ಭಗತ್ಸಿಂಗ್ ಜನ್ಮದಿನಾಚರಣೆ

- Advertisement -
- Advertisement -

ದೇಶದ ಅಭಿವೃದ್ಧಿಗಾಗಿ ಭಗತ್ಸಿಂಗ್ ಕಂಡ ಕನಸನ್ನು ನನಸಾಗಿಸುವ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಎಂ.ದೇವರಾಜ್ ತಿಳಿಸಿದರು.
ತಾಲ್ಲೂಕಿನ ಜಯಂತಿ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಗತ್ಸಿಂಗ್ ಜನ್ಮದಿನಾಚರಣೆಯನ್ನು ಆಚರಿಸಿ ಸಿಹಿ ಹಂಚಿ ಅವರು ಮಾತನಾಡಿದರು.
ಯುವ ಸಮೂಹ ಭಗತ್ಸಿಂಗ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಭಗತ್ಸಿಂಗ್ ಕ್ರಾಂತಿ ಎಂಬುದು ಬಂದೂಕುಗಳ ಆರಾಧನೆಯಲ್ಲ, ಬದಲಿಗೆ ಮಾನವರ ನಡುವಿನ ಶೋಷಣೆ ಕೊನೆಗಾಣಿಸಲು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ ತರಬೇಕೆಂದು ಭಗತ್ಸಿಂಗ್ ನಂಬಿದ್ದರು. ಸಮಾನ ಅವಕಾಶಗಳ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕೆಂದು ಆಶಿಸುತ್ತಿದ್ದರೆಂದು ತಿಳಿಸಿದರು.
ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಶನ್ ಕಾರ್ಯದರ್ಶಿ ನಾರಾಯಣಸ್ವಾಮಿ, ಸುಧಾಕರರೆಡ್ಡಿ, ಚಂದ್ರಶೇಖರ್, ಬೈರೇಗೌಡ, ಡಿ.ಸುಬ್ಬಾರೆಡ್ಡಿ, ಶಿಕ್ಷಕರಾದ ಜೀವಿಂದರ್ ಕುಮಾರ್, ಮಾಲತೇಶ ಹಳ್ಳೇರ್, ರಾಧಾಕೃಷ್ಣ, ಕಲ್ಪನಾ, ಸುಮಲತಾ, ಶಿವಕುಮಾರಸ್ವಾಮಿ, ಮೆಹಬೂಬ್ ಸಾಬ್, ಸಿ.ಕೆ.ಮಂಜುಳಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!