27.6 C
Sidlaghatta
Saturday, August 2, 2025

ಕೋಚಿಮುಲ್ ನಿಂದ ವಿಶ್ವ ಹಾಲು ದಿನಾಚರಣೆ

- Advertisement -
- Advertisement -

ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳನ್ನು ಜನರು ಹೆಚ್ಚಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಹಾಲು ಉತ್ಪಾದಕರು ಹಾಗೂ ಸಹಕಾರ ಸಂಘಗಳ ಉಳಿವಿಗಾಗಿ ಸಹಕರಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ವಿಶ್ವ ಹಾಲು ದಿನಾಚರಣೆಯ ಪ್ರಯುಕ್ತ ಬುಧವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತವಾಗಿ ಗುಡ್ಲೈಫ್ ಹಾಲನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯಿಂದ ಪ್ರತಿನಿತ್ಯ ಸುಮಾರು ೯.೫ ಲಕ್ಷ ಲೀ ಹಾಲು ಉತ್ಪಾದನೆಯಾಗುತ್ತಿದ್ದು, ಈ ಪೈಕಿ ೫ ಲಕ್ಷ ಲೀಟರ್ ಹಾಲು ಮಾತ್ರ ನೇರವಾಗಿ ಹಾಲಿನ ರೂಪದಲ್ಲಿಯೇ ಜನರಿಗೆ ತಲುಪುತ್ತಿದೆ. ಉಳಿದ ಹಾಲು, ಹಾಲಿನಪುಡಿ, ಗುಡ್ಲೈಫ್ ಹಾಲು ಹಾಗು ಹಾಲಿನ ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ ಎಂದರು.
ಶಿಡ್ಲಘಟ್ಟ ಶಿಬಿರ ಘಟಕದ ಉಪವ್ಯವಸ್ಥಾಪಕ ಹನುಮಂತರಾವ್ ಮಾತನಾಡಿ ಹಾಲು ವಿಶ್ವದಾದ್ಯಂತ ಎಲ್ಲರಿಗೂ ಬೇಕಾಗಿರುವ ವಸ್ತುವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಿದ್ದರೂ ಸಹ ಹಾಲು ಮಾತ್ರ ಒಂದೇ ಆಗಿರುತ್ತದೆ. ಪ್ರತಿಯೊಬ್ಬ ಮನುಷ್ಯ ದಿನವೊಂದಕ್ಕೆ ೫೦೦ ಮಿ.ಲೀ ಹಾಲು ಬಳಸಬೇಕು. ಆದರೆ ನಮ್ಮಲ್ಲಿ ಇಂದಿಗೂ ೬೦ ರಿಂದ -೭೦ ಮಿ.ಲೀ ಹಾಲು ಮಾತ್ರ ಬಳಕೆಯಾಗುತ್ತಿದೆ. ಉತ್ತಮ ಗುಣಮಟ್ಟದ ನಂದಿನಿ ಹಾಲನ್ನು ಎಲ್ಲರೂ ಬಳಸುವಂತಾಗಬೇಕು. ನಂದಿನಿ ಹಾಳಿನ ಖರೀದಿಯಿಂದ ಬರುವಂತಹ ಹಣವು ನೇರವಾಗಿ ಉತ್ಪಾದಕರಿಗೆ ತಲುಪುತ್ತದೆ ಹಾಗೂ ಸಹಕಾರ ಸಂಘಗಳೂ ಕೂಡಾ ಹೆಚ್ಚು ಬಲವರ್ಧನೆಯಾಗುತ್ತವೆ ಎಂದರು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಉಮೇಶ್ರೆಡ್ಡಿ, ಶ್ರೀನಿವಾಸ್, ಅಂಬರೀಶ್, ನಾರಾಯಣರೆಡ್ಡಿ, ಮುನೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!