ಅವಿಭಜಿತ ಕೋಲಾರ ಜಿಲ್ಲೆ ಸೇರಿದಂತೆ ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಗ್ರಹವನ್ನು ಬೆಂಬಲಿಸಿ ಕೋಲಾರದಿಂದ ಚದಲಪುರದವರೆಗೆ ಡಾ.ಡಿ.ಕೆ.ರಮೇಶ್ ಭಾನುವಾರ ಬೈಕ್ರ್ಯಾಲಿ ನಡೆಸಿದರು.
ಕೋಲಾರದಿಂದ ಶಿಡ್ಲಘಟ್ಟ ಮಾರ್ಗವಾಗಿ ಬಂದ ಡಾ.ಡಿ.ಕೆ.ರಮೇಶ್ ತಂಡವನ್ನು ನಗರದ ಹೊರವಲಯದ ಒಕ್ಕಲಿಗರ ಸಂಘದ ಕಚೇರಿಯ ಸಮೀಪ ಭವ್ಯವಾಗಿ ಸ್ವಾಗತಿಸಿಸಲಾಯಿತು. ಅಲ್ಲಿಂದ ತೆರೆದ ಜೀಪಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ತಂಡಕ್ಕೆ ಜನರು ಬೆಂಬಲ ವ್ಯಕ್ತಪಡಿಸಿ ಬೀಳ್ಕೊಟ್ಟರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಶ್ರೀನಿವಾಸ್, ರಾಮಚಂದ್ರಪ್ಪ, ರೈತ ಮುಖಂಡರಾದ ರಾಮಕೃಷ್ಣಪ್ಪ, ಎಚ್.ಕೆ.ಸುರೇಶ್, ಬೈಯಣ್ಣ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -