ಸಂಪತ್ತು ಸಾರ್ವಜನಿಕವಾಗಿ ವಿತರಣೆಯಾಗಬೇಕು ಎಂದಿದ್ದರು ದೀನದಯಾಳ್

- Advertisement -
- Advertisement -

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಸಂಘಟಕರು ಮತ್ತು ದಾರ್ಶನಿಕರು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ತಾಲ್ಲೂಕು ಬಿಜೆಪಿ ವತಿಯಿಂದ ನಡೆದ ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಂಡಿತ್ ದೀನದಯಾಳ್ ಅವರು ಭಾರತದ ರಾಜಕೀಯದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದರು. ಸಂಪತ್ತು ಸಾರ್ವಜನಿಕವಾಗಿ ವಿತರಣೆಯಾಗಬೇಕು ಎಂದು ನಂಬಿದ್ದರು. ಸರಳತೆಯ ಉದ್ದೇಶವನ್ನು ರಾಜಕೀಯ ಪಕ್ಷಗಳಿಗೆ ಹೇಳಿಕೊಟ್ಟವರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಉದ್ಧಾರವಾಗಬೇಕೆಂದು ಕನಸುಕಂಡವರು. ಸರಳತೆ ಮತ್ತು ವೈಚಾರಿಕತೆಗೆ ಹೆಸರಾದ ಅವರು ಏಕವ್ಯಕ್ತಿಯಾಗಿ ದೇಶಾದ್ಯಂತ ಮಿಂಚಿನಂತೆ ಸಂಚರಿಸಿದರು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ನಾರ್ಥ್ ಈಸ್ಟ್ ಸುರೇಶ್, ಕೆಂಪರೆಡ್ಡಿ, ಬೈರರೆಡ್ಡಿ, ಸುಜಾತಮ್ಮ, ರಮೇಶ್ಬಾಯಿರಿ, ಮಂಜುಳಮ್ಮ, ಗಾಯಿತ್ರಮ್ಮ, ಪುರುಷೋತ್ತಮ್, ವೇಣು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!