22 C
Sidlaghatta
Saturday, October 11, 2025

ಶುದ್ಧ ಕುಡಿಯುವ ನೀರಿನ ಘಟಕ

- Advertisement -
- Advertisement -

ಶುದ್ಧ ನೀರಿನ ಘಟಕ ಪ್ರತಿಯೊಂದು ಗ್ರಾಮಗಳಲ್ಲೂ ಆಗಬೇಕು. ಅದರ ಮೂಲಕ ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಸುಧಾರಿಸುವಂತಾಗಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಶನಿವಾರ ಏಳೂವರೆ ಲಕ್ಷ ರೂಗಳ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕದ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿಗೆ ಒಟ್ಟು 39 ಕುಡಿಯುವ ನೀರಿನ ಘಟಕಗಳಿಗೆ ಯೋಜನೆ ರೂಪಿಸಿದ್ದು, ಅವುಗಳಲ್ಲಿ 11 ಮಂಜೂರಾಗಿವೆ. ಅತಿ ಶೀಖ್ರದಲ್ಲೇ ಕಾಮಗಾರಿಗಳು ನಡೆಯಲಿವೆ. ಎಣ್ಣಂಗೂರು ಗ್ರಾಮದಲ್ಲಿ ಕಾಲೋನಿಯಲ್ಲಿ 5 ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಯ ಕಾಮಗಾರಿ ಪ್ರಾರಂಭವಾಗಲಿದೆ. ಜಂಗಮಕೋಟೆ ಹೋಬಳಿಯ ಎಣ್ಣಂಗೂರು ಗ್ರಾಮಕ್ಕೆ ನನ್ನ ವಿವೇಚನೆಯ ಕೋಟಾದಡಿಯಲ್ಲಿ ಬರುವ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸುಮಾರು ಒಂದು ಕೋಟಿ 28 ಲಕ್ಷ ರೂಪಾಯಿಗಳು ಮಂಜೂರಾಗಿವೆ. ಇದರಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿ ನಡೆಸಲಾಗುವುದು ಎಂದು ಹೇಳಿದರು.
ನಾಗಮಂಗಲ ಗ್ರಾಮದಲ್ಲಿ 2 ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಯ ಕಾಮಗಾರಿಯನ್ನೂ ಪ್ರಾರಂಭಿಸಲಾಗುವುದು. ಇರಗಪ್ಪನಹಳ್ಳಿ, ಚಾಕುಪ್ಪನಹಳ್ಳಿ, ಎರ್ರನಾಗೇನಹಳ್ಳಿ, ಗಡಿಮಿಂಚೇನಹಳ್ಳಿ, ಎಸ್.ಕುರುಬರಹಳ್ಳಿ, ಎಸ್.ದೇವಗಾನಹಳ್ಳಿ ಮುಖೇನ ಸಾದಲಿ ಮತ್ತು ಪೆರೇಸಂದ್ರವನ್ನು ಸಂಪರ್ಕಿಸುವ ರಸ್ತೆಗಳ ಸುಮಾರು 65 ಲಕ್ಷ ರೂಪಾಯಿಗಳ ಕಾಮಗಾರಿಯೂ ಪ್ರಾರಂಭವಾಗುತ್ತಿದೆ. ಗಂಜಿಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂದು ಕೋಟಿ 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮೂರೂವರೆ ಕಿ ಮೀ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ನಡೆಯುವುದಾಗಿ ನುಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ ಶಿವಕುಮಾರ್, ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ, ಸದಸ್ಯ ಶ್ರೀನಿವಾಸಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ವೆಂಕಟೇಶಪ್ಪ, ಆಂಜಿನಪ್ಪ, ತಾದೂರು ರಮೇಶ್, ರಘು, ಮುನಿರಾಜು, ಗೋಪಿನಾಥ್, ಮಂಜುನಾಥ, ರಾಮಣ್ಣ, ಸೋಮನಾಥ್, ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!