22 C
Sidlaghatta
Saturday, October 11, 2025

ರೈತರಿಂದ ರೈತರಿಗೆ ಮಾಹಿತಿ ವಿನಿಮಯ

- Advertisement -
- Advertisement -

ರೈತರಿಂದ ರೈತರಿಗೆ ಮಾಹಿತಿ ವಿನಿಮಯವಾಗುವ ಉದ್ದೇಶದಿಂದ ಕ್ಷೇತ್ರ ದರ್ಶನವನ್ನು ನಡೆಸಿರುವುದಾಗಿ ತಲಗಟ್ಟಪುರದ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಡಾ. ಪ್ರಭಾಕರರಾವ್ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಸುರೇಶ್ ಅವರ ರೇಷ್ಮೆ ಕೃಷಿಯ ಕುರಿತು ಮಾಹಿತಿ ವಿನಿಮಯಕ್ಕಾಗಿ ವಿವಿಧ ಜಿಲ್ಲೆಗಳ 40 ಮಂದಿ ರೈತರ ತಂಡದೊಡನೆ ಆಗಮಿಸಿದ್ದ ಅವರು ಮಾತನಾಡಿದರು.
ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ರೈತರಿಗೆ ರೇಷ್ಮೆ ಬೆಳೆ, ಹಿಪ್ಪುನೇರಳೆ ಬೇಸಾಯ, ಹುಳು ಸಾಕಾಣಿಕೆ ಕುರಿತಂತೆ ನಾಲ್ಕು ದಿನಗಳ ಕಾಲ ಶಿಬಿರವನ್ನು ನಡೆಸಿದ್ದು, ಎರಡು ದಿನಗಳ ಕಾಲ ಸಂಸ್ಥೆಯಲ್ಲಿ ವಿಷಯ ತಜ್ಞರಿಂದ ತರಬೇತಿ ಕೊಡಲಾಗುತ್ತದೆ. ಎರಡು ದಿನಗಳ ಕಾಲ ಪ್ರಗತಿಪರ ರೈತರ ತೋಟಗಳಿಗೆ ಭೇಟಿ ನೀಡುವ ಮೂಲಕ ಮಾಹಿತಿ ವಿನಿಮಯ, ಸಂದೇಹ ಪರಿಹಾರ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
ಹಿತ್ತಲಹಳ್ಳಿಯ ಪ್ರಗತಿಪರ ರೈತ ಸುರೇಶ್ ಮಾತನಾಡಿ, ಕಡಿಮೆ ನೀರಿನಲ್ಲಿ ಉತ್ತಮ ರೇಷ್ಮೆ ಬೆಳೆಯನ್ನು ಬೆಳೆಯುತ್ತಿರುವ ತಮ್ಮ ಅನುಭವ ಮತ್ತು ಬಳಸಿಕೊಂಡ ಪದ್ಧತಿಗಳನ್ನು ರೈತರೊಂದಿಗೆ ಹಂಚಿಕೊಂಡಿರುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಆಗಮಿಸಿದ್ದ ರೈತರು ಚಾಕಿ ಕೇಂದ್ರ, ಹಿಪ್ಪುನೇರಳೆ ತೋಟ ಮತ್ತು ರೇಷ್ಮೆ ಹುಳು ಸಾಕಾಣಿಕಾ ಮನೆಗೆ ಭೇಟಿ ನೀಡಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!