21.1 C
Sidlaghatta
Tuesday, October 14, 2025

ಯುವ ಕಾಂಗ್ರೆಸ್‌ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

- Advertisement -
- Advertisement -

ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದು, ಕಾಂಗ್ರೆಸ್‌ ಪಕ್ಷದ ಮಹತ್ತರ ಯೋಜನೆಗಳ ಪರಿಣಾಮ ಇಂದು ದೇಶದ ಸಮಸ್ತ ಜನತೆಗೂ ಆಹಾರ ಹಾಗು ಆರೋಗ್ಯದ ಭದ್ರತೆ ಸಿಗುವಂತಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅಭಿಪ್ರಾಯಪಟ್ಟರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಕಸಬಾ ಹೋಬಳಿ ಮಟ್ಟದ ಯುವ ಕಾಂಗ್ರೆಸ್‌ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಏಳಿಗೆಗಾಗಿ ಏನಾದರೂ ನೀಡಿದ ರಾಜಕೀಯ ಎಂದರೆ ಅದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರ, ಕಾಂಗ್ರೆಸ್ ಏನೆಲ್ಲಾ ಕೆಲಸಗಳನ್ನು ಮಾಡಿದೆ ಎನ್ನುವುದರ ಪ್ರಚಾರದ ಕೊರತೆಯಿಂದಷ್ಟೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಪಕ್ಷದ ದೂರದೃಷ್ಟಿಯ ಯೋಜನೆಗಳಿಂದ ಇಂದು ದೇಶದ ಸಮಸ್ತ ಜನರಿಗೂ ಆಹಾರ ಮತ್ತು ಆರೋಗ್ಯದ ಹಕ್ಕು ದೊರೆತಿದೆ ಎಂದರು.
ಕಾಂಗ್ರೆಸ್ ಪಕ್ಷದ ಉದ್ಯೋಗಖಾತ್ರಿ ಯೋಜನೆಯಿಂದ ಪ್ರತಿಯೊಬ್ಬರಿಗೂ ಕೂಲಿ ಸಿಗುತ್ತಿದ್ದು, ದೇಶದ ಬಹುತೇಕ ಗ್ರಾಮಗಳು ಗುಡಿಸಲು ಮುಕ್ತವವಾಗಿದೆ. ದೇಶಾಧ್ಯಂತ ಶೇ. ೯೦ ರಷ್ಟು ನೀರಾವರಿ ಯೋಜನೆಗಳನ್ನು ನೀಡಿದ ಕೀರ್ತಿಯೂ ಕಾಂಗ್ರೆಸ್‌ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ವಾಜಪೇಯಿ ಹಾಗು ಮೋದಿ ನೇತೃತ್ವದ ಸರ್ಕಾರಗಳು ದೇಶಕ್ಕಾಗಿ ಏನೊಂದು ಉತ್ತಮ ಯೋಜನೆ ಜಾರಿಗೊಳಿಸದಿದ್ದರೂ ವ್ಯಾಪಕ ಪ್ರಚಾರದಿಂದ ಸುಳ್ಳನ್ನು ನಿಜ ಮಾಡಲು ಹೊರಟಿದೆ. ಆದರೆ ದೇಶಕ್ಕಾಗಿ ಸತತ ವವಾಗಿ ದುಡಿದಿರುವ ಕಾಂಗ್ರೆಸ್ ಪಕ್ಷ ಪ್ರಚಾರದ ಕೊರತೆಯಿಂದ ಹಿಂದುಳಿದಿದೆ ಎಂದರು.
ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರವ್ಯಾಪ್ತಿಯಲ್ಲಿ ಯುವ ಕಾಂಗ್ರೇಸ್‌ನ ಸದಸ್ಯತ್ವ ನೋಂಧಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹೋಬಳಿವಾರು ನೋಂದಣಿಯನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ್‌ ೩೦ ರೊಳಗೆ ಸಂಪೂರ್ಣವಾಗಿ ಸದಸ್ಯತ್ವ ನೋಂದಣಿ ಕಾರ್ಯ ಮುಗಿಯಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಎಪಿಎಂಸಿ ಅಧ್ಯಕ್ಷ ಬಿ.ವಿ.ಮುನೇಗೌಡ, ಎಸ್‌ಎಫ್‌ಸಿಎಸ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಸದಸ್ಯ ವೇಣು ಯುವ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್ ಪಾಷ, ಎಲ್.ಮಧುಸೂಧನ್, ಬಿ.ಪಿ.ರಾಘವೇಂದ್ರ, ಶಂಕರ್ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!