ಗುರುಗಳನ್ನು ಗೌರವಿಸುವ ಗುರುವಂದನಾ ಕಾರ್ಯಕ್ರಮ ಒಂದು ಸತ್ಸಂಪ್ರದಾಯ. ಗುರು – ಶಿಷ್ಯ ಬಾಂಧವ್ಯ ಸ್ಥಿರವಾಗಿ ಮುಂದುವರಿಯಬೇಕು ಎಂದು ಮೇಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಮ್ಮ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ 2003–04ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುರುಪರಂಪರೆಯನ್ನು ಗೌರವಿಸುವ ಗುರುವಂದನೆ ಎಂಬ ವಿನೂತನ ಕಾರ್ಯಕ್ರಮವು ಭಾರತೀಯ ಮೌಲ್ಯ ಪ್ರತಿಪಾದಕವಾಗಿದೆ. ಪರಿಸರ ಕಾಳಜಿ, ಹಿರಿಯರ ಆದರ್ಶ, ರಾಷ್ಟ್ರಪ್ರೇಮ, ಪರಂಪರೆಯ ಅರಿವು, ಸಾಮಾಜಿಕ ಬದ್ಧತೆ, ಶಿಸ್ತು, ಸಾಮಾಜಿಕ ಕಳಕಳಿ, ಸಾರ್ವಜನಿಕ ಆಸ್ತಿಯ ಬಗ್ಗೆ ಗೌರವ ಮುಂತಾದ ಅಂಶಗಳನ್ನು ಮೈಗೂಡಿಸಿಕೊಂಡಲ್ಲಿ ಯಾವುದೇ ಉದ್ಯೋಗ, ವ್ಯಾಪಾರ, ವಹಿವಾಟನ್ನು ನಡೆಸಿದರೂ ಮಾದರಿಯಾಗುತ್ತೀರಿ. ಶಿಷ್ಯರು ಉತ್ತಮ ನಾಗರಿಕರಾಗುವುದೇ ಗುರುವಿಗೆ ನೀಡುವ ಉನ್ನತ ಕಾಣಿಕೆ ಎಂದು ಹೇಳಿದರು.
ಶಿಕ್ಷಕರಾದ ನಸ್ರೀನ್ತಾಜ್, ಎಲ್.ಅಶ್ವತ್ಥನಾರಾಯಣ, ಆರ್.ಟಿ.ವೇಣುಗೋಪಾಲ್, ಜಿ.ಸಿ.ರವಿಕುಮಾರ್, ಅಜರತ್ ತಬಸ್ಸುಮ್, ಜಿ.ಆರ್.ರಂಗಪ್ಪ, ಕೆ.ನರಸಿಂಹಮೂರ್ತಿ, ಆರ್.ನಾಗರಾಜ್, ಬಿ.ಆರ್.ಸರೋಜಮ್ಮ, ಆಶಾ, ಟಿ.ವಿಜಯ್ಕುಮಾರ್, ಶಿವಕುಮಾರ್ಬಾಬು ಪಟ್ಟೇದ್, ವಿದ್ಯಾ ವಿ.ಶಣೈ, ಪ್ರಸಾದ್, ಗೋವಿಂದರಾಜು, ಕೆ.ವಿ.ಶ್ರೀನಿವಾಸ್, ಸರಸ್ವತಮ್ಮ, ಲೀಲಾವತಮ್ಮ, ಗಿರಿಜಮ್ಮ, ರುಕ್ಮಿಣಿಯಮ್ಮ ಅವರನ್ನು ಹಿರಿಯ ವಿದ್ಯಾರ್ಥಿಗಳು ಗೌರವಿಸಿದರು.
- Advertisement -
- Advertisement -
- Advertisement -
- Advertisement -