಹೊಂದಿದೆ. ಬ್ಯಾಟರಾಯನ ಉತ್ಸವಮೂರ್ತಿಯ ಜೊತೆಗೆ ಶ್ರೀದೇವಿ ಭೂದೇವಿಯರ ಸುಂದರ ಶಿಲ್ಪಗಳು ಆಕರ್ಷಕವಾಗಿವೆ.
ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ, ದೇವಾಲಯದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಯರ್ರಪ್ಪ, ಪಾಪಣ್ಣ, ಲೋಕೇಶ್, ಲಕ್ಷ್ಮಣಮೂರ್ತಿ, ಆಗಮಿಕರಾದ ವಿ.ಎಸ್.ಕೇಶವಭಟ್ಟಾಚಾರ್ಯ, ವೈ.ಎನ್.ದಾಶರಥಿ, ಜಿ.ಕೆ.ವಾಸುದೇವ, ಆಂಜನಪ್ಪ, ರಂಗಪ್ಪ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -