16.1 C
Sidlaghatta
Tuesday, January 21, 2025

ಸೀಮೆ ಹಸುಗಳಿಗೆ ಸಾಲ ಹಾಗು ಪ್ರೋತ್ಸಾಹ ಧನದ ಮಂಜೂರಾತಿ ಪತ್ರ ವಿತರಣೆ

- Advertisement -
- Advertisement -

ಅಂತರ್ಜಲ ಮಟ್ಟ ಕುಸಿದು ಕೃಷಿ ಕೈಕಚ್ಚುವಂತಾಗಿದ್ದರೂ ಹೈನುಗಾರಿಕೆ ರೈತರ ಕೈ ಹಿಡಿದಿದೆ. ಹಾಗಾಗಿ ಸರಾಕರವೂ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಪಶು ಸಂಗೋಪನೆ ಇಲಾಖೆಯ ಕಚೇರಿ ಆವರಣದಲ್ಲಿ ಹಾಲು ಉತ್ಪಾಧಕರಿಗೆ ನೀಡುವ ಪ್ರೋತ್ಸಾಹ ಧನದ ಬದಲಿಗೆ ಸೀಮೆ ಹಸುಗಳಿಗೆ ಸಾಲ ಹಾಗು ಪ್ರೋತ್ಸಾಹ ಧನದ ಮಂಜೂರಾತಿ ಪತ್ರವನ್ನು ವಿತರಿಸಿ ಮಾತನಾಡಿದರು.
ಅಂತರ್ಜಲ ಮಟ್ಟ ಕುಸಿದು ಕುಡಿಯಲು ನೀರಿನ ಕೊರತೆಯಾಗಿದ್ದರೂ ಹಾಲು ಉತ್ಪಾಧನೆಯಲ್ಲಿ ಮಾತ್ರ ಈ ಭಾಗದ ರೈತರು ಎಂದಿಗೂ ಹಿಂದೆ ಬಿದ್ದಿಲ್ಲ. ತಮ್ಮ ಶ್ರಮದಿಂದಾಗಿ ಇಡೀ ರಾಜ್ಯದಲ್ಲಿಯೆ ಹಾಲು ಉತ್ಪಾಧನೆಯಲ್ಲಿ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ ಎಂದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೆಶಕ ಬಂಕ್‍ಮುನಿಯಪ್ಪ ಮಾತನಾಡಿ, ಸರಕಾರದಿಂದ ಈ ಸೌಲಭ್ಯ ಪಡೆದುಕೊಳ್ಳುವುದು ಮುಖ್ಯವಲ್ಲ. ಈ ಹಣವನ್ನು ಬೇರೆ ಯಾವುದಕ್ಕೂ ಉಪಯೋಗಿಸಿಕೊಳ್ಳದೆ ಹಸು ಖರೀಸಲು ಮಾತ್ರವೇ ಬಳಸಿಕೊಳ್ಳಲು ಸೂಚಿಸಿದರು.
ಪಶು ವೈಧ್ಯಕೀಯ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಮುನಿನಾರಾಯಣರೆಡ್ಡಿ ಮಾತನಾಡಿ, ಹಾಲಿಗೆ ನೀಡುವ ಪ್ರೋತ್ಸಾಹ ಧನವಾಗಿ ತಾಲೂಕಿಗೆ 50.05 ಲಕ್ಷ ರೂ.ಬಿಡುಗಡೆಯಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ 53, ಪಂಗಡದ 14 ಮಂದಿ ರೈತರಿಗೆ ಸೀಮೆ ಹಸುಗಳನ್ನು ಖರೀ ಮಾಡಲು ತಲಾ 75 ಸಾವಿರ ರೂ.ಪ್ರೋತ್ಸಾಹ ಧನ ಹಾಗೂ 25 ಸಾವಿರ ರೂ.ಸಾಲವಾಗಿ ನೀಡಲಾಗುತ್ತಿದೆ.
ಇಲಾಖೆಯ ವಿಸ್ತರಣಾ ವಿಭಾಗದ ಡಾ.ಮಂಜುನಾಥ್, ಮುಖಂಡರಾದ ಸೂರ್ಯನಾರಾಯಣಗೌಡ, ಬಿ.ಮುನಿರೆಡ್ಡಿ, ಮಳ್ಳೂರಯ್ಯ ಇನ್ನಿತರರು ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!