21.1 C
Sidlaghatta
Monday, October 27, 2025

ಸಾವಯವ ಗೊಬ್ಬರಗಳ ಉತ್ಪಾದನೆ ಮಾಡಿ ಬಳಸಿ

- Advertisement -
- Advertisement -

ಮಣ್ಣು ಪರೀಕ್ಷೆ ಆಧಾರದ ಮೇಲೆ ನೇರ ರಸಗೊಬ್ಬರಗಳ ಬಳಕೆ, ಹುಳು ಸಾಕಾಣಿಕ ಅವದಿಯಲ್ಲಿ ರೆಂಬೆ ಪದ್ಧತಿಯಲ್ಲಿ ಲಭ್ಯವಾಗುವ ಹಾಸಿಗೆ ತ್ಯಾಜ್ಯ ವಸ್ತುಗಳು ಮತ್ತು ತೋಟದಲ್ಲಿ ಉಳಿದಂತಹ ಹಿಪ್ಪುನೇರಳೆ ಕಡ್ಡಿಗಳಿಂದ ಉತ್ಕೃಷ್ಟ ಸಾವಯವ ಗೊಬ್ಬರಗಳ ಉತ್ಪಾದನೆಗೆ ಮಹತ್ವ ನೀಡುವಂತೆ ಪ್ರಾಧ್ಯಾಪಕ ಚಂದ್ರಶೇಖರ್ ಕಳ್ಳಿಮನಿ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗ್ರಾಮದ ರೈತರಿಗೆ ರೇಷ್ಮೆ ಕೃಷಿಯಲ್ಲಿ ದೊರೆಯುವ ಉಪ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ಬಯೋಡೈಜೆಸ್ಟರ್ ಬಗ್ಗೆ, ರಸಮೇವು ಗೊಬ್ಬರ ತಯಾರಿಕೆಯ ಬಗ್ಗೆ ಹಾಗೂ ಅವುಗಳ ಉಪಯುಕ್ತತೆಗಳ ಕುರಿತಂತೆ ವಿದ್ಯಾರ್ಥಿಗಳಾದ ಉಮಾಮಹೇಶ್ವರಿ, ವೀಣಾ, ಸ್ವಾತಿ, ಮನೋಜ್ ಮತ್ತಿತರರು ವಿವರಿಸಿದರು.
ಹಿಪ್ಪುನೇರಳೆ ಸೊಪ್ಪನ್ನು ಬಳಸಿ ಬೋಂಡಾ, ಟೀ, ಹಪ್ಪಳ ತಯಾರಿಸಬಹುದು. ಹಿಪ್ಪುನೇರಳೆ ಸೊಪ್ಪಿನಲ್ಲಿ ವಿಟಮಿನ್ ಸಿ ಇರುವ ಕಾರಣ ಆರೋಗ್ಯಕ್ಕೆ ಮತ್ತು ಮಧುಮೇಹಿಗಳಿಗೆ ಉಪಯುಕ್ತ ಎಂದು ಹೇಳಿದರು. ಪ್ರಾಧ್ಯಾಪಕ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!