23.1 C
Sidlaghatta
Wednesday, October 29, 2025

ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ

- Advertisement -
- Advertisement -

ವಾಹನ ಸವಾರರು ರಸ್ತೆಗಳಲ್ಲಿ ಸಂಚಾರ ಮಾಡುವಾಗ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದರಿಂದ ಅಪಘಾತಗಳು ಕಡಿಮೆಯಾಗುತ್ತವೆ ಎಂದು ಪ್ರಾದೇಶಿಕ ಸಾರಿಗೆ ನಿರೀಕ್ಷಕ ಕಮಲ್ಬಾಬು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನಡೆಸಿದ ೨೭ ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ –೨೦೧೬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಟೋ ಚಾಲಕರು, ದ್ವಿಚಕ್ರ ವಾಹನ ಸವಾರರು, ಕಾರುಗಳ ಚಾಲಕರು, ಹಾಗೂ ಬಾರಿ ವಾಹನಗಳ ವಾಹನಗಳ ಸವಾರರು, ರಸ್ತೆಗಳ ಮೇಲೆ ವಾಹನಗಳ ಚಾಲನೆ ಮಾಡುವ ಮುನ್ನಾ ತಮ್ಮ ವಾಹನಗಳ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬೇಕು, ವಾಹನಗಳನ್ನು ಯಾವಾಗಲೂ ಸುಸ್ಥಿತಿಯಲ್ಲಿಡಬೇಕು, ಕಡ್ಡಾಯವಾಗಿ ಚಾಲಕರು ಹಾಗೂ ಹಿಂಬದಿಯ ಸವಾರರು ಹೆಲ್ಮೇಟ್ ಧರಿಸಬೇಕು, ವಾಹನದಲ್ಲಿರುವ ಇಬ್ಬರೂ ಧರಿಸುವುದರಿಂದ ಅಪಘಾತಗಳಲ್ಲಿ ಪ್ರಾಣಹಾನಿಯನ್ನು ತಪ್ಪಿಸಬಹುದಾಗಿದೆ, ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಪರವಾನಗಿಯನ್ನು ಹೊಂದಿರಬೇಕು, ರಸ್ತೆಗಳಲ್ಲಿರುವ ಮುಂಜಾಗ್ರತಾ ಸೂಚನಾ ಫಲಕಗಳಲ್ಲಿರುವ ಮಾಹಿತಿಗಳನ್ನು ಪಾಲಿಸಬೇಕು, ಮಕ್ಕಳಿಗೆ ವಾಹನಗಳನ್ನು ಚಾಲನೆ ಮಾಡಲು ಅವಕಾಶಗಳನ್ನು ನೀಡಬಾರದು, ವಾಹನ ಚಾಲನೆ ಮಾಡುವಾಗ ಮಧ್ಯಪಾನ ಮಾಡಬಾರದು, ಮೊಬೈಲ್ಗಳನ್ನು ಮಾತನಾಡುವುದನ್ನು ಮಾಡಬಾರದು ಇಂತಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಸ್ತೆಗಳಲ್ಲಿ ಆಗಬಹುದಾದಂತಹ ಅಪಘಾತಗಳನ್ನು ತಡೆಗಟ್ಟುವ ಮೂಲಕ ವಾಹನ ಸವಾರರು ತಮ್ಮ ಪ್ರಾಣಗಳನ್ನು ರಕ್ಷಣೆ ಮಾಡಿಕೊಳ್ಳುವ ಮೂಲಕ ಇತರರ ಪ್ರಾಣಗಳನ್ನು ಉಳಿಸಿ ರಕ್ಷಣೆ ಮಾಡಬೇಕು, ರಸ್ತೆಗಳಲ್ಲಿ ಇತ್ತಿಚೆಗೆ ರಾಗಿಯ ಬೆಳೆಗಳನ್ನು ಒಕ್ಕಣೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ಇದರಿಂದ ಅನೇಕ ಮಂದಿಯ ಪ್ರಾಣಗಳಿಗೆ ತೊಂದರೆಯಾಗುತ್ತಿದೆ, ರೈತರು ಒಕ್ಕಣೆ ಮಾಡಲು ಬೇರೆ ಸ್ಥಳಗಳನ್ನು ನಿಗದಿ ಮಾಡಿಕೊಳ್ಳಬೇಕು, ಈ ಬಗ್ಗೆ ರೈತ ಸಂಘಟನೆಗಳು ಗಮನಹರಿಸಿ ಜಾಗೃತಿ ಮೂಡಿಸಬೇಕು, ಇದೇ ಪರಿಸ್ಥಿತಿ ಮುಂದುವರೆಸಿದರೆ, ಯಾರು ರಸ್ತೆಗಳಲ್ಲಿ ಒಕ್ಕಣೆ ಮಾಡುತ್ತಾರೊ ಅಂತಹವರ ಮೇಲೆ ಕೇಸು ದಾಖಲಿಸಿ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ಹೇಳಿದರು.
ಎಸ್.ಎಲ್.ವಿ.ಮೋಟಾರ್ಸ್ ನವಮೋಹನ್, ಮಂಜುನಾಥ್, ಅಶೋಕ್ ಹಾಗೂ ಹಲವಾರು ಮಂದಿ ಆಟೋ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!