26.6 C
Sidlaghatta
Thursday, July 31, 2025

ಸ.ರಘುನಾಥ ಅವರಿಗೆ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ

- Advertisement -
- Advertisement -

ರಾಜ್ಯ ಕನ್ನಡ ಜಾಪದ ಪರಿಷತ್ತು ೨೦೧೬-೨೦೧೭ನೇ ಸಾಲಿನ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜಾನಪದ ಕ್ಷೇತ್ರದಲ್ಲಿ ೩೦ ವರ್ಷಗಳಿಂದ ಗಣನೀಯ ಕಾರ್ಯ ನಿರ್ವಹಿಸಿರುವ ಹಿರಿಯ ಸಾಹಿತಿ ಸ,ರಘುನಾಥ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ೨೦೦೦ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ರಘುನಾಥ ಅವರು ಜಾನಪದ ಶಿಶು ಪ್ರಾಸಗಳ ಉಳಿಕೆಗಾಗಿ ನಡೆಸಿದ ಕಾರ್ಯವನ್ನು ಪುರಸ್ಕರಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಾಗಿ ರಾಜ್ಯದ ೨೩ ಮಂದಿ ಜಾನಪದ ಕಲಾವಿದ, ವಿದ್ವಾಂಸರನ್ನು ಆಯ್ಕೆ ಮಾಡಲಾಗಿದೆ. ಫೆಬ್ರುವರಿ ೨೬ರಂದು ವಿಜಯಪುರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಸಮಿತಿ ಪರವಾಗಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಎನ್.ಮುನಿವೆಂಕಟೇಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ.ರಘುನಾಥ ಅವರು ತೊಗಲುಗೊಂಬೆ ಕಲೆ, ಕಲಾವಿದರ ಕಲ್ಯಾಣ ಕಾರ್ಯದಲ್ಲಿ ೨೫ ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೆ, ಜೋಂಕಿಣಿ, ಕೋನಂಗಿ ಕಲೆ, ಚೆಕ್ಕ ಭಜನ ಮುಂತಾದ ಪ್ರಕಾರಗಳ ಕಲಾವಿದವಿದರ ಸಂಕ್ಷೇಮಕ್ಕಾಗಿ ದುಡಿಯುತ್ತಿರುವರು. ಚಿಂತಾಮಣಿ ತಾಲ್ಲೂಕಿನ ಬೊಮ್ಮಲಾಟಪುರದಲ್ಲಿ ಶಿಳ್ಳೇಕ್ಯತ-ಬಂಗಾರಕ್ಕ ತೊಗಲುಗೊಂಬೆ ಕಲಾವಿದರ ಸಂಘದ ಸ್ಥಾಪಕ ಕಾರ್ಯಾಧ್ಯಕ್ಷರಾಗಿರುವರು.
ಜಾನಪದ ಶಿಶುಪ್ರಾಸಗಳ ’ಗಿಲಿಕಿ, ಜಾನಪದಗೀತೆಗಳ ’ಯರ್ರರ್ಯಾಪಗಿಡಿ, ಮೊರಸುನಾಡು ಪಾಟಲು’ ಇವರ ಸಂಗ್ರಹ ಸಂಕಲನಗಳು. ಇದಲ್ಲದೆ ಜಾನಪದ ಸಾಹಿತ್ಯ, ತತ್ವಪದ, ಕಲೆ ಕುರಿತಾಗಿ ಸುಮಾರು ೩೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಹಾಗೆಯೇ ಉಪನ್ಯಾಸಗಳನ್ನು ನೀಡಿದ್ದಾರೆ. ಈವರೆಗೆ ನಾಡಿನ ಹತ್ತುಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕಥೆಗಳನ್ನು ಹೇಳಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಜಾನಪದ ನಿಘಂಟಿನ ರಚನೆಯಲ್ಲಿ ನಿರತರಾಗಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!