24.2 C
Sidlaghatta
Saturday, October 11, 2025

ಸಾಸುಲ ಚಿನ್ನಮ್ಮ ನಾಟಕ

- Advertisement -
- Advertisement -

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯಿರುವ ಬಯಲಾಂಜನೇಯಸ್ವಾಮಿ ದೇವಾಲಯದ ಬಳಿ ಶ್ರೀರಾಮನವಮಿ ಪ್ರಯುಕ್ತ ಶನಿವಾರ ರಾತ್ರಿ ಚೌಡಸಂದ್ರ ಗ್ರಾಮಸ್ಥರು ಸಾಸುಲ ಚಿನ್ನಮ್ಮ ತೆಲುಗು ನಾಟಕವನ್ನು ಆಯೋಜಿಸಿದ್ದರು.
ಪೌರಾಣಿಕ ನಾಟಕ ಸಾಸುಲ ಚಿನ್ನಮ್ಮ ಆಂದ್ರ ಕರ್ನಾಟಕ ಗಡಿ ಭಾಗದಲ್ಲಿ ಪ್ರಸಿದ್ಧವಾದುದು. ದೇವರ ವರದಿಂದ ಜನಿಸುವ ಸಾಸುಲ ಚಿನ್ನಮ್ಮ ತವರು ಮನೆಯಲ್ಲಿ ಸುಖವಾಗಿ ಬೆಳೆದು ಅತ್ತೆಯ ಮನೆಯಲ್ಲಿ ಪಡಬಾರದ ಕಷ್ಟ ಅನುಭವಿಸಿ ನಂತರ ತವರಿನ ಸಹಾಯ ಪಡೆದು ಸುಖಾಂತ್ಯವಾಗುವ ಕಥೆ ಜನಜನಿತ. ನಡುನಡುವೆ ಬರುವ ಹಾಸ್ಯ ಪ್ರಸಂಗಗಳೂ ಜನಪ್ರಿಯ. ಈ ರೀತಿಯ ನಾಟಕಗಳನ್ನಾಡಿಸುವುದರಿಂದ ಮಳೆ ಬೆಳೆ ಆಗುತ್ತದೆಂಬ ನಂಬಿಕೆ ಜನಪದರದ್ದು. ಕಲಾ ಪೋಷಣೆಯೊಂದಿಗೆ ಮನರಂಜನೆ ಒದಗಿಸಿದ ಈ ನಾಟಕಕ್ಕೆ ಅಪಾರ ಜನರು ಆಗಮಿಸಿದ್ದರು.
ಚೇಳೂರಿನ ಕೋನಪ್ಪ, ನರಸಿಂಹ, ನರಸಿಂಹಮೂರ್ತಿ, ಗಿರೀಶ್, ತಿರುಮಳೇಶ್, ಬಾಬು, ಸರಸ್ವತಮ್ಮ, ಲಕ್ಷ್ಮಮ್ಮ ಪಾತ್ರಧಾರಿಗಳಾಗಿ ನಾಟಕದಲ್ಲಿ ಅಭಿನಯಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!