ತಾಲ್ಲೂಕಿನ ಚೀಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಶಾಲೆಯ ಜೆ.ಸಿ. ಬೋಸ್ ಹಸಿರು ಪಡೆ (ಇಕೋ ಕ್ಲಬ್) ವತಿಯಿಂದ ಪರಿಸರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ಬಾದಾಮಿ ಸಸಿಗಳನ್ನು ನೆಡುವ ಕಾರ್ಯಕ್ರಮ ಮತ್ತು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಶಿವಶಂಕರ್ ಮಾತನಾಡಿ, ಪರಿಸರ ದಿನಾಚರಣೆಯು ಒಂದು ದಿನಕ್ಕೆ ಸೀಮಿತವಾಗದೆ, ಜೀವನ ಪರ್ಯಂತ ದಿನ ನಿತ್ಯ ಅನುಸರಿಸಬೇಕಾದ ಕಾಯಕ ಎಂದು ತಿಳಿಸಿದರು.
ವಿಜ್ಞಾನ ಶಿಕ್ಷಕ ಬಿ.ಸಿ.ದೊಡ್ಡನಾಯ್ಕ ಅವರು ಪರಿಸರದ ಅಳಿವು -ಉಳಿವು ಸಕಲ ಜೀವನ ಸಂಕುಲದ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದು ವಿವರಿಸಿದರು.
ವಿದ್ಯಾರ್ಥಿಗಳು ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಸಸಿಗಳನ್ನು ನೆಟ್ಟು, ಈಗಾಗಲೇ ಬೆಳೆದಿರುವ ಗಿಡಗಳ ಪಾತಿ ಸರಿಪಡಿಸಿ, ಗೊಬ್ಬರ ಹಾಕಿ ನೀರು ಹಾಕಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಎಚ್.ಎಸ್.ವಿಠ್ಠಲ್, ನವೀನ್ ಕುಮಾರ್, ಶ್ರೀನಿವಾಸ್, ದೊಡ್ಡನಾಯ್ಕ, ಶಿವಕುಮಾರ್, ಸವಿತ, ಭವ್ಯ ಹಾಜರಿದ್ದರು.
- Advertisement -
- Advertisement -
- Advertisement -